ಉಗುಳು ಹಚ್ಚಿ ಕರಪತ್ರ ಹಂಚಿದ ಅಮಿತ್ ಶಾ: ಬಿಜೆಪಿ ಕೊರೊನಾ ಹರಡುತ್ತಿದೆ ಎಂದ ಅಖಿಲೇಶ್
ಲಕ್ನೋ, ಜನವರಿ 29: ಬಿಜೆಪಿ ಕಾರ್ಯಕರ್ತರು ಕರಪತ್ರಗಳನ್ನು ಹಂಚುವ ಮೂಲಕ ಕೋವಿಡ್-19 ಅನ್ನು ಹರಡುತ್ತಿದ್ದಾರೆ, ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಗಂಭೀರವಾಗಿ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಪುತ್ರ ಜಯಂತ್ ಚೌಧರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ.
ಕೊರೊನಾ ಹರಡಲು ಬಿಜೆಪಿಯ ಜನರು ಕರಪತ್ರಗಳನ್ನು ಹಂಚುತ್ತಿದ್ದಾರೆ. ಕೊರೊನಾ ಹೇಗೆ ಹರಡುತ್ತದೆ ಎಂಬುದನ್ನು ಮರೆತಿರುವ ಈ ಜನರನ್ನು ಚುನಾವಣಾ ಆಯೋಗ ನಿಲ್ಲಿಸಬೇಕು ಎಂದು ಅಖಿಲೇಶ್ ಯಾದವ್ ಅವರು ಕೋವಿಡ್-19ರ ಹರಡುವಿಕೆಯನ್ನು ನಿಯಂತ್ರಿಸಲು ಚುನಾವಣಾ ಆಯೋಗ ವಿಧಿಸಿರುವ ನಿರ್ಬಂಧಗಳ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ಕರಪತ್ರಗಳನ್ನು ಹಂಚುವಾಗ ಉಗುಳು ಹಚ್ಚುವುದನ್ನು ತೋರಿಸುವ ವಿಡಿಯೋವನ್ನು ಉಲ್ಲೇಖಿಸಿ ಆರೋಪಿಸಿದರು. ಈ ಘಟನೆಯ ವಿಡಿಯೋವನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ "ಎಸ್ಪಿ-ಆರ್ಎಲ್ಡಿ ಮೈತ್ರಿಯು ರಾಜ್ಯದಲ್ಲಿ 'ನಕಾರಾತ್ಮಕ ರಾಜಕೀಯ'ವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ," ಎಂದು ಹೇಳಿದರು.
ಕೈರಾನಾದಿಂದ ಹಿಂದೂಗಳ ವಲಸೆಯ ಬಗ್ಗೆ ಬಿಜೆಪಿಯ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, "ಈ ಬಾರಿ ಉತ್ತರಪ್ರದೇಶದಿಂದ ಬಿಜೆಪಿಯ ರಾಜಕೀಯ ನಿರ್ಗಮನ ನಡೆಯಲಿದೆ. ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ತಮ್ಮ ಸರ್ಕಾರವು 15 ದಿನಗಳಲ್ಲಿ ಕಬ್ಬು ಪಾವತಿಯನ್ನು ಖಚಿತಪಡಿಸುತ್ತದೆ," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದರು.
ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರಲು ಜಯಂತ್ ಚೌಧರಿ ಅವರಿಗೆ ಅಮಿತ್ ಶಾ ಅವರ ಆಹ್ವಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, "ಅವರ ಪ್ರಸ್ತಾಪವನ್ನು ಯಾರು ಸ್ವೀಕರಿಸುತ್ತಿದ್ದಾರೆ? ಅವರು ಪರಿಸ್ಥಿತಿ ಬಗ್ಗೆ ಯೋಚಿಸಿ, ಅವರು ಸಾರ್ವಜನಿಕವಾಗಿ ಆಹ್ವಾನ ನೀಡಬೇಕಾದ ಪರಿಸ್ಥಿತಿ ಬಂದಿದೆ,'' ಎಂದು ವ್ಯಂಗ್ಯವಾಡಿದರು.
ಚೌಧರಿ
ಚರಣ್
ಸಿಂಗ್
ಪರಂಪರೆ
ಹೆಚ್ಚಿಸಲಿರುವ
ಎಸ್ಪಿ-ಆರ್ಎಲ್ಡಿ
ಮೈತ್ರಿ
ಇದೇ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಮಾತನಾಡಿದ
ಜಯಂತ್
ಚೌಧರಿ,
"ರೈತರು
ಮತ್ತು
ಕಾರ್ಮಿಕರನ್ನು
ಸಂಘಟಿಸುವ
ಚೌಧರಿ
ಚರಣ್
ಸಿಂಗ್
ಅವರ
ಉದ್ದೇಶವನ್ನು
ಮತ್ತಷ್ಟು
ಹೆಚ್ಚಿಸಲು
ಆರ್ಎಲ್ಡಿ
ಪಕ್ಷವು
ಎಸ್ಪಿಯೊಂದಿಗೆ
ಮೈತ್ರಿ
ಮಾಡಿಕೊಂಡಿದೆ,"
ಎಂದು
ಹೇಳಿದರು.
ಆಡಳಿತ ಪಕ್ಷಕ್ಕೆ ಮತ ಚಲಾಯಿಸಲು ಅಂಚೆ ಮತಪತ್ರಗಳನ್ನು ಬಳಸುವಂತೆ ಅಧಿಕಾರಿಗಳು ಸರ್ಕಾರಿ ನೌಕರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥರು ಆರೋಪಿಸಿದ್ದಾರೆ. ಸರ್ಕಾರಿ ನೌಕರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಾರದು ಮತ್ತು ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಅಂಚೆ ಮತಪತ್ರಗಳನ್ನು ಬಳಸಬಾರದು ಎಂದು ಜಯಂತ್ ಚೌಧರಿ ವಿನಂತಿಸಿದರು.
ಎಸ್ಪಿ-ಆರ್ಎಲ್ಡಿಯ ಬುಧಾನಾ ಅಭ್ಯರ್ಥಿ ಅವರು ವಿಡಿಯೋ ವ್ಯಾನ್ ಓಡಿಸಲು ಬಯಸುವುದಾಗಿ ಚುನಾವಣಾ ಆಯೋಗಕ್ಕೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಇನ್ನೂ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಇದೇ ವೇಳೆ ಬಿಜೆಪಿ ವಿಡಿಯೋ ವ್ಯಾನ್ ಬಳಸುತ್ತಿದೆ ಎಂದು ಜಯಂತ್ ಚೌಧರಿ ಹೇಳಿದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಫೆಬ್ರವರಿ
10ರಿಂದ
ಏಳು
ಹಂತಗಳಲ್ಲಿ
ಚುನಾವಣೆ
ಉತ್ತರ
ಪ್ರದೇಶದ
403
ವಿಧಾನಸಭಾ
ಕ್ಷೇತ್ರಗಳಿಗೆ
ಫೆಬ್ರವರಿ
10ರಿಂದ
ಏಳು
ಹಂತಗಳಲ್ಲಿ
ಚುನಾವಣೆ
ನಡೆಯಲಿದೆ
ಎಂದು
ಚುನಾವಣಾ
ಆಯೋಗ
ತಿಳಿಸಿದೆ.
ಉತ್ತರಪ್ರದೇಶದಲ್ಲಿ
ಫೆಬ್ರವರಿ
10,
14,
20,
23,
27
ಮತ್ತು
ಮಾರ್ಚ್
3
ಮತ್ತು
7ರಂದು
ಏಳು
ಹಂತಗಳಲ್ಲಿ
ಮತದಾನ
ನಡೆಯಲಿದೆ.
ಮಾರ್ಚ್
10ರಂದು
ಮತ
ಎಣಿಕೆ
ನಡೆಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ 30 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ಹೊರಗುಳಿದಿದ್ದು, 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. 403 ಸದಸ್ಯ ಬಲದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 39.67ರಷ್ಟು ಮತಗಳನ್ನು ಗಳಿಸಿತ್ತು. ಸಮಾಜವಾದಿ ಪಕ್ಷ (ಎಸ್ಪಿ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್ಪಿ 19 ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
Recommended Video