ಮದ್ದೂರಿನಲ್ಲಿ ಗುಂಪು ಘರ್ಷಣೆ: ಇಬ್ಬರ ಕೊಲೆ, ಐವರ ಬಂಧನ
ಮದ್ದೂರು, ಡಿಸೆಂಬರ್ 26: ಚುನಾವಣೆಗೆ ಹಾಕಿದ್ದ ಫ್ಲೆಕ್ಸ್ ಹರಿದ ಘಟನೆ ಕುರಿತು ಮದ್ದೂರು ತಾಲ್ಲೂಕಿನ ತೊಪ್ಪನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು ಈ ಕುರಿತು ಐವರನ್ನು ಬಂಧಿಸಲಾಗಿದೆ
ತೊಪ್ಪನಹಳ್ಳಿಯ ಪುಟ್ಟಸ್ವಾಮಿ ಅವರ ಮಗ ನಂದೀಶ್ (18), ಹೊನ್ನಯ್ಯ ಅವರ ಮಗ ಮುತ್ತುರಾಜು ಆಲಿಯಾಸ್ ಕೋಟಿ (45) ಚುನಾವಣೆಯ ಗುಂಪು ಘರ್ಷಣೆಗೆ ಬಲಿಯಾದವರು.[ರಾತ್ರೋರಾತ್ರಿ ಟಿಪ್ಪು ಚೌಕ್ ನಿರ್ಮಾಣ: ಗುಂಪು ಘರ್ಷಣೆ]
ಕೊಲೆಯಾಗಿರುವ ನಂದೀಶ್, ಮುತ್ತುರಾಜು ಮತ್ತು ರಾಮಲಿಂಗು ನೇತೃತ್ವದ ಮತ್ತೊಂದು ಗುಂಪಿನ ನಡುವೆ ಕಳೆದ ಗ್ರಾ.ಪಂ ಚುನಾವಣೆ ಸಮಯದಲ್ಲಿ ಜಗಳ ನಡೆದಿತ್ತು. ಅಲ್ಲದೆ ಐದು ದಿನಗಳ ಹಿಂದೆ ನೀರಿಗಾಗಿ ಇದೇ ಎರಡು ಗುಂಪುಗಳ ನಡುವೆ ಕದನವೂ ಜರುಗಿತ್ತು ಎಂದು ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.

ಗ್ರಾಮದಲ್ಲಿ ದ್ವೇಷಕ್ಕೆ ಕಾರಣ ಹಾಕಿದ್ದ ಫ್ಲೆಕ್ಸ್ ಅನ್ನು ಶನಿವಾರ ರಾತ್ರಿ ಹರಿದು ಹಾಕಿರುವುದು ಎನ್ನಲಾಗಿದ್ದು ಆದರೆ ಭಾನುವಾರ ಸಂಜೆ ಗುಂಪು ಘರ್ಷಣೆ ನಡೆದಿದ್ದು, ಇಬ್ಬರ ಕೊಲೆಯಲ್ಲಿ ಪರ್ಯವಸಾನವಾಗಿತ್ತು. ಈ ಸಂಬಂಧ ಎಸ್ಪಿ ವಿಚಾರಣೆ ನಡೆಸಿದ್ದು ಐವರನ್ನು ಬಂಧಿಸಲಾಗಿದೆ.[ಬೆಳಗಾವಿಯಲ್ಲಿ ಗುಂಪು ಘರ್ಷಣೆ, 12 ಜನರಿಗೆ ಗಾಯ]
ಘಟನೆ ನಂತರ ತೊಪ್ಪನಹಳ್ಳಿ ಡಿವೈಎಸ್ ಪಿ ತೀವ್ರ ಭದ್ರತೆಗೆ ಸೂಚಿಸಿದ್ದು, ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications