ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಸಾಂಸ್ಕೃತಿಕ ಲೋಕ ಅನಾವರಣ
ಮಂಗಳೂರು, ನವೆಂಬರ್.17: ಮೂರು ದಿನಗಳ ಕಾಲ ನಡೆಯುತ್ತಿರುವ ಸಾಹಿತ್ಯ ಜಾತ್ರೆಯ ಸಂಭ್ರಮ ಕಳೆಕಟ್ಟಿದೆ. ಕನ್ನಡ ನಾಡು-ನುಡಿ-ಜಲದ ಕುರಿತ ಗಂಭೀರ ಚಿಂತನೆಗೆ ವೇದಿಕೆಯಾಗುವ ಸಾಹಿತ್ಯ ಹಬ್ಬ ಆಳ್ವಾಸ್ ನುಡಿಸಿರಿಗೆ ವಿದ್ಯುಕ್ತ ಚಾಲನೆ ದೊರೆತಿದೆ.
ಮುಂಜಾನೆಯ ಚುಮು ಚುಮು ಚಳಿಯ ನಡುವೆ ಮಂಜಿನ ಹನಿ ಸೂರ್ಯನ ಕಿರಣಗಳ ಸ್ಪರ್ಶಕ್ಕೆ ಕರಗುತ್ತಿದ್ದಂತೆ ವಿದ್ಯಾಗಿರಿಯಲ್ಲಿ ಕನ್ನಡ ನಾಡು, ನುಡಿಯ ಸಾಂಸ್ಕೃತಿಕ ಲೋಕ ತೆರೆದು ಕೊಳ್ಳುತ್ತದೆ. ಮುಂಜಾನೆಯಿಂದ ಸೂರ್ಯಾಸ್ಥದವರೆಗೆ ಆಳ್ವಾಸ್ ನುಡಿಸಿರಿಯಲ್ಲಿ ಪುಟ್ಟ ಸಾಹಿತ್ಯ ಲೋಕ ಅನಾವರಣಗೊಳ್ಳಲಿದೆ.
ಈ ಸಮ್ಮೇಳನ ಕೇವಲ ಕನ್ನಡ ನಾಡು-ನುಡಿ-ಜನದ ಗಂಭೀರ ಚಿಂತನೆ, ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೆ ಕೃಷಿಯ ಅದ್ಭುತ ಲೋಕವೇ ತೆರೆದುಕೊಂಡಿದೆ. ಸಾಹಿತ್ಯ ಲೋಕದಲ್ಲಿ ಸಂಚರಿಸಿ ದಣಿದವರಿಗೆ ವಿಜ್ಞಾನ ಹಾಗೂ ಕೃಷಿ ಸಿರಿ ಕಣ್ಮನ ತಣಿಸುತ್ತಿದೆ. ಆಳ್ವಾಸ್ ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಊಟ ಉಪಚಾರದ ವ್ಯವಸ್ಥೆ ಬೆರಗು ಮೂಡಿಸುತ್ತದೆ.

ಜೈನರ ಶೈಲಿಯ ರುಚಿಕರ ಊಟ ಒಂದೆಡೆ ಸಾಹಿತ್ಯಾಸಕ್ತರ ಹೊಟ್ಟೆ ತಣಿಸಿದರೆ ಇನ್ನೊಂದೆಡೆ ಅಲ್ಲಲ್ಲಿ ನಡೆಯುತ್ತಿರುವ ಮನೋರಂಜನಾ ಕಾರ್ಯಕ್ರಮ ನೋಡುಗರ ಮನ ತಣಿಸುತ್ತದೆ.
ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್ ' ಚಿತ್ರದಲ್ಲಿ ಬರುವ ಓಂಗೋಲ್ ತಳಿಯ ಗೂಳಿ ಭಾರೀ ಗಾತ್ರದ್ದು. ಇದರ ವಯಸ್ಸು 6 ವರ್ಷ. ತೂಕ ಮಾತ್ರ ಬರೋಬ್ಬರಿ 1,462 ಕೆಜಿ. ಉಡುಪಿಯ ಬ್ರಹ್ಮಾವರದ ಮಾನಾಮಾ ಫಾರ್ಮ್ಸ್ ನವರು ಈ ಹೋರಿಯನ್ನು ನುಡಿಸಿರಿಯಲ್ಲಿ ಪ್ರದರ್ಶಿಸಿದ್ದಾರೆ.

ದಿನ ಒಂದಕ್ಕೆ ಈ ಗೂಳಿಯ ಸಾಕಣೆ ವೆಚ್ಚ ಸರಿಸುಮಾರು 650 ರೂಪಾಯಿ. ಜೋಳದ ಗಿಡ, ಹುಲ್ಲು, ಧಾನ್ಯ , ಬೆಣ್ಣೆ , ತುಪ್ಪ, ಒಣ ದ್ರಾಕ್ಷಿ , ಖರ್ಜೂರ, ಕಡ್ಲೆ ಹಿಂಡಿಯನ್ನು ಗೂಳಿ ಸೇವಿಸುತ್ತದೆ.
ಅಷ್ಟೇ ಅಲ್ಲ, ನುಡಿಸಿರಿ ಸಮ್ಮೇಳನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿನ ನಡುವೆ ಆಳ್ವಾಸ್ ನುಡಿಸಿರಿಯಲ್ಲಿರುವ ಪುಸ್ತಕ ಪ್ರದರ್ಶನ ಮಳಿಗೆಗಳು ಈ ಮಾತನ್ನು ಸುಳ್ಳಾಗಿಸಿವೆ.

ಇಲ್ಲಿನ 70 ಪುಸ್ತಕ ಮಳಿಗೆಗಳಲ್ಲಿಯೂ ಸಾಹಿತ್ಯಾಸಕ್ತರು ಇಣುಕುತ್ತಿದ್ದಾರೆ. ಸಾಹಿತ್ಯ ಜಾತ್ರೆಯೊಂದಿಗೆ ನುಡಿಸಿರಿಯಲ್ಲಿ ಕನ್ನಡ, ಪ್ರಾದೇಶಿಕ ಭಾಷಾ ಚಲನಚಿತ್ರಗಳು ಜನರ ಆಕರ್ಷಣೆಯ ಮುಖ್ಯ ಕೇಂದ್ರವಾಗಿವೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications