ಬಡ ಕುಟುಂಬ ಮನೆ ಕಟ್ಟಿಕೊಳ್ಳಲು ಶಾಸಕರ ನೆರವು
ಮಂಗಳೂರು, ಏ. 7 : ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವೊಂದಕ್ಕೆ ಶಾಸಕ ಜೆ.ಆರ್.ಲೋಬೋ ಅವರು ಹಣಕಾಸಿನ ಸಹಾಯ ಮಾಡಿ ಮಾನವೀಯತೆ ತೋರಿದ್ದಾರೆ. ಮನೆಯ ನಿರ್ಮಾಣ ಕಾರ್ಯಕ್ಕಾಗಿ 70 ಸಾವಿರ ರೂ.ಗಳ ಸಹಾಯ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಮರೋಳಿಯ ದಯಾಕರ ಬಂಗೇರ ಅವರು ಮನೆ ಕಳೆದುಕೊಂಡಿದ್ದರು. ಎರಡೂ ಕಾಲುಗಳನ್ನು ಕಳೆದುಕೊಂಡ ದಯಾಕರ ಅವರ ಮನೆಯನ್ನು ರಿಪೇರಿ ಮಾಡಿಸಿಕೊಳ್ಳುವಷ್ಟು ಶಕ್ತಿ ಹೊಂದಿರಲಿಲ್ಲ. [ಸಚಿವರ ಮಾನವೀಯತೆಗೆ ಸಲಾಂ]

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು ನಾಲ್ಕು ದಿನಗಳ ಹಿಂದೆ ಮರೋಳಿಗೆ ಭೇಟಿ ನೀಡಿ ದಯಾಕರ ಬಂಗೇರ ಅವರ ಮನೆಯ ಪರಿಶೀಲನೆ ನಡೆಸಿದ್ದರು. ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

ಮಂಗಳವಾರ ಶಾಸಕರು ದಯಾಕರ ಬಂಗೇರ ಅವರ ಕುಟುಂಬಕ್ಕೆ 70 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಮಾಡಿ, ಮನೆಯನ್ನು ಕಟ್ಟಿಕೊಳ್ಳಲು ನೆರವು ನೀಡಿದ್ದಾರೆ. ನಗರಪಾಲಿಕೆಯಿಂದ ಕುಟೀರ ಭಾಗ್ಯ ಯೋಜನೆ ಮೂಲಕ ಸುಮಾರು 10 ರಿಂದ 15 ಸಾವಿರ ರೂ. ನೆರವು ಕೊಡಿಸುವ ಭರವಸೆ ನೀಡಿದ್ದಾರೆ.












Click it and Unblock the Notifications