ಆಧುನಿಕತೆಯ ಹೊಡೆತದಲ್ಲಿ ಮರೆಯಾಗದಿರಲಿ ಕೊಡಗಿನ ಜೇನು
ಮಡಿಕೇರಿ, ಆಗಸ್ಟ್ 10: ಕೊಡಗಿನ ಜೇನಿಗೆ ಇವತ್ತಿಗೂ ತನ್ನದೇ ಆದ ಮಹತ್ವ ಮತ್ತು ಬೇಡಿಕೆ ಇದೆ. ಆದರೆ ಇತ್ತೀಚೆಗೆ ಕೊಡಗಿನ ಜೇನು ಎಂಬ ಹೆಸರಲ್ಲಿ ಕಲಬೆರಕೆ ಜೇನುಗಳು ಮಾರುಕಟ್ಟೆಯನ್ನು ಆವರಿಸಿದ್ದು, ದೂರದಿಂದ ಬರುವ ಪ್ರವಾಸಿಗರು ಇದನ್ನೇ ಶುದ್ಧ ಜೇನು ಎಂದು ಭಾವಿಸಿ ಕೊಂಡೊಯ್ಯುವಂತಾಗಿದೆ.
ಮೊದಲೆಲ್ಲ ಮನೆಗಳ ಮುಂದೆ, ಆವರಣ, ತೋಟಗಳಲ್ಲಿ ಜೇನುಪೆಟ್ಟಿಗೆಯನ್ನಿಟ್ಟು ಸಾಕಾಣಿಕೆ ಮಾಡುತ್ತಿದ್ದರು. ಅದು ಮನೆಗೆ ಶೋಭೆಯನ್ನು ತರುತ್ತಿತ್ತಲ್ಲದೆ, ಒಂದಷ್ಟು ಜೇನು ಉತ್ಪಾದನೆಯೂ ಆಗುತ್ತಿತ್ತು. ಇಷ್ಟೇ ಅಲ್ಲದೆ ಕಾಡು, ಏಲಕ್ಕಿ ತೋಟಗಳ ಮರಗಳ ಪೊಟರೆ, ಹುತ್ತ, ಕಲ್ಲಿನಡಿಯಲ್ಲಿ ಜೇನು ಹುಳುಗಳು ಸೇರಿ ಜೇನು ಉತ್ಪಾದಿಸುತ್ತಿದ್ದವು. ಡಿಸೆಂಬರ್ ನಂತರ ಕಾಣಿಸುತ್ತಿದ್ದ ಜೇನು ಕುಟುಂಬಗಳು ಬೇಸಿಗೆಯಲ್ಲಿ ಸಿಗುತ್ತಿದ್ದ ಹೂಗಳ ಮಕರಂದ ಹೀರಿ ಮೇ ತಿಂಗಳ ಕೊನೆಯ ವೇಳೆಗೆ ಜೇನು ಉತ್ಪಾದಿಸಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಲಸೆ ಹೋಗಿಬಿಡುತ್ತಿದ್ದವು.
ಆದರೆ ಬದಲಾದ ಕಾಲಘಟ್ಟದಲ್ಲಿ ರಾಸಾಯನಿಕ ಸಿಂಪರಣೆ ಮತ್ತು ಕಾಯಿಲೆಗಳಿಂದಾಗಿ ಜೇನುಹುಳುಗಳ ಕುಟುಂಬ ನಾಶವಾಗಿ ಈಗ ಜೇನು ಹುಳುಗಳು ಕಾಣುವುದೇ ಅಪರೂಪವಾಗುತ್ತಿದೆ.

