ಮೋದಿ ಮತ್ತು ಅಮಿತ್ ಶಾ ಸುಳ್ಳಿನ ಸರದಾರರು: ಖರ್ಗೆ ವಾಗ್ದಾಳಿ
ಮಂಡ್ಯ, ಮೇ 7: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸುಳ್ಳಿನ ಸರದಾರರು. ಕರ್ನಾಟಕದ ಎಲ್ಲಾ ಕಡೆ ಬರುತ್ತಿದ್ದಾರೆ. ಅಲ್ಲೆಲ್ಲಾ ಬರೀ ಸುಳ್ಳುಗಳನ್ನು ಹೇಳಿ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿದ ಅವರು, "ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಪ್ರತಿ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ದರು. ಒಂದು ಪೈಸೆಯನ್ನಾದರೂ ಹಾಕಿದ್ದಾರಾ? 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ?" ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದ ಸರಕಾರ ನಮ್ಮದು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಾನಾ ಭಾಗ್ಯಗಳ ಮೂಲಕ ಎಲ್ಲ ವರ್ಗದ ಜನರ ಹಿತ ಕಾಯುತ್ತಿದೆ. ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸಿದೆ. ಆದರೆ, ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಚಪ್ಪಾಳೆ ಗಿಟ್ಟಿಸುವ ಭಾಷಣ ಮಾಡಿ ಬಿಜೆಪಿ ನಾಯಕರು ಮನೆಗೆ ಹೋಗುತ್ತಿದ್ದಾರೆ ಎಂದು ಅವರು ಟೀಕಿಸಿದರು.
"ಜೆಡಿಎಸ್ ಓಡುವ ಕುದುರೆಗೆ ತೊಡರುಗಾಲು ಕೊಡುವವರಿದ್ದಂತೆ. ಎಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳಿದ್ದಾರೋ ಅಲ್ಲೆಲ್ಲಾ ಅಡ್ಡಗಾಲು ಕೊಡುವುದೇ ಜೆಡಿಎಸ್ ಕೆಲಸ. ದೇಶದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿಯಿರುವುದು ಕಾಂಗ್ರೆಸ್ಗೆ ಮಾತ್ರ. ಹೀಗಾಗಿ ಮತದಾರರು ಬಿಜೆಪಿ ಬೆಂಬಲಿಸಿದರೆ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ," ಎಂದರು.
ಇದಕ್ಕೂ
ಮುನ್ನ
ಮಲ್ಲಿಕಾರ್ಜುನ
ಖರ್ಗೆ
ಅವರು
ಮಳವಳ್ಳಿಗೆ
ಹೆಲಿಕ್ಯಾಪ್ಟರ್
ಮೂಲಕ
ಆಗಮಿಸಿದ
ವೇಳೆ
ಅವರು
ಪ್ರಯಾಣಿಸಿದ
ಹೆಲಿಕ್ಯಾಪ್ಟರನ್ನು
ಚುನಾವಣಾ
ಪ್ಲೈಯಿಂಗ್
ಸ್ಕ್ವಾಡ್
ತಪಾಸಣೆ
ನಡೆಸಿತು.
ಮಲ್ಲಿಕಾರ್ಜುನ
ಖರ್ಗೆ
ಅವರು
ಮಳವಳ್ಳಿ
ಮೀಸಲು
ಕ್ಷೇತ್ರದ
ಕಾಂಗ್ರೆಸ್
ಅಭ್ಯರ್ಥಿ
ಪಿ.ಎಂ.
ನರೇಂದ್ರಸ್ವಾಮಿ
ಪರ
ಪ್ರಚಾರ
ನಡೆಸಲು
ಆಗಮಿಸಿದ
ವೇಳೆ
ಚುನಾವಣಾ
ಸಿಬ್ಬಂದಿ
ಹೆಲಿಕ್ಯಾಪ್ಟರ್
ತಪಾಸಣೆ
ನಡೆಸಿದರು.