Yogi Adityanath: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಕ್ಕರೆ ನಾಡು ಮಂಡ್ಯವನ್ನು ಕನ್ನಡದಲ್ಲಿ ಬಣ್ಣಿಸಿದ್ದು ಹೀಗೆ
ಮಂಡ್ಯ, ಏಪ್ರಿಲ್, 26: ವಿಧಾನಸಭೆ ಚುನವಾಣೆ ಹಿನ್ನೆಲೆ ಸಕ್ಕರೆ ನಾಡು ಮಂಡ್ಯಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರವನ್ನು ಕೈಗೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮಂಡ್ಯದ ಸ್ವಿಲ್ವರ್ ಜ್ಯುಬಲಿ ಪಾರ್ಕ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಭಾಷಣವನ್ನು ಶುರು ಮಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವೇಳೆ ಆದಿ ಚುಂಚನಗಿರಿಗೆ ನನ್ನ ನಮಸ್ಕಾರಗಳು, ಮಂಡ್ಯದ ಉತ್ಸಾಹಿ ಕಾರ್ಯಕರ್ತರಿಗೆ ನಮಸ್ಕರಿಸುತ್ತೇನೆ. ಇಂದು ಮಂಡ್ಯದಲ್ಲಿ ನಾನು ಬಂದಿರುವುದು ಬಹಳ ಸಂತಸ ತಂದಿದೆ.

ಮಂಡ್ಯ ಹಾಗೂ ಉತ್ತರ ಪ್ರದೇಶದ ಸಂಬಂಧ ತೇತ್ರಾಯುಗದಿಂದ ಒಂದಕ್ಕೊಂದು ಬೆಸೆದುಕೊಂಡಿವೆ. ಶ್ರೀರಾಮ ಹಾಗೂ ಆಂಜನೆಯ ವನವಾಸದ ಕುರುಹುಗಳು ಮಂಡ್ಯದಲ್ಲಿ ಇದೆ ಎಂದು ಹೇಳಿದರು. ಹೀಗೆ ಯೋಗಿ ಆದಿತ್ಯನಾಥ್ ಅವರ ಕನ್ನಡದ ಭಾಷಣ ಕೇಳಿದ ಜನರು ಅವರ ಪರ ಜೈಘೋಷವನ್ನು ಮೊಳಗಿಸಿದರು.












Click it and Unblock the Notifications