ತನ್ನ ಆಯ್ಕೆಗೆ ವಿರುದ್ಧವಾಗಿ ಮತ ಹಾಕಿದ ಪತ್ನಿಗೆ ಥಳಿಸಿದ ಪತಿ: ಮಹಿಳಾ ಸಮಿತಿ ಕ್ರಮಕ್ಕೆ ಮನವಿ
ಲಕ್ನೋ ಮಾರ್ಚ್ 22: ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಆಯ್ಕೆಯ ಪಕ್ಷಕ್ಕೆ ಮತ ಚಲಾಯಿಸುವ ಹಕ್ಕಿದೆ. ಸಂವಿಧಾನದ ಪ್ರಕಾರ ಯಾವುದೇ ಪುರುಷ ಅಥವಾ ಮಹಿಳೆ ತಮ್ಮ ಆಯ್ಕೆಯ ಪಕ್ಷಕ್ಕೆ ಮತ ಚಲಾಯಿಸಬಹುದು. ಆದರೆ ಉತ್ತರಪ್ರದೇಶದ ಮಹಿಳೆಯೊಬ್ಬಳಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಅತ್ತೆ-ಮಾವ ಮತ್ತು ಪತಿ ವಿಚ್ಛೇದನದ ಬೆದರಿಕೆ ಹಾಕಿದ್ದಾರೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕಿದ್ದಕ್ಕಾಗಿ ಮುಸ್ಲಿಂ ಮಹಿಳೆಯನ್ನು ಆಕೆಯ ಅತ್ತೆಯ ಮನೆಯವರು ಮನೆಯಿಂದ ಹೊರ ಹಾಕಿದ್ದಾರೆ. ತ್ರಿವಳಿ ತಲಾಖ್ ವಿರುದ್ಧದ ಕಾನೂನು ಮತ್ತು ಬಡವರಿಗೆ ಉಚಿತ ಪಡಿತರ ಸೇರಿದಂತೆ ಬಿಜೆಪಿ ಮಾಡಿದ ಕೆಲಸಕ್ಕಾಗಿ ಬಿಜೆಪಿಗೆ ಸಂತ್ರಸ್ತೆ ಮತ ಹಾಕಿದ್ದರು. ಆದರೆ ಇದನ್ನೊಪ್ಪದ ಗಂಡ ಮತ್ತು ಆತನ ಕುಟುಂಬಸ್ಥರು ಆಕೆಗೆ ಥಳಿಸಿದ್ದಾರೆ. ಜೊತೆಗೆ ಮನೆಯಿಂದ ಹೊರಹಾಕಿದ್ದಾರೆ.
ಸಂತ್ರಸ್ತೆಯನ್ನು ಉಜ್ಮಾ ಎಂದು ಗುರುತಿಸಲಾಗಿದೆ. ಅವರು ಜನವರಿ 2021 ರಲ್ಲಿ ತಸ್ಲಿಮ್ ಅನ್ಸಾರಿ ಅವರನ್ನು ವಿವಾಹವಾದರು. ಇವರದ್ದು ಪ್ರೇಮ ವಿವಾಹವಾಗಿತ್ತು. ಉಜ್ಮಾ ಎಜಾಜ್ ನಗರ ಘೌಟಿಯಾ ಕಾಲೋನಿ ನಿವಾಸಿ ತಾಹಿರ್ ಅನ್ಸಾರಿ ಎಂಬವರ ಪುತ್ರಿ.
बरेली :#भाजपा को वोट देने पर परिजन दे रहे 3 तलाक़ की धमकी !!
— Saurabh Singh Bhadouria ( सौरभ सिंह ) (@Bhadourialive) March 21, 2022
महिला को परिजनों ने मारपीट कर घर से निकाला !!@Uppolice @adgzonebareilly @igrangebareilly pic.twitter.com/vsKbdrNEJA
''ನಾನು ಬಿಜೆಪಿಗೆ ಮತ ಹಾಕಿದ್ದೇನೆ. ಅದು ನನ್ನ ಗಂಡನ ಚಿಕ್ಕಪ್ಪ ತಯ್ಯಬ್ಗೆ ಬೇಸರ ತಂದಿದೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಿದ್ದರಿಂದ ನಾನು ಬಿಜೆಪಿಗೆ ಮತ ಹಾಕಿದ್ದೇನೆ. ನನ್ನ ಕುಟುಂಬ ತೀರಾ ಬಡವಾಗಿದೆ. ನನ್ನ ತಂದೆ ಕೂಲಿ ಕಾರ್ಮಿಕ. ನಾವು ಐವರು ಸಹೋದರಿಯರು. ಸರ್ಕಾರ ನಮಗೆ ಪಡಿತರವನ್ನೂ ನೀಡಿದೆ.ಹೀಗಾಗಿ ನಾನು ಬಿಜೆಪಿಗೆ ಮತ ಹಾಕಿದೆ. ಆದರೆ ನನ್ನ ಗಂಡನಿಗೆ ಬಿಜೆಪಿಗೆ ಮತ ಹಾಕಿವುದು ಇಷ್ಟವಿರಲಿಲ್ಲ. ಹೀಗಾಗಿ ನನ್ನನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾರೆ'' ಎಂದು ಉಜ್ಮಾ ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ತಾನು ಪ್ರೇಮ ವಿವಾಹವಾಗಿದ್ದೇನೆ. 'ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ, ನನ್ನ ಗಂಡನ ಚಿಕ್ಕಪ್ಪ ಯೋಗಿ ಮತ್ತೊಮ್ಮೆ ಗೆದ್ದಿದ್ದಾರೆ ಎಂದು ಹೇಳಿದರು. ನಾನೂ ಬಿಜೆಪಿಗೆ ಮತ ಹಾಕಿದ್ದೇನೆ ಎಂದು ನಗುತ್ತಾ ಹೇಳಿದೆ. ಅವರು ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಇದೊಂದು ಉತ್ತಮ ಸರಕಾರ. ಅವರು ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಿದ್ದಾರೆ ಎಂದಿದ್ದೆ. ಆದರೆ ಇದು ನನ್ನ ಗಂಡನ ಚಿಕ್ಕಪ್ಪಗೆ ಇಷ್ಟವಾಗಲಿಲ್ಲ" ಎಂದು ಸಂತ್ರಸ್ತೆ ಹೇಳಿಕೊಮಡಿದ್ದಾರೆ.
