ಸುಮ್ಮನೆ ಗಾಸಿಪ್ ಹಬ್ಬಿಸಬೇಡಿ:ಯೋಧ ಗುರು ಪತ್ನಿ ಕಲಾವತಿ ಮನವಿ
Recommended Video

ಮೈಸೂರು, ಫೆಬ್ರವರಿ 28: ಪುಲ್ವಾಮಾ ದಾಳಿಯಲ್ಲಿ ಶತ್ರುಗಳ ಅಟ್ಟಹಾಸಕ್ಕೆ ಬಲಿಯಾದ ವೀರಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಕುಟುಂಬ ಸದ್ಯ ದುಃಖದ ಮಡುವಿನಲ್ಲಿದೆ.
ಇದರ ನಡುವೆಯೇ ಗುರು ಕುಟುಂಬದಲ್ಲಿ ಹಣಕ್ಕಾಗಿ ಕಲಹ ನಡೆಯುತ್ತಿದೆ ಎಂಬ ಮಾತು ಗುರು ಕುಟುಂಬದವರಿಗೆ ಬೇಸರ ತರಿಸಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವಂತೆ ಕೋಟಿ, ಕೋಟಿ ಹಣ ಗುರು ಕುಟುಂಬಕ್ಕೆ ಹೋಗಿದೆ ಎಂಬುದನ್ನು ಸ್ವತಃ ಯೋಧ ಗುರು ಅವರ ಪತ್ನಿ ತಳ್ಳಿ ಹಾಕಿದ್ದಾರೆ.
ಒಂದು ಮೂಲದ ಪ್ರಕಾರ ಗುರು ಕುಟುಂಬಕ್ಕೆ ಅಂದಾಜು 7 - 8 ಕೋಟಿ ಬಂದಿರಬಹುದು. ಭಾಗಶಃ ಎಲ್ಲರೂ ಸಹ ಚೆಕ್ ರೂಪದಲ್ಲಿಯೇ ಕುಟುಂಬಸ್ಥರಿಗೆ ಹಣವನ್ನು ನೀಡುತ್ತಿದ್ದಾರೆ.
ಅಂದಹಾಗೆ ನಿನ್ನೆಯಿಂದ ಕೆಲವು ಮಾಧ್ಯಮಗಳಲ್ಲಿ ಹಣ ಹಂಚಿಕೆ ಬಗ್ಗೆ ಗುರು ಕುಟುಂಬದಲ್ಲಿ ಜಗಳ ಶುರುವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗುರು ಪತ್ನಿಗೆ ಮತ್ತೊಂದು ಮದುವೆ ಮಾಡುವ ವಿಚಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಆದರೆ, ಇದೆಲ್ಲವನ್ನೂ ಗುರು ಪತ್ನಿ ಕಲಾವತಿ ಒಪ್ಪುತ್ತಿಲ್ಲ. "ಇವೆಲ್ಲವೂ ಸತ್ಯಕ್ಕೆ ದೂರವಾದ್ದು, ನಮ್ಮ ಮೇಲೆ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಹಾಗಾದರೆ ಯೋಧ ಗುರು ಅವರ ಪತ್ನಿ ಕಲಾವತಿ ಹೇಳುವುದೇನು ಮುಂದೆ ಓದಿ...

ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ
"ನಮ್ಮ ಕುಟುಂಬದವರ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ದೂರು ನೀಡಲಾಗುವುದು. ನಮ್ಮ ಯಜಮಾನರ ಸಾವಿನ ವಿಚಾರ ಮುಂದಿಟ್ಟು ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ. ಹಣ ಎಲ್ಲವನ್ನು ವಾಪಸ್ ನೀಡುತ್ತೇವೆ. ನನಗೆ ನನ್ನ ಯಜಮಾನರು ಸಿಗುತ್ತಾರಾ? ಹೇಳಿ..." ಎಂದು ದುಃಖದಿಂದ ರೋಧಿಸುತ್ತಾರೆ ಕಲಾವತಿ.

ಯಾವ ಬ್ಯಾಂಕಿಗೂ ಹೋಗಿಲ್ಲ
"ನಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ತಿಥಿ ಕಾರ್ಯ ನಡೆದಿದೆ. ನಾನು ಹೊರಗೆಯೇ ಬಂದಿಲ್ಲ. ನಾನು ಯಾವ ಬ್ಯಾಂಕಿಗೂ ಹೋಗಿಲ್ಲ. ಪರಿಹಾರ ನೀಡಿ ಎಂದು ಯಾರ ಬಳಿಯೂ ಕೇಳಿಲ್ಲ. ಈ ವಿಚಾರದ ಬಗ್ಗೆ ಮಾತು ಸಹ ಆಡಿಲ್ಲ" ಎನ್ನುತ್ತಾರೆ ಕಲಾವತಿ.

ಮತ್ತಷ್ಟು ನೋವು ಕೊಡಬೇಡಿ
"ಮೊದಲೇ ನೋವಿನಲ್ಲಿರುವ ನಮಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತಷ್ಟು ನೋವು ಕೊಡಬೇಡಿ ಎಂದ ಕಲಾವತಿ, ನಮ್ಮನ್ನು ಕೇಳದೆ ಯಾರೂ ಯಾವುದನ್ನೂ ಪ್ರಚಾರ ಮಾಡಬೇಡಿ. ಹಿಂದೆ-ಮುಂದೆ ತಿಳಿಯದೆ ಗಾಸಿಪ್ ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.

ಜನರ ಮನಸ್ಥಿತಿಗೆ ಏನು ಹೇಳಲಿ?
"ನಾವು ಜಗಳವಾಡಿದ್ದೇವೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ?.ಸಾವಿನ ಮನೆಯಲ್ಲೂ ದ್ವೇಷ ಕಾರುವ ನಮ್ಮ ಜನರ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ ಎಂದು ಬೇಸರದಿಂದಲೇ ನುಡಿದರು ಯೋಧ ಗುರು ಪತ್ನಿ ಕಲಾವತಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications