ಮಂಡ್ಯ: ಬಹಿರಂಗ ಚರ್ಚೆಯಲ್ಲಿ ಜಂಗಿ ಕುಸ್ತಿ ಮಾಡ್ತಾರಾ ಪುಟ್ಟರಾಜು-ಚಲುವರಾಯಸ್ವಾಮಿ?
ಮಂಡ್ಯ, ಅಕ್ಟೋಬರ್ 11: ಮಂಡ್ಯ ಕ್ಷೇತ್ರದ ಇಬ್ಬರು ಪ್ರಮುಖ ನಾಯಕರ ರಾಜಕೀಯ ಸಂಘರ್ಷ ಸದ್ಯಕ್ಕೆ ಬಗೆಹರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.
ತಮ್ಮಿಂದಾಗಿ ಚಲುವರಾಯಸ್ವಾಮಿ ರಾಜಕೀಯದಲ್ಲಿ ಮುಂದೆಬರಲು ಸಾಧ್ಯವಾಯಿತು ಎಂದಿರುವ ಪುಟ್ಟರಾಜು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಇಬ್ಬರ ಮಧ್ಯೆ ಒಂದು ವಾರದಿಂದ ಸತತವಾಗಿ ವಾಗ್ದಾಳಿಗಳು ನಡೆಯುತ್ತಿವೆ. ಉಪಚುನಾವಣೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಚಿವ ಸಿ.ಎಸ್. ಪುಟ್ಟರಾಜು ಮತ್ತು ಚಲುವರಾಯಸ್ವಾಮಿ ಅವರ ನಡುವಣ ರಾಜಕೀಯ ವೈಷಮ್ಯ ಪರಸ್ಪರ ಕೆಂಡಕಾರುವಂತಹ ಹೇಳಿಕೆಗಳ ಮೂಲಕ ವ್ಯಕ್ತವಾಗುತ್ತಿದೆ.

ಕಾಲು ಹಿಡಿದು ಅಧಿಕಾರ ಕೊಡಿಸಿದ್ದೆ
ಚಲುವರಾಯಸ್ವಾಮಿ ಮತ್ತು ನಾನು ಸ್ನೇಹಿತರು. ಆದರೆ, ರಾಜಕೀಯದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಅವರ ರಾಜಕೀಯದ ಬದುಕಿನಲ್ಲಿ ಮುಂದೆ ಬರಲು ನನ್ನ ಪಾತ್ರವನ್ನು ಅವರು ಮರೆಯುವಂತಿಲ್ಲ. ಅವರಿಗೆ ರಾಜಕೀಯದ ಶಕ್ತಿ ತುಂಬಿದವರಾರು ಎಂದು ಹೇಳಲಿ. ಜನಪ್ರತಿನಿಧಿಗಳ ಕಾಲು ಹಿಡಿದು ಅವರನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದ್ದೆ. ಇದಕ್ಕೆ ಮಾಜಿ ಶಾಸಕ ಎಚ್.ಬಿ. ರಾಮು ಅವರೇ ಸಾಕ್ಷಿ. ಬೇಕಿದ್ದರೆ ಅವರ ನೇತೃತ್ವದಲ್ಲಿಯೇ ಚರ್ಚೆ ನಡೆಯಲಿ ಎಂದು ಪುಟ್ಟರಾಜು ಹೇಳಿದ್ದಾರೆ.

ಬಹಿರಂಗ ಚರ್ಚೆಗೆ ಸಿದ್ಧ
ರಾಜಕೀಯದಲ್ಲಿ ಚಲುವರಾಯಸ್ವಾಮಿ ನನಗೆ ಏನೇನು ತೊಂದರೆ ಕೊಟ್ಟರು, ಅವರ ಬಗ್ಗೆ ನಾನು ಏನೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಅಲ್ಲಿಯೇ ಅವರ ಹೇಳಿಕೆಗಳಿಗೆ ಉತ್ತರ ನೀಡುತ್ತೇನೆ. ಯಾರೋ ಇನ್ನೊಬ್ಬರ ಮೂಲಕ ಅವರಿಗೆ ಉತ್ತರ ಕೊಡುವ ಅಗತ್ಯವಿದೆ ಎಂದು ಪುಟ್ಟರಾಜು ಹೇಳಿದರು.

ತಲೆ ಸರಿಯಾಗಿದ್ದರಿಂದಲೇ ಗೆಲ್ಲಿಸಿದರು
ನನ್ನ ತಲೆ ಚೆನ್ನಾಗಿದೆ. ನನ್ನ ತಲೆಯಲ್ಲಿ ಮೆದುಳು ಇರೋದಕ್ಕೇ ಜನರು ನನ್ನನ್ನು ಗೆಲ್ಲಿಸಿದರು. ಚಲುವರಾಯಸ್ವಾಮಿ ತಮ್ಮ ತಲೆಯನ್ನು ಸರಿಮಾಡಿಸಿಕೊಳ್ಳಬೇಕಿದೆ. ಇಲ್ಲವೇ ನಾವೇ ಸರಿಮಾಡುತ್ತೇವೆ ಎಂದು ಪುಟ್ಟರಾಜು ಟಾಂಗ್ ನೀಡಿದರು.
ಪುಟ್ಟರಾಜು ಅವರು ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತಾಡಲಿ ಎಂದು ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.

ಸೋಲಿಸಿ ಸುಮ್ಮನಿರಪ್ಪ ಎಂದಿದ್ದಾರೆ
ಸತ್ತ ಕುದುರೆ ಮಾತನಾಡುತ್ತಿವೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಪುಟ್ಟರಾಜು, ಸೋತವರು ಸತ್ತ ರೀತಿಯಲ್ಲಿ ರಾಜಕಾರಣ ಮಾಡಬೇಕಿದೆ ಎಂದರು.
ನಾಗಮಂಗಲ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜನರು ಚಲುವರಾಯಸ್ವಾಮಿ ಅವರನ್ನು ಸೋಲಿಸಿ ಸುಮ್ಮನಿರಪ್ಪ ಎಂದಿದ್ದರು. ಅವರಿಗೆ ಅಗೌರವ ತೋರಿಸುವ ಸಲುವಾಗಿ ನಾನು ಅವರನ್ನು ಟೀಕಿಸಿಲ್ಲ ಎಂದು ಸ್ಪಷ್ಟಡಿಸಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications