Get Updates
Get notified of breaking news, exclusive insights, and must-see stories!

ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ್ ದುಬೆಯ ರಾಜಕೀಯ ಗುರುವಿನ ಹೆಸರು ಬಹಿರಂಗ

ಲಕ್ನೋ, ಜುಲೈ 6: ಎಂಟು ಪೊಲೀಸರ ಹತ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ವಿಕಾಸ್​ ದುಬೆಯನ್ನು ಬಂಧಿಸಲು 25 ತಂಡಗಳನ್ನು ರಚನೆ ಮಾಡಲಾಗಿದೆ. ಕಾನ್ಪುರದ ಐಜಿ ಮೋಹಿತ್ ಅಗರ್‌ವಾಲ್ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Recommended Video

      Huawei out of UK ಭಾರತದ ನಂತರ ಚೀನಾಗೆ ದೊಡ್ಡ ಶಾಕ್ ಕೊಟ್ಟ ಬ್ರಿಟನ್ | Oneindia Kannada

      ಉತ್ತರ ಪ್ರದೇಶದ ಪೊಲೀಸ್ ಇಲಾಖೆ, ವಿಜಯ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 2.5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ನಡುವೆ, ವಿಕಾಸ್ ದುಬೆಯ ಸಂದರ್ಶನದ ವಿಡಿಯೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

      ಈ ಸಂದರ್ಶನ ಯಾವತ್ತು ನಡೆದದ್ದು ಎನ್ನುವುದರ ಬಗ್ಗೆ ಮಾಹಿತಿಯಿಲ್ಲದಿದ್ದರೂ, ತನ್ನ ರಾಜಕೀಯ ಗುರು ಯಾರು ಎನ್ನುವುದನ್ನು ವಿಕಾಸ್ ದುಬೆ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾನೆ.

      Noted Uttar Pradesh Rowdy Sheeter Vikas Dubey Revealted His Political Guru Name In A Interview

      "ತಾನು ರಾಜಕೀಯಕ್ಕೆ ಪ್ರವೇಶಿಸಲು, ಉತ್ತರ ಪ್ರದೇಶದ ಮಾಜಿ ಸ್ಪೀಕರ್, ಸಮಾಜವಾದಿ ಪಕ್ಷದ ಮುಖಂಡ ಹರಿಕೃಷ್ಣ ಶ್ರೀವಾಸ್ತವ ಕಾರಣ. ಇವರೇ ನನ್ನ ರಾಜಕೀಯ ಗುರು"ಎಂದು ವಿಕಾಸ್ ದುಬೆ ಹೇಳಿದ್ದಾನೆ. ದಿ.ಹರಿಕೃಷ್ಣ ಶ್ರೀವಾಸ್ತವ, ಮುಲಾಯಂ ಸಿಂಗ್ ಸರಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದರು ಮತ್ತು ಹಲವು ಖಾತೆಯನ್ನೂ ನಿಭಾಯಿಸಿದ್ದವರು.

      "ನನ್ನನ್ನು ರಾಜಕೀಯಕ್ಕೆ ಕರೆತಂದವರು ಹರಿಕೃಷ್ಣ ಶ್ರೀವಾಸ್ತವ. ನನಗೆ ಅಪರಾಧಿಗಳು ಮತ್ತು ಅಪರಾಧದ ಜಗತ್ತಿನ ನಡುವೆ ನೇರ ಸಂಬಂಧವಿಲ್ಲ. ರಾಜಕೀಯದಲ್ಲಿ ನನ್ನ ಬೆಳವಣಿಗೆ ಕಂಡು, ಹೊಟ್ಟೆಕಿಚ್ಚು ಪಟ್ಟವರೇ ಹೆಚ್ಚು. ಹಾಗಾಗಿಯೇ ನನ್ನ ವಿರುದ್ದ ಪ್ರಕರಣಗಳು ದಾಖಲಾಗಿವೆ"ಎಂದು ವಿಕಾಸ್ ದುಬೆ ಸಂದರ್ಶನದಲ್ಲಿ ಹೇಳಿದ್ದಾನೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+