ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕಡೆಯವರು ಮಾಡಿದ್ದೇನು ಗೊತ್ತೇ?
ಲಕ್ನೋ, ಅಕ್ಟೋಬರ್ 23: ನಾವು ಎಷ್ಟೇ ಮುಂದುವರಿದಿದ್ದೇವೆ ಎಂದರೂ ಕೆಲವು ಸಾಮಾಜಿಕ ಪಿಡುಗುಗಳು ನಿರ್ಮೂಲನೆಯಾಗುವ ಸೂಚನೆಗಳು ಕಂಡುಬರುತ್ತಿಲ್ಲ. ಅವುಗಳಲ್ಲಿ ವರದಕ್ಷಿಣೆ ಕಿರುಕುಳವೂ ಒಂದು. ಮದುವೆ ಮನೆಯಲ್ಲಿ ವರದಕ್ಷಿಣೆ ಸಾಲಲಿಲ್ಲ ಎಂಬ ತಕರಾರು ತೆಗೆದು ಹೆಣ್ಣು ಹೆತ್ತವರ ಸಂಕಟ ಹೆಚ್ಚಿಸುವ ಕಿಡಿಗೇಡಿಗಳ ಸಂಖ್ಯೆ ಕಡಿಮೆಯಾಗಿಲ್ಲ.
ಹಣದ ದುರಾಸೆಯ ಬೆನ್ನು ಬಿದ್ದವರಿಗೆ ಕೆಲವರು ಅನಿವಾರ್ಯವಾಗಿ ಶರಣಾಗುತ್ತಾರೆ. ಮದುವೆ ನಿಂತುಹೋಗುತ್ತದೆ, ಮರ್ಯಾದೆಗೆ ಕುಂದಾಗುತ್ತದೆ, ಮಗಳ ಭವಿಷ್ಯ ಹಾಳಾಗುತ್ತದೆ ಎಂಬ ಅನೇಕ ಕಾರಣಗಳಿಂದಾಗಿ ಹೆಣ್ಣುಮಗಳ ಕಡೆಯವರು ಗಂಡಿನ ಕಡೆಯವರ ಬೇಡಿಕೆಗಳಿಗೆಲ್ಲ ಒಪ್ಪಿಕೊಂಡು ಹೈರಾಣಾಗುತ್ತಾರೆ.
ಆದರೆ, ಮನಸ್ಸು ಮಾಡಿದರೆ ಅಂತಹವರಿಗೆ ತಾವೇ ಶಿಕ್ಷೆ ನೀಡಬಹುದು. ಅದರ ಮೂಲಕ ಹಣದ ಅಮಲು ಹೊತ್ತಿದವರಿಗೆ ಮೈಚಳಿ ಬಿಡಿಸಬಹುದು ಎಂಬ ಮಾನಸಿಕ ಸ್ಥೈರ್ಯ ಮೂಡಿದರೆ ಬಹುಶಃ ಈ ಪಿಡುಗಿಗೆ ಅಂತ್ಯ ಹಾಡಲು ಸಾಧ್ಯ. ಇದಕ್ಕೊಂದು ಉತ್ತಮ ನಿದರ್ಶನ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ವರದಕ್ಷಿಣಿಗೆ ಬೇಡಿಕೆಯ ಕಿರುಕುಳದಿಂದ ಬೇಸೆತ್ತ ವಧುವಿನ ಕಡೆಯವರು ರೊಚ್ಚಿಗೆದ್ದು ವರ, ಆತನ ತಂದೆ ಮತ್ತು ಸಹೋದರನ ಅರ್ಧ ತಲೆಯನ್ನು ಬೋಳಿಸಿದ ಘಟನೆ ಲಕ್ನೋದ ಕುರ್ರಮ್ನಗರದಲ್ಲಿ ನಡೆದಿದೆ.

