Get Updates
Get notified of breaking news, exclusive insights, and must-see stories!

ಮಂಗಳೂರು:ದಾನಿಗಳಾಗಿ ಕನ್ನಡ ಶಾಲೆ ಉಳಿಸಿ ಮೆಚ್ಚುಗೆ ಪಡೆದ ನಾಲ್ವರು ಶಿಕ್ಷಕರು

ಮಂಗಳೂರು, ಸೆಪ್ಟೆಂಬರ್‌ 27: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಶಿಕ್ಷಕರು ದಾನಿಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಶಾಲೆಯ ಶಿಕ್ಷಕರು ತಾವು ದುಡಿದ ಸಂಬಳದಲ್ಲಿ ವರ್ಷಕ್ಕೆ 1.20ಲಕ್ಷ ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿ ತಮ್ಮ ಶಾಲೆ ಉಳಿಸುವಲ್ಲಿ ಮಹಾದಾನಿಗಳಾಗಿದ್ದಾರೆ.

ಮಂಗಳೂರಿನ ಸಿಎಸ್ಐ ಚರ್ಚ್ ಅಡಿಯಲ್ಲಿ ಬರುವ ಗೋರಿಗುಡ್ಡದ ಯುಬಿಯಂಸಿ ಹಿರಿಯ ಪ್ರಾಥಮಿಕ ಶಾಲೆ, ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆ, ಕಿಟ್ಟೆಲ್ ಮೆಮೋರಿಯಲ್ ಪಿಯು ಕಾಲೇಜು ಸೇರಿದಂತೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Four Teachers Who Themselves Are Donors For The Survival Of The Kannada School At Mangaluru

ಪ್ರಾಥಮಿಕ ಶಾಲೆಯಲ್ಲಿ ಒಬ್ಬರು, ಪ್ರೌಢಶಾಲೆಯಲ್ಲಿ ನಾಲ್ವರು ಹಾಗೂ ಕಾಲೇಜಿನಲ್ಲಿ ಆರು ಖಾಯಂ ಪ್ರಾಧ್ಯಾಪಕರಿದ್ದಾರೆ. ಆದರೆ ಆಂಗ್ಲ ಮಾಧ್ಯಮ ಶಾಲೆಯ ಭರಾಟೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸೊರಗಿದಂತೆ ಈ ಶಾಲೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಿತು.

90ವರ್ಷಗಳ ಇತಿಹಾಸವಿರುವ ಪ್ರಾಥಮಿಕ ಶಾಲೆ,ನಾಲ್ಕು ದಶಕಗಳ ಹಳೆಯದಾದ ಪ್ರೌಢಶಾಲೆಯನ್ನು ಉಳಿಸುವತ್ತ ಶಿಕ್ಷಕರೇ ಚಿತ್ತ ಹರಿಸಿದರು. ಅದಕ್ಕಾಗಿ ಶ್ರೀಕೃಷ್ಣ ಎನ್ ಹಾಗೂ ಬಾಲಕೃಷ್ಣ ಎಂಬಿಬ್ಬರು ಶಿಕ್ಷಕರು ಚಿಕ್ಕಮಗಳೂರು, ಶಿವಮೊಗ್ಗದ ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕೂಲಿ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಕರೆತಂದು ಬಾಲಿಕಾಶ್ರಮದಲ್ಲಿ ಉಳಿಸಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡವಲ್ಲಿ ಶ್ರಮಿಸಿದರು.

ಅನುದಾನದ ಕೊರತೆಯಾಗಿರುವುದಕ್ಕೆ, ಅತಿಥಿ ಶಿಕ್ಷಕರಿಗೆ ಸಂಬಳ ಕೊಡಿಸಲು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶಿಕ್ಷಕರು ತಮ್ಮ ಪ್ರತೀ ತಿಂಗಳ ಸಂಬಳದಲ್ಲಿ ನಿಗದಿತ ಮೊತ್ತ ತೆಗೆದಿರಿಸುವ ಯೋಜನೆ ಕೈಗೊಂಡಿದ್ದಾರೆ.

ಸದ್ಯ ಪ್ರೌಢಶಾಲೆಯ ಹೆಚ್ಎಂ ವಜ್ರಕಾಂತಿ, ಶಿಕ್ಷಕರಾದ ಶ್ರೀಕೃಷ್ಣ ಎನ್, ಬಾಲಕೃಷ್ಣ ಹಾಗೂ ರಘುನಾಥ ಭಟ್ ಅವರು ಪ್ರತೀ ತಿಂಗಳು ತಮ್ಮ ಸಂಬಳದ ಮೊತ್ತದ 10 ಸಾವಿರ ರೂಪಾಯಿಯನ್ನು ಶಾಲೆಗೆ ದಾನ ನೀಡುತ್ತಿದ್ದಾರೆ. ಉಳಿದಂತೆ ಶಿಕ್ಷಕರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯೂ ತಮ್ಮ ಕೈಲಾದ ಮೊತ್ತವನ್ನು ಶಾಲೆಗೆ ನೀಡುತ್ತಿದ್ದಾರೆ.

ಈ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು, ಅನಾಥ ಮಕ್ಕಳೂ ಇದ್ದಾರೆ. ಅನುದಾನಿತ ಶಾಲೆಯಾದರೂ ಇಲ್ಲಿ ಶಿಕ್ಷಣದಿಂದ ಹಿಡಿದು, ಸಮವಸ್ತ್ರ, ಸ್ಕೂಲ್ ಬಸ್ ಚಾರ್ಜ್, ನೋಟ್ ಬುಕ್ಸ್, ಮಧ್ಯಾಹ್ನದ ಬಿಸಿಯೂಟ ಎಲ್ಲವೂ ಇಲ್ಲಿ ಉಚಿತ. ಇವೆಲ್ಲವೂ ಶಿಕ್ಷಕರ ದೇಣಿಗೆಯಿಂದ ಸಂದಾಯವಾಗುತ್ತದೆ.

ಶಾಲಾ ಬಸ್ ಡೀಸೆಲ್ ಹಾಗೂ ಚಾಲಕನ ಸಂಬಳ ತಿಂಗಳಿಗೆ 40 ಸಾವಿರವಾಗುತ್ತದೆ‌. ಜೊತೆಗೆ ಅತಿಥಿ ಶಿಕ್ಷಕರಿಗೆ ನೀಡುವ ಸಂಬಳವನ್ನೂ ಶಿಕ್ಷಕರ ದಾನದ ಹಣದಲ್ಲಿ ನೀಡಲಾಗುತ್ತದೆ. ಒಟ್ಟಿನಲ್ಲಿ ಕನ್ನಡ ಶಾಲೆಯ ಉಳಿಸಿ, ಬೆಳೆಸಬೇಕೆಂಬ ಶಿಕ್ಷಕರ ವಿನೂತನ ಪ್ರಯತ್ನ ಶ್ಲಾಘನೀಯ. ಇವರ ನಿಸ್ವಾರ್ಥ ಸೇವೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+