ಮಡಿಕೇರಿಯಲ್ಲಿ ನೀರುಕೊಲ್ಲಿ ದಾಟಲಾಗದೇ ಸಿಲುಕಿದ ಮರಿಯಾನೆ
ಮಡಿಕೇರಿ, ಜುಲೈ 22: ತೋಟದಿಂದ ತೋಟಕ್ಕೆ ಅಲೆದಾಡುತ್ತಿರುವ ಕಾಡಾನೆಗಳ ಹಿಂಡಿನೊಂದಿಗಿದ್ದ ಮರಿಯಾನೆಯೊಂದು ತೋಟದ ನೀರು ಕೊಲ್ಲಿಯನ್ನು ದಾಟಲಾಗದೆ ಸಿಲುಕಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ವಿರಾಜಪೇಟೆ ತಾಲ್ಲೂಕಿನ ಕುಟ್ಟದ ತೈಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರತಿದಿನ ಹತ್ತಾರು ಕಾಡಾನೆಗಳು ದಕ್ಷಿಣ ಕೊಡಗಿನ ತೋಟಗಳ ಮೂಲಕ ಹಾದು ಹೋಗುತ್ತವೆ. ಕೆಲವು ಆನೆಗಳು ತೋಟದಲ್ಲೇ ಮರಿಗಳಿಗೆ ಜನ್ಮ ನೀಡುತ್ತಿವೆ.

ಈ ರೀತಿ ತೋಟದಲ್ಲೇ ಜನ್ಮ ಪಡೆದ ಮರಿಯೊಂದು ಕೊಲ್ಲಿಯನ್ನು ದಾಟಲಾಗದೇ ಅಲ್ಲೇ ಸಿಲುಕಿಕೊಂಡಿದೆ. ಸ್ಥಳೀಯರ ಗಮನಕ್ಕೆ ಈ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಅಧಿಕಾರಿಗಳು, ಮರಿಯನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.












Click it and Unblock the Notifications