ಯುಪಿ: ಬಘೇಲ್ ವಾಹನದ ಮೇಲೆ ದಾಳಿ: ಎಸ್ಪಿ ವಿರುದ್ಧ ಇಸಿಗೆ ದೂರು
ಲಕ್ನೋ ಫೆಬ್ರವರಿ 17: ಬಿಜೆಪಿ ಅಭ್ಯರ್ಥಿ ಎಸ್ಪಿ ಸಿಂಗ್ ಬಾಘೆಲ್ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ದಾಳಿ ನಡೆಸಿದ್ದಾರೆಂದು ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರನ್ನೊಳಗೊಂಡ ಬಿಜೆಪಿ ನಿಯೋಗವು ಲಕ್ನೋದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
"ಅವರು ಮತ್ತೊಮ್ಮೆ ತಮ್ಮ ನೈಜತೆಯನ್ನು ತೋರಿಸಿದ್ದಾರೆ. ಅಖಿಲೇಶ್ ಯಾದವ್ ವಿರುದ್ಧ ಎಸ್ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಿದ ನಂತರ ವಿಚಲಿತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬಾಘೆಲ್ ಮೇಲೆ ದಾಳಿ ಮಾಡಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ" ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಯುಪಿ: ಕರ್ಹಾಲ್ನ ಬಿಜೆಪಿ ಅಭ್ಯರ್ಥಿ ವಾಹನದ ಮೇಲೆ ದಾಳಿ
"2017 ರ ಮೊದಲು ಯುಪಿ ಕಂಡ ಮಾಫಿಯಾ ರಾಜ್ ಮತ್ತು ಕ್ರಿಮಿನಲ್ ಚಟುವಟಿಕೆಗಳು ಭಯದ ವಾತಾವರಣವನ್ನು ಸೃಷ್ಟಿಸಿತು. ಎಸ್ಪಿ ಯುಪಿಯನ್ನು ಎಂದಿಗೂ ಅಭಿವೃದ್ಧಿ ಹೊಂದಿದ ರಾಜ್ಯವಾಗಲು ಬಿಡಲಿಲ್ಲ. ಯುಪಿ ಬಿಮಾರು ರಾಜ್ಯವಾಗಿ ಉಳಿಯಿತು. ಜನರು ದೌರ್ಜನ್ಯಕ್ಕೆ ಒಳಗಾಗಿದ್ದರು, ಇದು ಎಸ್ಪಿಯ ಕರೆ ಕಾರ್ಡ್ ಆಗಿತ್ತು" ಗೋಯಲ್ ಕಿಡಿಕಾರಿದ್ದಾರೆ.

ಅಖಿಲೇಶ್ ಯಾದವ್ ತನ್ನ ಭದ್ರಕೋಟೆಯಾದ ಕರ್ಹಾಲ್ನಲ್ಲಿ ಸೋಲುವ ಭಯದಿಂದ ಬಘೇಲ್ ಮತ್ತು ಇತರ ಬಿಜೆಪಿ ನಾಯಕರ ಮೇಲೆ "ಅವರ ಮುದ್ದಿನ ಗೂಂಡಾಗಳು" ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 'ಹಾಟ್ಸೀಟ್' ಆಗಿರುವ ಕರ್ಹಾಲ್ನಿಂದ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿ ಎಸ್ಪಿ ಸಿಂಗ್ ಬಘೇಲ್ ಅವರಿಗೆ ಝಡ್-ಕೆಟಗರಿ ಭದ್ರತೆಯನ್ನು ನೀಡಲಾಗಿದೆ.
ಮಂಗಳವಾರ, ಕೇಂದ್ರ ಸಚಿವ ಪ್ರೊಫೆಸರ್ ಎಸ್ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ಮತ್ತು ದಾಳಿಯ ಪ್ರಕರಣ ಬೆಳಕಿಗೆ ಬಂದಿತ್ತು. "ದಾಳಿಯಿಂದ, ನಿಮ್ಮ ಸೋಲನ್ನು ನೀವು ಖಚಿತಪಡಿಸಿಕೊಂಡಿದ್ದೀರಿ. ನಿಮ್ಮ ವಿರುದ್ಧ ಸ್ಪರ್ಧಿಸುವವರ ಮೇಲೆ ದಾಳಿ ಮಾಡುತ್ತಿರುವುದು ಇದು ಹೊಸ ಸಮಾಜವಾದಿ ಪಕ್ಷವೇ? " ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. "ಬಿಜೆಪಿ ಅಭ್ಯರ್ಥಿ ಬಾಘೇಲ್ ಜಿ ಮೇಲಿನ ದಾಳಿಯು ಅಖಿಲೇಶ್ (ಯಾದವ್) ಸೋಲಿನ ರುಚಿಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಜನರ ಆಶೀರ್ವಾದದಿಂದ ಖಚಿತವಾಗಿದೆಯೇ ಹೊರತು ಗೂಂಡಾಗಳ ಭಯೋತ್ಪಾದನೆಯಿಂದಲ್ಲ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಮೂರನೇ ಹಂತದಲ್ಲಿ ಕರ್ಹಾಲ್ನಲ್ಲಿ ಚುನಾವಣೆ
ಫೆಬ್ರವರಿ 20 ರಂದು ಮೂರನೇ ಹಂತದಲ್ಲಿ ಕರ್ಹಾಲ್ನಲ್ಲಿ ಚುನಾವಣೆ ನಡೆಯಲಿದೆ. ಕರ್ಹಾಲ್ ಎಸ್ಪಿ ಭದ್ರಕೋಟೆಯಾಗಿದೆ ಮತ್ತು ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ 2007, 2012 ಮತ್ತು 2017 ರಲ್ಲಿ ಎಸ್ಪಿ ಪಕ್ಷ ಗೆದ್ದಿತ್ತು. 2002 ರಲ್ಲಿ ಬಿಜೆಪಿ ಸ್ಥಾನವನ್ನು ಪಡೆದುಕೊಂಡಿತ್ತು. ಕ್ಷೇತ್ರವು ಎಸ್ಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದೆ. ಇದಲ್ಲಿ ಯಾದವ ಮತದಾರರು ಗಣನೀಯವಾಗಿದ್ದಾರೆ.
ಉತ್ತರ ಪ್ರದೇಶದ ಮೈನ್ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಅಭ್ಯರ್ಥಿ ಆಗಿ ಕೇಂದ್ರ ಸಚಿವ ಎಸ್ ಪಿ ಸಿಂಗ್ ಬಘೇಲ್ ಅಖಾಡಕ್ಕೆ ಇಳಿದಿದ್ದಾರೆ. ಈ ಲೋಕಸಭಾ ಕ್ಷೇತ್ರವು ಸತತ ಒಂಬತ್ತು ಅವಧಿಗಳಿಂದ ಎಸ್ಪಿ ಬಳಿ ಇದೆ. 2014 ರಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಮೈನ್ಪುರಿ ಕ್ಷೇತ್ರವನ್ನು 3.25 ಲಕ್ಷ ಮತಗಳ ಅಂತರದಿಂದ ಗೆದ್ದರು, ಆದರೆ ನಂತರ ಸ್ಥಾನವನ್ನು ತೊರೆದರು (ಅಜಂಗಢವನ್ನು ಉಳಿಸಿಕೊಂಡರು). ಅವರ ಮೊಮ್ಮಗ ತೇಜ್ ಪ್ರತಾಪ್ ಯಾದವ್ 3.50 ಲಕ್ಷ ಮತಗಳ ಅಂತರದಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.












Click it and Unblock the Notifications