Get Updates
Get notified of breaking news, exclusive insights, and must-see stories!

ಸುಮ್ಮನೆ ಗಾಸಿಪ್ ಹಬ್ಬಿಸಬೇಡಿ:ಯೋಧ ಗುರು ಪತ್ನಿ ಕಲಾವತಿ ಮನವಿ

Recommended Video

      ಯೋಧ ಗುರು ಪತ್ನಿ ಕಲಾವತಿ ಮನವಿ | Oneindia Kannada

      ಮೈಸೂರು, ಫೆಬ್ರವರಿ 28: ಪುಲ್ವಾಮಾ ದಾಳಿಯಲ್ಲಿ ಶತ್ರುಗಳ ಅಟ್ಟಹಾಸಕ್ಕೆ ಬಲಿಯಾದ ವೀರಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಕುಟುಂಬ ಸದ್ಯ ದುಃಖದ ಮಡುವಿನಲ್ಲಿದೆ.

      ಇದರ ನಡುವೆಯೇ ಗುರು ಕುಟುಂಬದಲ್ಲಿ ಹಣಕ್ಕಾಗಿ ಕಲಹ ನಡೆಯುತ್ತಿದೆ ಎಂಬ ಮಾತು ಗುರು ಕುಟುಂಬದವರಿಗೆ ಬೇಸರ ತರಿಸಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವಂತೆ ಕೋಟಿ, ಕೋಟಿ ಹಣ ಗುರು ಕುಟುಂಬಕ್ಕೆ ಹೋಗಿದೆ ಎಂಬುದನ್ನು ಸ್ವತಃ ಯೋಧ ಗುರು ಅವರ ಪತ್ನಿ ತಳ್ಳಿ ಹಾಕಿದ್ದಾರೆ.

      ಒಂದು ಮೂಲದ ಪ್ರಕಾರ ಗುರು ಕುಟುಂಬಕ್ಕೆ ಅಂದಾಜು 7 - 8 ಕೋಟಿ ಬಂದಿರಬಹುದು. ಭಾಗಶಃ ಎಲ್ಲರೂ ಸಹ ಚೆಕ್ ರೂಪದಲ್ಲಿಯೇ ಕುಟುಂಬಸ್ಥರಿಗೆ ಹಣವನ್ನು ನೀಡುತ್ತಿದ್ದಾರೆ.

      ಅಂದಹಾಗೆ ನಿನ್ನೆಯಿಂದ ಕೆಲವು ಮಾಧ್ಯಮಗಳಲ್ಲಿ ಹಣ ಹಂಚಿಕೆ ಬಗ್ಗೆ ಗುರು ಕುಟುಂಬದಲ್ಲಿ ಜಗಳ ಶುರುವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗುರು ಪತ್ನಿಗೆ ಮತ್ತೊಂದು ಮದುವೆ ಮಾಡುವ ವಿಚಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

      ಆದರೆ, ಇದೆಲ್ಲವನ್ನೂ ಗುರು ಪತ್ನಿ ಕಲಾವತಿ ಒಪ್ಪುತ್ತಿಲ್ಲ. "ಇವೆಲ್ಲವೂ ಸತ್ಯಕ್ಕೆ ದೂರವಾದ್ದು, ನಮ್ಮ ಮೇಲೆ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಹಾಗಾದರೆ ಯೋಧ ಗುರು ಅವರ ಪತ್ನಿ ಕಲಾವತಿ ಹೇಳುವುದೇನು ಮುಂದೆ ಓದಿ...

       ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ

      ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ

      "ನಮ್ಮ ಕುಟುಂಬದವರ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ದೂರು ನೀಡಲಾಗುವುದು. ನಮ್ಮ ಯಜಮಾನರ ಸಾವಿನ ವಿಚಾರ ಮುಂದಿಟ್ಟು ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ. ಹಣ ಎಲ್ಲವನ್ನು ವಾಪಸ್ ನೀಡುತ್ತೇವೆ. ನನಗೆ ನನ್ನ ಯಜಮಾನರು ಸಿಗುತ್ತಾರಾ? ಹೇಳಿ..." ಎಂದು ದುಃಖದಿಂದ ರೋಧಿಸುತ್ತಾರೆ ಕಲಾವತಿ.

      ಯಾವ ಬ್ಯಾಂಕಿಗೂ ಹೋಗಿಲ್ಲ

      ಯಾವ ಬ್ಯಾಂಕಿಗೂ ಹೋಗಿಲ್ಲ

      "ನಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ತಿಥಿ ಕಾರ್ಯ ನಡೆದಿದೆ. ನಾನು ಹೊರಗೆಯೇ ಬಂದಿಲ್ಲ. ನಾನು ಯಾವ ಬ್ಯಾಂಕಿಗೂ ಹೋಗಿಲ್ಲ. ಪರಿಹಾರ ನೀಡಿ ಎಂದು ಯಾರ ಬಳಿಯೂ ಕೇಳಿಲ್ಲ. ಈ ವಿಚಾರದ ಬಗ್ಗೆ ಮಾತು ಸಹ ಆಡಿಲ್ಲ" ಎನ್ನುತ್ತಾರೆ ಕಲಾವತಿ.

      ಮತ್ತಷ್ಟು ನೋವು ಕೊಡಬೇಡಿ

      ಮತ್ತಷ್ಟು ನೋವು ಕೊಡಬೇಡಿ

      "ಮೊದಲೇ ನೋವಿನಲ್ಲಿರುವ ನಮಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತಷ್ಟು ನೋವು ಕೊಡಬೇಡಿ ಎಂದ ಕಲಾವತಿ, ನಮ್ಮನ್ನು ಕೇಳದೆ ಯಾರೂ ಯಾವುದನ್ನೂ ಪ್ರಚಾರ ಮಾಡಬೇಡಿ. ಹಿಂದೆ-ಮುಂದೆ ತಿಳಿಯದೆ ಗಾಸಿಪ್ ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.

      ಜನರ ಮನಸ್ಥಿತಿಗೆ ಏನು ಹೇಳಲಿ?

      ಜನರ ಮನಸ್ಥಿತಿಗೆ ಏನು ಹೇಳಲಿ?

      "ನಾವು ಜಗಳವಾಡಿದ್ದೇವೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ?.ಸಾವಿನ ಮನೆಯಲ್ಲೂ ದ್ವೇಷ ಕಾರುವ ನಮ್ಮ ಜನರ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ ಎಂದು ಬೇಸರದಿಂದಲೇ ನುಡಿದರು ಯೋಧ ಗುರು ಪತ್ನಿ ಕಲಾವತಿ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+