ಕೊಡಗು ಜಿಲ್ಲೆಯ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಜೇನು ಕಾಣಸಿಗುತ್ತಿವೆ. ಹೀಗಿರುವಾಗಿ ಯಥೇಚ್ಛವಾಗಿ ಜೇನು ಮಾರಾಟಕ್ಕೆ ಹೇಗೆ ಬರುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಕಲಬೆರಕೆ ಜೇನುಗಳು ಕೊಡಗು ಜಿಲ್ಲೆಯನ್ನು ಆವರಿಸಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ನಾಲ್ಕೈದು ದಶಕಗಳ ಹಿಂದೆ ಪ್ರತಿ ವರ್ಷ ಜನವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲೆಯಲ್ಲಿ ಯಥೇಚ್ಛವಾಗಿ ಜೇನು ಉತ್ಪಾದನೆಯಾಗುತ್ತಿತ್ತು. ಕಾರಣ ಈ 5 ತಿಂಗಳುಗಳಲ್ಲಿ ಸುಮಾರು 120 ಬಗೆಯ ಹೂವುಗಳು ಕೊಡಗಿನ ಹಸಿರ ಪರಿಸರದಲ್ಲಿ ಅರಳಿ ನಿಲ್ಲುತ್ತಿದ್ದವು. ಪರಾಗ ಸ್ಪರ್ಶದ ಮೂಲಕ ಮಕರಂದವನ್ನು ಹೀರುವ ಜೇನು ನೊಣಗಳು ಜೇನನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದವು.
ಆಗ ಕಾಡುಗಳು ಹೆಚ್ಚಾಗಿದ್ದವು. ಜತೆಗೆ ಕಾಫಿ ತೋಟಗಳು ಕಡಿಮೆ ಪ್ರಮಾಣದಲ್ಲಿದ್ದವು. ಹೆಚ್ಚಿನ ಪ್ರದೇಶ ಏಲಕ್ಕಿ ತೋಟವಾಗಿತ್ತು. ಏಲಕ್ಕಿ ತೋಟಕ್ಕೆ ನೆರಳು ಮತ್ತು ನೀರಿನ ಅವಶ್ಯಕತೆಯಿದ್ದ ಕಾರಣದಿಂದಾಗಿ ಹೆಮ್ಮರಗಳು ಒತ್ತೊತ್ತಾಗಿ ಇದ್ದವಲ್ಲದೆ, ಈ ಮರಗಳ ಪೈಕಿ ಹೂ ಬಿಡುವ ಹಲವು ಮರಗಳಿದ್ದವು. ಇವುಗಳು ಜೇನು ಉತ್ಪಾದನೆಗೆ ಪೂರಕವಾಗಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏಲಕ್ಕಿ ತೋಟಗಳು ಕಣ್ಮರೆಯಾಗಿವೆ. ಜತೆಗೆ ಕಾಡು ಮರಗಳು ಕೂಡ ನಾಶವಾಗಿವೆ. ಇದೆಲ್ಲದರ ನಡುವೆ ಜೇನು ಕೃಷಿ ಮಾಡುವ ತಾಳ್ಮೆಯೂ ಇಲ್ಲದಾಗಿದೆ.
ಹಿಂದಿನಂತೆ ಜೇನುಕುಟುಂಬಗಳು ಹೆಚ್ಚಾಗಿ ಕಂಡು ಬರುತ್ತಿಲ್ಲ. ಮೊದಲೆಲ್ಲ ಜೇನು ಪೆಟ್ಟಿಯನ್ನು ಜೇನುಪೆಟ್ಟಿಗೆಗೆ ಜೇನು ಮೇಣವನ್ನು ಕಾಯಿಸಿ ಚೆನ್ನಾಗಿ ಉಜ್ಜಿ ಘಮಘಮಿಸುವಂತೆ ಮಾಡಿ ತೋಟದಲ್ಲಿ ಮರಗಳ ನೆರಳಿನಲ್ಲಿಟ್ಟರೆ ಜೇನು ಹುಳುಗಳು ತಾನಾಗಿಯೇ ಬಂದು ಅದರಲ್ಲಿ ಸೇರಿಕೊಂಡು ಜೇನು ಕಟ್ಟುತ್ತಿದ್ದವು. ಈಗ ಅಂತಹ ಪರಿಸ್ಥಿತಿ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಒಂದಷ್ಟು ಆಸಕ್ತಿ ವಹಿಸಿ ಜೇನು ಕೃಷಿ ಮಾಡದೆ ಹೋದರೆ ಕೊಡಗಿನ ಜೇನಿಗೆ ಭಾರೀ ಹೊಡೆತ ಬೀಳುವುದಂತೂ ಖಚಿತ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications