ಉ.ಪ್ರ.ದ ಈ ಕಚೋರಿ ಮಾರಾಟಗಾರನ ಆದಾಯ ವರ್ಷಕ್ಕೆ 60 ಲಕ್ಷದಿಂದ 1 ಕೋಟಿ
ಅಲೀಗಢ (ಉತ್ತರಪ್ರದೇಶ), ಜೂನ್ 25: ಉತ್ತರಪ್ರದೇಶದ ಅಲೀಗಢದಲ್ಲಿ ಕಚೋರಿ ಮಾರುವ ಸಾಮಾನ್ಯ ಮಳಿಗೆಯೊಂದರ ವ್ಯವಹಾರ ಕಂಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗು ಬಡಿದು ಹೋಗಿದ್ದಾರೆ. ಆ ಮಳಿಗೆಯ ಹೆಸರು ಮುಕೇಶ್ ಕಚೋರಿ. ಸೀಮಾ ಸಿನಿಮಾ ಹಾಲ್ ಹತ್ತಿರವೇ ಇರುವ ಈ ಮಳಿಗೆ ಅಂದರೆ ಸ್ಥಳೀಯರಿಗೆ ಬಲು ಅಚ್ಚುಮೆಚ್ಚು.
ಮಳಿಗೆ ಮಾಲೀಕ ಮುಕೇಶ್ ಸಮೋಸಾ, ಕಚೋರಿಯನ್ನು ಮಾರಲು ಬೆಳಗ್ಗೆ ಆರಂಭಿಸಿದರೆ, ರಾತ್ರಿಯ ತನಕ ಮಾರುತ್ತಲೇ ಇರುತ್ತಾರೆ. ಮಳಿಗೆಯ ಮುಂದಿನ ಸರತಿ ಮಾತ್ರ ಕರಗುವುದಿಲ್ಲ. ಈಚೆಗೆ ವಾಣಿಜ್ಯ ತೆರಿಗೆ ಇಲಾಖೆಯ ಬಳಿ ಮುಕೇಶ್ ಅವರ ಮಳಿಗೆ ವಿರುದ್ಧ ದೂರು ದಾಖಲಿಸುವ ತನಕ ಎಲ್ಲವೂ ಸರಿಯೇ ಇತ್ತು.
ಯಾವಾಗ ದೂರು ಬಂದಿತೋ, ಮುಕೇಶ್ ಕಚೋರಿ ಮಳಿಗೆ ಬದಿಗೆ ಮತ್ತೊಂದು ಅಂಗಡಿಯಲ್ಲಿ ಠಿಕಾಣಿ ಹೂಡಿದ ಅಧಿಕಾರಿಗಳು, ಮುಕೇಶ್ ಗೆ ಎಷ್ಟು ವ್ಯಾಪಾರ ಆಗುತ್ತಿದೆ ಎಂದು ಲೆಕ್ಕ ಇಡಲು ಆರಂಭಿಸಿದರು. ಆವರಿಗೆ ಗೊತ್ತಾಗಿದ್ದೇನೆಂದರೆ, ವಾರ್ಷಿಕವಾಗಿ ಮುಕೇಶ್ ಗಳಿಸುತ್ತಿರುವುದು 60 ಲಕ್ಷ ರುಪಾಯಿಯಿಂದ 1 ಕೋಟಿ. ಕೆಲವು ಸಲ ಅದಕ್ಕಿಂತ ಹೆಚ್ಚು.

ಇದೀಗ ಮುಕೇಶ್ ಗೆ ನೋಟಿಸ್ ನೀಡಲಾಗಿದೆ. ಏಕೆಂದರೆ ಆತ ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಯಾವುದೇ ತೆರಿಗೆ ಪಾವತಿ ಮಾಡುತ್ತಿರಲಿಲ್ಲ.
"ನನಗೆ ಇವ್ಯಾವೂ ಗೊತ್ತಿರಲಿಲ್ಲ. ಕಳೆದ ಹನ್ನೆರಡು ವರ್ಷದಿಂದ ಅಂಗಡಿ ನಡೆಸುತ್ತಾ ಇದ್ದೀನಿ. ಈ ಎಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಯಾರೂ ನನಗೆ ಹೇಳಿಲ್ಲ. ಜೀವನಕ್ಕಾಗಿ ಕಚೋರಿ, ಸಮೋಸಾ ಮಾರುತ್ತಾ ಬದುಕುತ್ತಿರುವ ಸಾಮಾನ್ಯ ಜನ ನಾವು ಎನ್ನುತ್ತಾರೆ ಮುಕೇಶ್.
ಈ ಪ್ರಕರಣದ ತನಿಖೆ ಭಾಗವಾಗಿರುವ ರಾಜ್ಯ ಗುಪ್ತಚರ ಇಲಾಖೆ ಸದಸ್ಯರೊಬ್ಬರು ಮಾತನಾಡಿ, ಮುಕೇಶ್ ಈಗಾಗಲೇ ತನ್ನ ಆದಾಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಚೋರಿ- ಸಮೋಸಾಗೆ ಬೇಕಾಗುವ ಪದಾರ್ಥ, ಎಣ್ಣೆ, ಎಲ್ ಪಿಜಿ ಸಿಲಿಂಡರ್ ಗಳು ಇತ್ಯಾದಿ ಖರ್ಚಿನ ಮಾಹಿತಿಯನ್ನೂ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಯಾವುದೇ ವ್ಯಾಪಾರದಲ್ಲಾಗಲೀ 40 ಲಕ್ಷ ಮತ್ತು ಮೇಲ್ಪಟ್ಟ ವಹಿವಾಟು ಇದ್ದಲ್ಲಿ ಜಿಎಸ್ ಟಿ ನೋಂದಣಿ ಮಾಡಿಸುವುದು ಕಡ್ಡಾಯ. ತಯಾರಾದ ಆಹಾರ ಪದಾರ್ಥದ ಮೇಲೆ 5 ಪರ್ಸೆಂಟ್ ತೆರಿಗೆ ಬೀಳುತ್ತದೆ. ಅಧಿಕಾರಿಗಳು ಹೇಳುವ ಪ್ರಕಾರ, ಮುಕೇಶ್ ಜಿಎಸ್ ಟಿ ನೋಂದಣಿ ಮಾಡಿಸಬೇಕು ಹಾಗೂ ಒಂದು ವರ್ಷದ ತೆರಿಗೆ ಪಾವತಿಸಬೇಕು. ಅಂದಹಾಗೆ ಈಗಾಗಲೇ ಮುಕೇಶ್ ಗೆ ನೋಟಿಸ್ ಕೂಡ ನೀಡಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications