ವಿಧಾನಸಭೆ ಚುನಾವಣೆ 2022: ಅಖಿಲೇಶ್‌ಗೆ ಹೇಗಿರಲಿದೆ ಹೊಸ ವರ್ಷ?

ಲಕ್ನೋ ಡಿಸೆಂಬರ್ 26: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಅಖಿಲೇಶ್ ಯಾದವ್ ಅತ್ಯಂತ ಕಟ್ಟುನಿಟ್ಟಿನ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಅಖಿಲೇಶ್ ಅವರು ಬಿಜೆಪಿಯನ್ನು ಎದುರಿಸಲು ಸಣ್ಣ ಪಕ್ಷಗಳ ಸಹಾಯವನ್ನೂ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಅವರು ಯುಪಿಯಲ್ಲಿ ಗೆಲುವಿನ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗಿದೆ. ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ) 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಅಖಿಲೇಶ್ ಈ ಬಾರಿ ಯಾವುದೇ ರೀತಿಯ ಚುನಾವಣಾ ಲೋಪವಾಗದಂತೆ ಪ್ರಯತ್ನಿಸುತ್ತಿದ್ದಾರೆ. ಹೊಸ ವರ್ಷದಲ್ಲಿ ಅಖಿಲೇಶ್ ಹೊಸ ಸವಾಲುಗಳನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಅಧಿಕಾರವನ್ನು ಮರಳಿ ಪಡೆಯಲು ಅಖಿಲೇಶ್ ಬಹಳ ದೂರ ಹೋಗಬೇಕಾಗುತ್ತದೆ ಎಂಬುದು ಮಾತ್ರ ಸ್ಪಷ್ಟವಾಗಿದೆ.

ಅಖಿಲೇಶ ಯಾದವ ಸಮಾಜವಾದಿ ಪಕ್ಷದ ಅತಿ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಇವರು ಉತ್ತರ ಪ್ರದೇಶದ 20ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ 38 ನೇ ವಯಸ್ಸಿನಲ್ಲಿ 2012 ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇವರು 2017 ರ ಮಾರ್ಚ್ 11 ರಂದು ಹುದ್ದೆಗೆ ರಾಜಿನಾಮೆ ನೀಡಿದರು. ಉತ್ತರ ಪ್ರದೇಶದ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಅಖಿಲೇಶ ಯಾದವ. ಮೂರು ಬಾರಿ ಇವರು ಲೋಕಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಾರೆ. 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಖಿಲೇಶ ಯಾದವ 10 ಸಾವಿರ ಕಿಮೀ ಸುತ್ತಾಡಿ ಉತ್ತರ ಪ್ರದೇಶದ ವಿವಿಧೆಡೆ 800 ರ್‍ಯಾಲಿಗಳಲ್ಲಿ ಭಾಗವಹಿಸಿದ್ದು ಅಸಾಮಾನ್ಯವಾಗಿದೆ. ಗ್ರಾಮೀಣ ಜನರ ಬದುಕಿನ ಮಟ್ಟ ಸುಧಾರಿಸಲು, ಕೃಷಿಕರ ಜೀವನ ಮಟ್ಟ ಹೆಚ್ಚಿಸಲು ಹಾಗೂ ಬಡವರ ಶ್ರೇಯೋಭಿವೃದ್ಧಿಗೆ ಇವರು ಕೈಗೊಂಡ ಕ್ರಮಗಳಿಂದ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಅಲೆ ಆರಂಭವಾಯಿತು. ಭಾರತೀಯ ರಾಜಕಾರಣದ ಯುವ ನಾಯಕರಾಗಿರುವ ಇವರು ಯುವ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರ ಅಜಂಗಢ್, ವಾರಣಾಸಿ, ಗೋರಖ್‌ಪುರ ಮತ್ತು ಕೆಲವು ಬುಂದೇಲ್‌ಖಂಡ್ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಮತದಾರರನ್ನು ಸೆಳೆದಿದ್ದರು. ಈ ಪ್ರವಾಸಗಳು ಚುನಾವಣಾ ಸಿದ್ಧತೆಗಳು, ರೋಡ್ ಶೋಗಳು, ಸಾರ್ವಜನಿಕ ಸಭೆಗಳು, ಕಿಸಾನ್ ಪಂಚಾಯತ್, ಸಮಾವೇಶಗಳಿಗಾಗಿ ಪಕ್ಷದ ಕಾರ್ಯಕರ್ತರ ಸಭೆ ಸೇರಿದಂತೆ ಪತ್ರಿಕಾಗೋಷ್ಠಿಯನ್ನು ಒಳಗೊಂಡಿರುತ್ತದೆ. ಜೊತೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಣ್ಣ ಸೈಕಲ್ ಸವಾರಿಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಅವರು ದೇವಸ್ಥಾನ ಪ್ರವಾಸಗಳಿಗೆ ಹೋಗುವ ಮೂಲಕ ಹಿಂದೂ, ಮುಸ್ಲಿಂ ಮತ್ತು ಬೌದ್ಧ ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು. ಸದ್ಯ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಅಖಿಲೇಶ್ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ.

New Year Uttar Pradesh Assembly Election 2022: Will Akhilesh Yadavs new year be granted?

ಚುನಾವಣೆಯಲ್ಲಿ ಗೆಲ್ಲಲು ಅಖಿಲೇಶ್ ಅವರು ಮಹಾನ್ ದಳ, ರಾಜ್ಭರ್ ಅವರ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ, ಹಿಂದೆ ಬಿಜೆಪಿಯ ಮಿತ್ರ ಪಕ್ಷ, ಜಾಟ್ ನೇತೃತ್ವದ ರಾಷ್ಟ್ರೀಯ ಲೋಕದಳ ಮತ್ತು ಸಂಜಯ್ ಚೌಹಾಣ್ ನೇತೃತ್ವದ ಜನತಾ ಪಕ್ಷ (ಸಮಾಜವಾದಿ) ನಂತಹ ಸಣ್ಣ ಜಾತಿಗಳ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಚಿಕ್ಕಪ್ಪ ಶಿವಪಾಲ್ ಯಾದವ್ ಜೊತೆಗಿನ ವಿವಾದದಿಂದಾಗಿ ಸಾಕಷ್ಟು ನಷ್ಟವಾಗಿದೆ. ಈ ಬಾರಿ ಶಿವಪಾಲ್ ಯಾದವ್ ಅವರೊಂದಿಗೆ ಇದ್ದಾರೆ. ಅವರು ವಿವಿಧ ಜಾತಿ ಗುಂಪುಗಳಿಂದ ಪಕ್ಷ ವಿಸ್ತರಿಸಲು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

New Year Uttar Pradesh Assembly Election 2022: Will Akhilesh Yadavs new year be granted?

ಆದಾಗ್ಯೂ, ವಿಧಾನಸಭೆಯಲ್ಲಿ ಬಹುಮತವನ್ನು ಪಡೆಯಲು ಎಸ್‌ಪಿಗೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಹಾಗೇ ಉಳಿದಿದೆ. 'ಅದು ಅಸಾಧ್ಯವೇನಲ್ಲ ಎನ್ನುತ್ತಾರೆ ಸಮಾಜವಾದಿ ಪಕ್ಷದ ನಾಯಕ ಹಾಗೂ ರಾಜಕೀಯ ವಿಶ್ಲೇಷಕ ಸುಧೀರ್ ಪನ್ವಾರ್. ರಾಜ್ಯದ ಜನರು ಅಖಿಲೇಶ್ ಅವರ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ "ವಿನಾಶಕಾರಿ" ಆಡಳಿತದಿಂದ ಬೇಸತ್ತ ಜನರು ಅಖಿಲೇಶ್ ಅವರನ್ನು ಮರು ಆಯ್ಕೆ ಮಾಡಲು ಬಯಸುತ್ತಾರೆ' ಎಂದಿದ್ದಾರೆ.

Recommended Video

      ಹೊಸ ಕಾರ್ಮಿಕ‌ ನೀತಿ ಸಂಹಿತೆ:ಯಾವ್ಯಾವ ರಾಜ್ಯದಲ್ಲಿ ವಾರಕ್ಕೆ 4 ದಿನ ಕೆಲಸ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+