Get Updates
Get notified of breaking news, exclusive insights, and must-see stories!

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ಮೇಲೆ ನಮಾಜ್‌ ನಿಲ್ಲಿಸಿದ್ದೇವೆ: ಯೋಗಿ

ಲಕ್ನೋ, ಮೇ 23: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈದ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಓದುವುದನ್ನು ನಿಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ತೋರಿಸಿದರು ಮತ್ತು ಉತ್ತರ ಪ್ರದೇಶದಲ್ಲಿ ರಾಮನವಮಿ ಸಂದರ್ಭದಲ್ಲಿ ಯಾವುದೇ ಕೋಮು ಘರ್ಷಣೆಗಳಿಲ್ಲ. "ಉತ್ತರ ಪ್ರದೇಶದಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯದಲ್ಲಿ ಎಲ್ಲಿಯೂ ಹಿಂಸಾಚಾರ ನಡೆದಿಲ್ಲ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಈದ್ ಮತ್ತು ಅಲ್ವಿದಾ ಜುಮಾ (ರಂಜಾನ್‌ನ ಕೊನೆಯ ಶುಕ್ರವಾರ) ನಮಾಜ್ ಅನ್ನು ರಸ್ತೆಯಲ್ಲಿ ನಡೆಸಲಾಗಿಲ್ಲ. " ಎಂದು ಯೋಗಿ ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಶ್ಲಾಘಿಸಿದ ಅವರು, 2017ರಿಂದ ಇಲ್ಲಿಯವರೆಗೆ ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ಗಲಭೆ ಘಟನೆ ನಡೆದಿಲ್ಲ ಎಂದು ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಒತ್ತಿ ಹೇಳಿತ್ತು. ಈ ಹಿಂದೆ ಮುಜಾಫರ್‌ನಗರ, ಮೀರತ್‌, ಮೊರಾದಾಬಾದ್‌ ಮತ್ತಿತರ ಕಡೆ ಗಲಭೆ ನಡೆಯುತ್ತಿತ್ತು. ತಿಂಗಳುಗಟ್ಟಲೆ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಗಲಭೆ ನಡೆದಿರಲಿಲ್ಲ. ರಾಜ್ಯದಲ್ಲಿನ ಅಕ್ರಮ ಕಸಾಯಿ ಖಾನೆಗಳನ್ನು ನಮ್ಮ ಸರ್ಕಾರ ಮುಚ್ಚಿದೆ. ಗೋವುಗಳನ್ನು ಸುರಕ್ಷಿತವಾಗಿಡಲು ಗೋಶಾಲೆ ನಿರ್ಮಿಸಿದ್ದೇವೆ. ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದಿದ್ದೇವೆ. ನಮ್ಮ ಸರ್ಕಾರ 700 ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳನ್ನು ಪುನರ್ ನಿರ್ಮಾಣ ಮಾಡಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸಾರ್ವಜನಿಕ ಸೇವೆಗಾಗಿ ದೇಣಿಗೆ ನಿಲ್ಲಿಸಲಾಗಿದೆ

ಸಾರ್ವಜನಿಕ ಸೇವೆಗಾಗಿ ದೇಣಿಗೆ ನಿಲ್ಲಿಸಲಾಗಿದೆ

2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶದಲ್ಲಿ ಆಗಿರುವ ಬದಲಾವಣೆಗಳನ್ನು ಪಟ್ಟಿ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯುಪಿ ಈ ಹಿಂದೆ ಕ್ಷುಲ್ಲಕ ವಿಷಯಗಳ ಗಲಭೆಗಳಿಗೆ ಹೆಸರುವಾಸಿಯಾಗಿದೆ, ಆದರೆ ರಸ್ತೆಗಳಲ್ಲಿ ಅಲ್ವಿದಾ ಮತ್ತು ಈದ್ ನಮಾಜ್ ನೀಡದಿರುವುದು ಇದೇ ಮೊದಲು ಆಗಿದೆ. ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುವಾಗ ಧಾರ್ಮಿಕ ಸ್ಥಳಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಮತ್ತು ಸಾರ್ವಜನಿಕ ಸೇವೆಗಾಗಿ ದೇಣಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಈಗ ರಾಜ್ಯದಲ್ಲಿ ಯಾವುದೇ ಗಲಭೆ ಆಗಿಲ್ಲ