ತನ್ನ ಹೇಳಿಕೆಯಿಂದ ಸಿಟ್ಟಿಗೆದ್ದ ಗಂಡನ ಚಿಕ್ಕಪ್ಪ ತ್ರಿವಳಿ ತಲಾಖ್ನಿಂದ ರಕ್ಷಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆಂದು ಆಕೆ ಹೇಳಿಕೊಂಡಿದ್ದಾಳೆ. ''ಈ ವಿಷಯದಲ್ಲಿ ನನ್ನ ಪತಿ ತನ್ನ ಚಿಕ್ಕಪ್ಪನೊಂದಿಗೆ ಇದ್ದಾನೆ. ಅವರು ನನಗೆ ಬೆಂಬಲ ನೀಡುತ್ತಿಲ್ಲ. ಆದರೆ ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ'' ಎಂದು ಅವರು ಹೇಳಿದರು.
ಪತಿ ತನ್ನನ್ನು ಹೊರಹಾಕಿದ್ದಾರಾ ಎಂದು ಕೇಳಿದಾಗ, "ಹೌದು, ಅವನು ನನ್ನನ್ನು ಹೊರಹಾಕಿದನು ಮತ್ತು ನನಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದನು. ಅವರು ನನಗೆ ವಿಚ್ಛೇದನ ನೀಡಿಲ್ಲ. ಆದರೆ ತ್ರಿವಳಿ ತಲಾಖ್ಗಾಗಿ ತಾವು ಏನು ಬೇಕಾದರೂ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಮತ್ತು ಸವಾಲು ಹಾಕಿದ್ದಾರೆ" ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಅವರಿಗೆ ಸಂತ್ರಸ್ತೆ ದೂರು ನೀಡುವುದಾಗಿ ಹೇಳಿದಾಗ, ಆಕೆಯ ಸಹೋದರ ಸಹೋದರಿಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಜೆಪಿಗೆ ಮತ ಪತ್ನಿಗೆ ಥಳಿತ
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಫರ್ಹತ್ ನಖ್ವಿ ಸಂತ್ರಸ್ತೆಯನ್ನು ಭೇಟಿಯಾಗಿ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಗಮನಾರ್ಹವಾಗಿ, ಯುಪಿಯಲ್ಲಿ ಟ್ರಿಪಲ್ ತಲಾಖ್ ವಿಷಯವನ್ನು ಫರ್ಹತ್ ಪ್ರಸ್ತಾಪಿಸಿದರು. ಉಜ್ಮಾ ತನ್ನ ಬಳಿಗೆ ಬಂದು ಘಟನೆಯ ಬಗ್ಗೆ ತಿಳಿಸಿದ್ದರು ಎಂದು ನಖ್ವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. ಅವರು ಸಂತ್ರಸ್ತೆಯ ಕ್ಷಮೆ ಕೇಳಬೇಕು. ಅವರು ಹಾಗೆ ಮಾಡಲು ವಿಫಲರಾದರೆ, ಅವರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ಸೋಮವಾರ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದು, ಪತ್ನಿಯನ್ನು ಹೊಡೆದು ಹೊರಹಾಕಿದ ಪುರುಷ ಮತ್ತು ಅವನ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಎನ್ಸಿಡಬ್ಲ್ಯು ಈ ವಿಷಯವನ್ನು ಅರಿತುಕೊಂಡಿದೆ ಮತ್ತು ಆರೋಪಗಳು ನಿಜವೆಂದು ಕಂಡುಬಂದಲ್ಲಿ ಕಾನೂನಿನ ಪ್ರಕಾರ ಎಫ್ಐಆರ್ ಅನ್ನು ನೋಂದಾಯಿಸಲು ಕೋರಿದೆ. "ಈ ವಿಷಯದಲ್ಲಿ ತೆಗೆದುಕೊಂಡ ಕ್ರಮವನ್ನು ಏಳು ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು" ಎಂದು NCW ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪತ್ರದ ಪ್ರತಿಯನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಬರೇಲಿ ಅವರಿಗೂ ಕಳುಹಿಸಲಾಗಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications