ಕಾಂತಾರ ಸಿನಿಮಾ ನೋಡಿ ಕರಾವಳಿ ಸಂಸ್ಕೃತಿ ತಿಳಿದುಕೊಂಡೆ: ಅಮಿತ್ ಶಾ
ಪುತ್ತೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾಚರಣೆಯಲ್ಲಿ ಪಾಲ್ಗೋಂಡ ಅಮಿತ್ ಶಾ, ಇದು ಅತ್ಯಂತ ಪುಣ್ಯಭೂಮಿಯಾಗಿದ್ದು, ವಿಶ್ವದಲ್ಲೇ ಕರ್ನಾಟಕದ ಕರಾವಳಿ ಹೆಸರುವಾಸಿಯಾಗಿದೆ ಎಂದರು.
ಪುತ್ತೂರು, ಫೆಬ್ರವರಿ 11: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ ಭೇಟಿ ನೀಡಿ ಕಾಂತಾರ ಸಿನಿಮಾವನ್ನು ಹೊಗಳಿದರು. ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ಕರಾವಳಿ ಸಂಸ್ಕೃತಿಯನ್ನು ತಿಳಿದುಕೊಂಡೆ ಎಂದು ಹೇಳಿದರು.
ಪುತ್ತೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾಚರಣೆಯಲ್ಲಿ ಪಾಲ್ಗೋಂಡ ಅಮಿತ್ ಶಾ, ಇದು ಅತ್ಯಂತ ಪುಣ್ಯಭೂಮಿಯಾಗಿದ್ದು, ವಿಶ್ವದಲ್ಲೇ ಕರ್ನಾಟಕದ ಕರಾವಳಿ ಹೆಸರುವಾಸಿಯಾಗಿದೆ. ಮಾತಿನ ಮಧ್ಯೆ ಕಾಂತಾರ ಸಿನಿಮಾವನ್ನು ನೆನಪಿಸಿಕೊಂಡ ಅಮಿತ್ ಶಾ ಕಾಂತಾರ ಸಿನಿಮಾದ ಹೆಸರು ಹೇಳಿದಾಗ ನೆರೆದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ನಾನು ಕಾಂತಾರ ಸಿನಿಮಾವನ್ನು ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ನನಗೆ ಇಲ್ಲಿನ ಜನರ ಸಂಸ್ಕೃತಿ ಗೊತ್ತಾಯ್ತು. ಕರ್ನಾಟಕದ ಕರಾವಳಿ ಪ್ರದೇಶ ಎಷ್ಟು ಸಮೃದ್ಧಿಯಾಗಿದೆ. ಮಂಗಳೂರು ಧಾರ್ಮಿಕ, ಸಂಸ್ಕೃತಿಯ ಪರಂಪರೆಯಿಂದ ಶ್ರೀಮಂತವಾಗಿದೆ. ಈ ಪುಣ್ಯಭೂಮಿಗೆ ನನ್ನ ನಮನಗಳು ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರನ್ನು ನಂಬಿವೆ. ಈ ಎರಡು ಪಕ್ಷಗಳು ಕರ್ನಾಟಕಕ್ಕೆ ಯಾವುದೇ ಒಳಿತನ್ನು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.
ಶನಿವಾರ ಪುತ್ತೂರಿಗೆ ಭೇಟಿ ನೀಡಿದ್ದ ಅಮಿತ್ ಶಾ ಅವರು, ಉಳ್ಳಾಲ ರಾಣಿ ಅಬ್ಬಕ್ಕ ಚೌಟದ, ರಾಜ್ಯದಲ್ಲಿ ಸಮೃದ್ಧ ಆಡಳಿತಕ್ಕಾಗಿ 16ನೇ ಶತಮಾನದ ತುಳುವ ರಾಣಿಯಿಂದ ಸ್ಫೂರ್ತಿ ಪಡೆದ ಆಡಳಿತಾರೂಢ ಬಿಜೆಪಿಯನ್ನು ಶ್ಲಾಘಿಸಿದರು. ವಿರೋಧ ಪಕ್ಷ ಕಾಂಗ್ರೆಸ್ ಭ್ರಷ್ಟವಾಗಿದ್ದು, ಕರ್ನಾಟಕವನ್ನು ಗಾಂಧಿ ಕುಟುಂಬಕ್ಕೆ ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್ (ಎಟಿಎಂ) ಆಗಿ ಬಳಸಿದೆ ಎಂದು ಆರೋಪಿಸಿದರು.

ನಾನು ಇಲ್ಲಿಗೆ ಬಂದು ನಿಮ್ಮನ್ನು ಕೇಳುತ್ತೇನೆ ಜನರು ಟಿಪ್ಪುವನ್ನು ನಂಬುವ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಮತ ಹಾಕಬೇಕೇ ಅಥವಾ ರಾಣಿ ಅಬ್ಬಕ್ಕನ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಹಾಕಬೇಕೆ ಎಂದು ಶಾ ಜನರನ್ನು ಕೇಳಿದರು. ಕರ್ನಾಟಕದಲ್ಲಿ ಮುಂದಿನ ಸರ್ಕಾರವನ್ನು ಯಾರು ರಚಿಸಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ದೇಶಭಕ್ತರ ತಂಡವಾಗಿರುವ ಬಿಜೆಪಿ ಅಥವಾ ಕರ್ನಾಟಕವನ್ನು ಗಾಂಧಿ ಕುಟುಂಬಕ್ಕೆ ಎಟಿಎಂ ಆಗಿ ಬಳಸಿರುವ ಭ್ರಷ್ಟ ಕಾಂಗ್ರೆಸ್?" ಎಂದು ಶಾ ನೆರೆದವರನ್ನು ಕೇಳಿದರು.
ದೇಶಾದ್ಯಂತ ರೈತರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರೈತರ ಪರವಾದ ಕ್ರಮಗಳಿಗಾಗಿ ನೆನಪಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಹೊಂದಿದ್ದಕ್ಕಾಗಿ ಇಡೀ ದೇಶವು ಯಡಿಯೂರಪ್ಪ ಅವರನ್ನು ಸ್ಮರಿಸುತ್ತದೆ ಎಂದು ಅವರು ಹೇಳಿದರು.












Click it and Unblock the Notifications