ಈಗ ರಾಜ್ಯದಲ್ಲಿ ಯಾವುದೇ ಗಲಭೆ ಆಗಿಲ್ಲ

"ಕೇಂದ್ರ ಸರ್ಕಾರದ ಕನಿಷ್ಠ ನಾಲ್ಕು ಡಜನ್ ಯೋಜನೆಗಳಲ್ಲಿ ಯುಪಿ ಅನುಷ್ಠಾನದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. 2017 ರ ಮೊದಲು, ಯುಪಿ ಯಾವುದೇ ಯೋಜನೆಯಲ್ಲಿ ಎಂದಿಗೂ ಮುಂಚೂಣಿಯಲ್ಲಿರಲಿಲ್ಲ. 2012 ಮತ್ತು 202017 ರ ನಡುವೆ ರಾಜ್ಯವು 700 ಕ್ಕೂ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗಿದೆ, ಈ ಕಾರಣದಿಂದಾಗಿ, ರಾಜ್ಯದ ಪ್ರದೇಶಗಳು ತಿಂಗಳುಗಳವರೆಗೆ ಕರ್ಫ್ಯೂ ಅಡಿಯಲ್ಲಿಯೇ ಇದ್ದವು. ಆದರೆ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಗಲಭೆ ನಡೆದಿಲ್ಲ' ಎಂದು ಸಿಎಂ ಹೇಳಿದರು.

ಇಂದು ಯುಪಿಯ ಪ್ರತಿಯೊಬ್ಬ ನಿವಾಸಿಯೂ ಸುರಕ್ಷಿತ

ಇಂದು ಯುಪಿಯ ಪ್ರತಿಯೊಬ್ಬ ನಿವಾಸಿಯೂ ಸುರಕ್ಷಿತ

ಆರ್‌ಎಸ್‌ಎಸ್- ಸಂಯೋಜಿತ ನಿಯತಕಾಲಿಕೆಗಳಾದ ‘ಆರ್ಗನೈಸರ್' ಮತ್ತು ‘ಪಾಂಚಜನ್ಯ'ದ 75ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಮಾತನಾಡುತ್ತಿದ್ದರು. "ಇಂದು ಯುಪಿಯ ಪ್ರತಿಯೊಬ್ಬ ನಿವಾಸಿಯೂ ಸುರಕ್ಷಿತವಾಗಿರುತ್ತಾನೆ ಮತ್ತು ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ರಕ್ಷಿತ ಮತ್ತು ಸುರಕ್ಷತೆಯನ್ನು ಅನುಭವಿಸುತ್ತಾರೆ" ಎಂದು ಸಿಎಂ ಹೇಳಿದರು. ಈ ಕಾರಣದಿಂದಲೇ ಆದಿ ಅಬಾದಿ (ಮಹಿಳೆಯರು) ಜಾತಿ ಮತ್ತು ಧರ್ಮದ ಗಡಿರೇಖೆಗಳನ್ನು ಮೀರಿ ಬಿಜೆಪಿಗೆ ಮತ ಹಾಕಿದರು.

700 ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳನ್ನು ಪುನರ್ನಿರ್ಮಿಸಿದೆ

700 ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳನ್ನು ಪುನರ್ನಿರ್ಮಿಸಿದೆ"

"ಸರ್ಕಾರ ರಚನೆಯ ನಂತರ, ರಾಮ ನವಮಿ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಹಿಂಸಾಚಾರ ವರದಿಯಾಗಿದೆ ಆದರೆ ಯುಪಿ ಶಾಂತಿಯುತವಾಗಿತ್ತು," "ನಮ್ಮ ಸರ್ಕಾರ ರಾಜ್ಯದಲ್ಲಿನ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿದೆ. ಗೋವುಗಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ನಾವು ರಾಜ್ಯದಲ್ಲಿ ಗೋಶಾಲೆಯನ್ನು ನಿರ್ಮಿಸಿದ್ದೇವೆ. ನಾವು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ಸಹ ತೆಗೆದುಹಾಕಿದ್ದೇವೆ. ನಮ್ಮ ಸರ್ಕಾರವು 700 ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳನ್ನು ಪುನರ್ನಿರ್ಮಿಸಿದೆ" ಎಂದು ಯೋಗಿ ಹೇಳಿದರು. .

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+