ಮಂಗಳೂರು:ದಾನಿಗಳಾಗಿ ಕನ್ನಡ ಶಾಲೆ ಉಳಿಸಿ ಮೆಚ್ಚುಗೆ ಪಡೆದ ನಾಲ್ವರು ಶಿಕ್ಷಕರು
ಮಂಗಳೂರು, ಸೆಪ್ಟೆಂಬರ್ 27: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಶಿಕ್ಷಕರು ದಾನಿಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಶಾಲೆಯ ಶಿಕ್ಷಕರು ತಾವು ದುಡಿದ ಸಂಬಳದಲ್ಲಿ ವರ್ಷಕ್ಕೆ 1.20ಲಕ್ಷ ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿ ತಮ್ಮ ಶಾಲೆ ಉಳಿಸುವಲ್ಲಿ ಮಹಾದಾನಿಗಳಾಗಿದ್ದಾರೆ.
ಮಂಗಳೂರಿನ ಸಿಎಸ್ಐ ಚರ್ಚ್ ಅಡಿಯಲ್ಲಿ ಬರುವ ಗೋರಿಗುಡ್ಡದ ಯುಬಿಯಂಸಿ ಹಿರಿಯ ಪ್ರಾಥಮಿಕ ಶಾಲೆ, ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆ, ಕಿಟ್ಟೆಲ್ ಮೆಮೋರಿಯಲ್ ಪಿಯು ಕಾಲೇಜು ಸೇರಿದಂತೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಒಬ್ಬರು, ಪ್ರೌಢಶಾಲೆಯಲ್ಲಿ ನಾಲ್ವರು ಹಾಗೂ ಕಾಲೇಜಿನಲ್ಲಿ ಆರು ಖಾಯಂ ಪ್ರಾಧ್ಯಾಪಕರಿದ್ದಾರೆ. ಆದರೆ ಆಂಗ್ಲ ಮಾಧ್ಯಮ ಶಾಲೆಯ ಭರಾಟೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸೊರಗಿದಂತೆ ಈ ಶಾಲೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಿತು.
90ವರ್ಷಗಳ ಇತಿಹಾಸವಿರುವ ಪ್ರಾಥಮಿಕ ಶಾಲೆ,ನಾಲ್ಕು ದಶಕಗಳ ಹಳೆಯದಾದ ಪ್ರೌಢಶಾಲೆಯನ್ನು ಉಳಿಸುವತ್ತ ಶಿಕ್ಷಕರೇ ಚಿತ್ತ ಹರಿಸಿದರು. ಅದಕ್ಕಾಗಿ ಶ್ರೀಕೃಷ್ಣ ಎನ್ ಹಾಗೂ ಬಾಲಕೃಷ್ಣ ಎಂಬಿಬ್ಬರು ಶಿಕ್ಷಕರು ಚಿಕ್ಕಮಗಳೂರು, ಶಿವಮೊಗ್ಗದ ಕಾಫಿ ಎಸ್ಟೇಟ್ಗಳಿಗೆ ಭೇಟಿ ನೀಡಿ ಅಲ್ಲಿನ ಕೂಲಿ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಕರೆತಂದು ಬಾಲಿಕಾಶ್ರಮದಲ್ಲಿ ಉಳಿಸಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡವಲ್ಲಿ ಶ್ರಮಿಸಿದರು.
ಅನುದಾನದ ಕೊರತೆಯಾಗಿರುವುದಕ್ಕೆ, ಅತಿಥಿ ಶಿಕ್ಷಕರಿಗೆ ಸಂಬಳ ಕೊಡಿಸಲು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶಿಕ್ಷಕರು ತಮ್ಮ ಪ್ರತೀ ತಿಂಗಳ ಸಂಬಳದಲ್ಲಿ ನಿಗದಿತ ಮೊತ್ತ ತೆಗೆದಿರಿಸುವ ಯೋಜನೆ ಕೈಗೊಂಡಿದ್ದಾರೆ.
ಸದ್ಯ ಪ್ರೌಢಶಾಲೆಯ ಹೆಚ್ಎಂ ವಜ್ರಕಾಂತಿ, ಶಿಕ್ಷಕರಾದ ಶ್ರೀಕೃಷ್ಣ ಎನ್, ಬಾಲಕೃಷ್ಣ ಹಾಗೂ ರಘುನಾಥ ಭಟ್ ಅವರು ಪ್ರತೀ ತಿಂಗಳು ತಮ್ಮ ಸಂಬಳದ ಮೊತ್ತದ 10 ಸಾವಿರ ರೂಪಾಯಿಯನ್ನು ಶಾಲೆಗೆ ದಾನ ನೀಡುತ್ತಿದ್ದಾರೆ. ಉಳಿದಂತೆ ಶಿಕ್ಷಕರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯೂ ತಮ್ಮ ಕೈಲಾದ ಮೊತ್ತವನ್ನು ಶಾಲೆಗೆ ನೀಡುತ್ತಿದ್ದಾರೆ.
ಈ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು, ಅನಾಥ ಮಕ್ಕಳೂ ಇದ್ದಾರೆ. ಅನುದಾನಿತ ಶಾಲೆಯಾದರೂ ಇಲ್ಲಿ ಶಿಕ್ಷಣದಿಂದ ಹಿಡಿದು, ಸಮವಸ್ತ್ರ, ಸ್ಕೂಲ್ ಬಸ್ ಚಾರ್ಜ್, ನೋಟ್ ಬುಕ್ಸ್, ಮಧ್ಯಾಹ್ನದ ಬಿಸಿಯೂಟ ಎಲ್ಲವೂ ಇಲ್ಲಿ ಉಚಿತ. ಇವೆಲ್ಲವೂ ಶಿಕ್ಷಕರ ದೇಣಿಗೆಯಿಂದ ಸಂದಾಯವಾಗುತ್ತದೆ.
ಶಾಲಾ ಬಸ್ ಡೀಸೆಲ್ ಹಾಗೂ ಚಾಲಕನ ಸಂಬಳ ತಿಂಗಳಿಗೆ 40 ಸಾವಿರವಾಗುತ್ತದೆ. ಜೊತೆಗೆ ಅತಿಥಿ ಶಿಕ್ಷಕರಿಗೆ ನೀಡುವ ಸಂಬಳವನ್ನೂ ಶಿಕ್ಷಕರ ದಾನದ ಹಣದಲ್ಲಿ ನೀಡಲಾಗುತ್ತದೆ. ಒಟ್ಟಿನಲ್ಲಿ ಕನ್ನಡ ಶಾಲೆಯ ಉಳಿಸಿ, ಬೆಳೆಸಬೇಕೆಂಬ ಶಿಕ್ಷಕರ ವಿನೂತನ ಪ್ರಯತ್ನ ಶ್ಲಾಘನೀಯ. ಇವರ ನಿಸ್ವಾರ್ಥ ಸೇವೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications