ಸುಮ್ಮನೆ ಗಾಸಿಪ್ ಹಬ್ಬಿಸಬೇಡಿ:ಯೋಧ ಗುರು ಪತ್ನಿ ಕಲಾವತಿ ಮನವಿ
Recommended Video

ಮೈಸೂರು, ಫೆಬ್ರವರಿ 28: ಪುಲ್ವಾಮಾ ದಾಳಿಯಲ್ಲಿ ಶತ್ರುಗಳ ಅಟ್ಟಹಾಸಕ್ಕೆ ಬಲಿಯಾದ ವೀರಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಕುಟುಂಬ ಸದ್ಯ ದುಃಖದ ಮಡುವಿನಲ್ಲಿದೆ.
ಇದರ ನಡುವೆಯೇ ಗುರು ಕುಟುಂಬದಲ್ಲಿ ಹಣಕ್ಕಾಗಿ ಕಲಹ ನಡೆಯುತ್ತಿದೆ ಎಂಬ ಮಾತು ಗುರು ಕುಟುಂಬದವರಿಗೆ ಬೇಸರ ತರಿಸಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವಂತೆ ಕೋಟಿ, ಕೋಟಿ ಹಣ ಗುರು ಕುಟುಂಬಕ್ಕೆ ಹೋಗಿದೆ ಎಂಬುದನ್ನು ಸ್ವತಃ ಯೋಧ ಗುರು ಅವರ ಪತ್ನಿ ತಳ್ಳಿ ಹಾಕಿದ್ದಾರೆ.
ಒಂದು ಮೂಲದ ಪ್ರಕಾರ ಗುರು ಕುಟುಂಬಕ್ಕೆ ಅಂದಾಜು 7 - 8 ಕೋಟಿ ಬಂದಿರಬಹುದು. ಭಾಗಶಃ ಎಲ್ಲರೂ ಸಹ ಚೆಕ್ ರೂಪದಲ್ಲಿಯೇ ಕುಟುಂಬಸ್ಥರಿಗೆ ಹಣವನ್ನು ನೀಡುತ್ತಿದ್ದಾರೆ.
ಅಂದಹಾಗೆ ನಿನ್ನೆಯಿಂದ ಕೆಲವು ಮಾಧ್ಯಮಗಳಲ್ಲಿ ಹಣ ಹಂಚಿಕೆ ಬಗ್ಗೆ ಗುರು ಕುಟುಂಬದಲ್ಲಿ ಜಗಳ ಶುರುವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗುರು ಪತ್ನಿಗೆ ಮತ್ತೊಂದು ಮದುವೆ ಮಾಡುವ ವಿಚಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಆದರೆ, ಇದೆಲ್ಲವನ್ನೂ ಗುರು ಪತ್ನಿ ಕಲಾವತಿ ಒಪ್ಪುತ್ತಿಲ್ಲ. "ಇವೆಲ್ಲವೂ ಸತ್ಯಕ್ಕೆ ದೂರವಾದ್ದು, ನಮ್ಮ ಮೇಲೆ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಹಾಗಾದರೆ ಯೋಧ ಗುರು ಅವರ ಪತ್ನಿ ಕಲಾವತಿ ಹೇಳುವುದೇನು ಮುಂದೆ ಓದಿ...

ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ
"ನಮ್ಮ ಕುಟುಂಬದವರ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ದೂರು ನೀಡಲಾಗುವುದು. ನಮ್ಮ ಯಜಮಾನರ ಸಾವಿನ ವಿಚಾರ ಮುಂದಿಟ್ಟು ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ. ಹಣ ಎಲ್ಲವನ್ನು ವಾಪಸ್ ನೀಡುತ್ತೇವೆ. ನನಗೆ ನನ್ನ ಯಜಮಾನರು ಸಿಗುತ್ತಾರಾ? ಹೇಳಿ..." ಎಂದು ದುಃಖದಿಂದ ರೋಧಿಸುತ್ತಾರೆ ಕಲಾವತಿ.

ಯಾವ ಬ್ಯಾಂಕಿಗೂ ಹೋಗಿಲ್ಲ
"ನಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ತಿಥಿ ಕಾರ್ಯ ನಡೆದಿದೆ. ನಾನು ಹೊರಗೆಯೇ ಬಂದಿಲ್ಲ. ನಾನು ಯಾವ ಬ್ಯಾಂಕಿಗೂ ಹೋಗಿಲ್ಲ. ಪರಿಹಾರ ನೀಡಿ ಎಂದು ಯಾರ ಬಳಿಯೂ ಕೇಳಿಲ್ಲ. ಈ ವಿಚಾರದ ಬಗ್ಗೆ ಮಾತು ಸಹ ಆಡಿಲ್ಲ" ಎನ್ನುತ್ತಾರೆ ಕಲಾವತಿ.

ಮತ್ತಷ್ಟು ನೋವು ಕೊಡಬೇಡಿ
"ಮೊದಲೇ ನೋವಿನಲ್ಲಿರುವ ನಮಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತಷ್ಟು ನೋವು ಕೊಡಬೇಡಿ ಎಂದ ಕಲಾವತಿ, ನಮ್ಮನ್ನು ಕೇಳದೆ ಯಾರೂ ಯಾವುದನ್ನೂ ಪ್ರಚಾರ ಮಾಡಬೇಡಿ. ಹಿಂದೆ-ಮುಂದೆ ತಿಳಿಯದೆ ಗಾಸಿಪ್ ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.

ಜನರ ಮನಸ್ಥಿತಿಗೆ ಏನು ಹೇಳಲಿ?
"ನಾವು ಜಗಳವಾಡಿದ್ದೇವೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ?.ಸಾವಿನ ಮನೆಯಲ್ಲೂ ದ್ವೇಷ ಕಾರುವ ನಮ್ಮ ಜನರ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ ಎಂದು ಬೇಸರದಿಂದಲೇ ನುಡಿದರು ಯೋಧ ಗುರು ಪತ್ನಿ ಕಲಾವತಿ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications