ಯುಪಿ ಚುನಾವಣೆ: ಪ್ರಚಾರದ ವೇಳೆ ಧಾರ್ಮಿಕ ದ್ವೇಷದ ಭಾಷಣ ಬಿಜೆಪಿ ಶಾಸಕರಿಗೆ ಇಸಿ ನೋಟಿಸ್

ಲಕ್ನೋ ಜನವರಿ 17: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಧಾರ್ಮಿಕ ದ್ವೇಷವನ್ನು ಪ್ರಚೋದಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಶಾಸಕ ನಂದ ಕಿಶೋರ್ ಗುರ್ಜರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ತಮ್ಮ ಉಮೇದುವಾರಿಕೆ ಘೋಷಣೆಯ ಸಮಯದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ, ಅವರು ಈ ಘೋಷಣೆಯನ್ನು ಬಳಸಿದರು: "ನಾ ಅಲಿ, ನಾ ಬಾಹುಬಲಿ, ಲೋನಿ ಮೇ ಸಿರ್ಫ್ ಬಜರಂಗ್ ಬಲಿ" (ಅಲಿ ಇಲ್ಲ, ಬಾಹುಬಲಿ ಇಲ್ಲ, ಲೋನಿಯಲ್ಲಿ ಬಜರಂಗ ಬಲಿ ಮಾತ್ರ). ಈ ಹೇಳಿಕೆ ವಿರುದ್ಧ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಚುನಾವಣಾ ಆಯೋಗ ಸ್ಪಷ್ಟನೆ ಕೇಳಿತ್ತು. ಮೂರು ದಿನಗಳೊಳಗೆ ಅಂದರೆ ಬುಧವಾರದೊಳಗೆ ಚುನಾವಣಾ ಆಯೋಗಕ್ಕೆ ಲಿಖಿತವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ನಂದ ಕಿಶೋರ್ ಗುರ್ಜರ್ ಅವರಿಗೆ ತಿಳಿಸಲಾಗಿದೆ. ಅವರ ಪ್ರತಿಕ್ರಿಯೆಯಲ್ಲಿ, ಅವರು ವಿವಾದಾತ್ಮಕ ಘೋಷಣೆಯನ್ನು ಏಕೆ ಬಳಸಿದರು ಎಂಬುದನ್ನು ವಿವರಿಸಬೇಕು.

ಉತ್ತರ ಪ್ರದೇಶ ಚುನಾವಣೆ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆ (2017 ರಲ್ಲಿ) ಏಳು ಹಂತಗಳಲ್ಲಿ ನಡೆದಿತ್ತು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳು ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ 312 ಕ್ಷೇತ್ರಗಳನ್ನು ಗೆದ್ದಿವೆ. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

 UP Assembly Elections: EC issues notice to BJP Loni MLA for invoking religious hatred during campaign

ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಆಡಳಿತಾರೂಢ ಬಿಜೆಪಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿಯವರ ಬಹುಜನ ಸಮಾಜ ಪಕ್ಷದ ನಡುವೆ ಚತುಷ್ಕೋನ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಡಳಿತಾರೂಢ ಬಿಜೆಪಿಯ ಬಲಿಷ್ಠ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ, ಚುನಾವಣಾ ಆಯೋಗವು ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ಐದು ಚುನಾವಣೆಯ ರಾಜ್ಯಗಳಲ್ಲಿ ಜನವರಿ 22 ರವರೆಗೆ ದೈಹಿಕ ಪ್ರಚಾರ ರ್‍ಯಾಲಿಗಳನ್ನು ನಿಷೇಧಿಸಿದೆ.

ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ (ಜನವರಿ 16) ಬಿಡುಗಡೆ ಮಾಡಿದೆ. ಹಿಂದುಳಿದ ವರ್ಗಗಳ ಗರಿಷ್ಠ 55 ಅಭ್ಯರ್ಥಿಗಳಿಗೆ AAP ಅನುಮೋದನೆ ನೀಡಿದೆ. ಮೊದಲ ಪಟ್ಟಿಯಲ್ಲಿ ಎಂಬಿಎ ಮುಗಿಸಿದ ಎಂಟು ಅಭ್ಯರ್ಥಿಗಳಿದ್ದು, ಇದಲ್ಲದೇ 38 ಸ್ನಾತಕೋತ್ತರ ಪದವೀಧರರು, ನಾಲ್ವರು ವೈದ್ಯರು, ಪಿಎಚ್‌ಡಿ ಮಾಡಿದ ಎಂಟು ಮಂದಿ, ಇಂಜಿನಿಯರ್‌ಗಳು, 39 ಮಂದಿ ಪದವೀಧರರಿದ್ದು, ಮೊದಲ ಪಟ್ಟಿಯಲ್ಲಿ ಎಂಟು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಈಗ ಈ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿ ರಾಜಕೀಯದಲ್ಲಿನ ಕೊಳಕನ್ನು ಒರೆಸುವ ಜವಾಬ್ದಾರಿ ಯುಪಿಯ ಜನರ ಮೇಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Recommended Video

      Steps to Take if you have Covid Symptoms | Oneindia Kannada

      ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಗೋರಖ್‌ಪುರದಿಂದ ಕಣಕ್ಕಿಳಿಸಲಾಗಿದ್ದು, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಗ್‌ರಾಜ್‌ ಅವರು ಸಿರತುದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನೋಯ್ಡಾ, ದಾದ್ರಿ ಮತ್ತು ಜೇವಾರ್‌ನಿಂದ ತನ್ನ ಮೂವರು ಹಾಲಿ ಶಾಸಕರನ್ನು ಮತ್ತೊಮ್ಮೆ ಕಣಕ್ಕಿಳಿಸುವುದಾಗಿ ಕೇಸರಿ ಪಕ್ಷ ಘೋಷಿಸಿದೆ. ಪಕ್ಷವು ನೋಯ್ಡಾದಿಂದ ಪಂಕಜ್ ಸಿಂಗ್, ದಾದ್ರಿಯಿಂದ ತೇಜ್ಪಾಲ್ ಸಿಂಗ್ ನಗರ ಮತ್ತು ಜೇವಾರ್‌ನಿಂದ ಧೀರೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+