ಪಲ್ಸರ್ ಬೇಡ, ಅಪಾಚೆ ಬೇಕು ಎಂದ
ತರಕಾರಿ ವ್ಯಾಪಾರಿಯಾಗಿದ್ದ ವಧುವಿನ ತಂದೆಯ ಬಳಿ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ ವರನ ಕಡೆಯವರು, ಅದರ ಪ್ರಮಾಣವನ್ನು ಒಂದು ವಾರದಿಂದ ಹೆಚ್ಚಿಸುತ್ತಲೇ ಇದ್ದರು.
ಮೊದಲು ವರದಕ್ಷಿಣೆಯಾಗಿ ಮೋಟಾರ್ ಸೈಕಲ್ ನೀಡುವಂತೆ ವರ ಅಬ್ದುಲ್ ಕಲಾಂ ಬೇಡಿಕೆ ಇರಿಸಿದ್ದ. ವಧುವಿನತಂದೆ ಹಣ ಹೊಂಚಿಸಿ ಪಲ್ಸರ್ ಬೈಕ್ ಕೊಡಿಸಿದರೆ, ತನಗೆ ಆ ಬ್ರ್ಯಾಂಡ್ನ ಬೈಕ್ ಬೇಡ, ಟಿವಿಎಸ್ ಅಪಾಚೆ ಬೈಕ್ ಬೇಕು ಎಂದು ಹಟ ಹಿಡಿದಿದ್ದ.

ಚಿನ್ನದ ನೆಕ್ಲೇಸ್ ಬೇಕೆಂದ
ವರನ ಬೇಡಿಕೆಗೆ ಮಣಿದ ವಧುವಿನ ತಂದೆ, ಆತನದೇ ಆಯ್ಕೆಯ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದರು. ಆದರೆ, ಮದುವೆ ದಿನ ಚಿನ್ನದ ನೆಕ್ಲೇಸ್ ನೀಡುವಂತೆ ಹೊಸ ಬೇಡಿಕೆ ಇರಿಸಿದಾಗ ಅವರ ತಾಳ್ಮೆಯ ಕಟ್ಟೆಯೊಡೆಯಿತು.
ವಧುವಿನ ತಂದೆ ಮತ್ತು ವರನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ವರನ ಕಡೆಯವರು ಮದುವೆ ನಿಲ್ಲಿಸಿ ಮನೆಗೆ ಹೊರಡಲು ಸಿದ್ಧರಾದರು.

ಕೇಶಮುಂಡನ ಮಾಡಿದರು
ಸ್ಥಳದಲ್ಲಿದ್ದ ವಧುವಿನ ಕಡೆಯವರು ಮತ್ತು ಸ್ಥಳೀಯರು ವರ, ಆತನ ತಂದೆ ಮತ್ತು ಸಹೋದರನನ್ನು ಸುತ್ತವರಿದು ಸಮೀಪದ ಕೋಣೆಯೊಂದಕ್ಕೆ ಅವರನ್ನು ಎತ್ತಿಕೊಂಡು ಹೋಗಿ ಅರೆಬರೆ ಕೇಶಮುಂಡನ ಮಾಡಿದರು. ವಧುವಿನ ಕಡೆಯವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಪೊಲೀಸರು ಅಲ್ಲಿಗೆ ತೆರಳಿ ಬಂಧನದಲ್ಲಿದ್ದ ವರ ಮತ್ತು ಆತನ ಕಡೆಯವರನ್ನು ಬಿಡಿಸಿದರು. ವರನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಕಾನೂನಿನ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
|
ಮದುವೆಗೆ ನಿರಾಕರಿಸಿದರು
ಮೋಟಾರ್ ಸೈಕಲ್ ಬೇಕೆಂದು ಐದು ದಿನಗಳ ಹಿಂದೆ ಅವರು ಬೇಡಿಕೆ ಇರಿಸಿದರು. ಬಳಿಕ ಮದುವೆ ದಿನ ಚಿನ್ನದ ನೆಕ್ಲೇಸ್ ಬೇಕು ಎಂದರು. ಅವುಗಳನ್ನು ಕೊಡಲು ಆಗುವುದಿಲ್ಲ ಎಂದಾಗ ಮದುವೆಯಾಗಲು ನಿರಾಕರಿಸಿದರು. ಅವರ ತಲೆಯನ್ನು ಯಾರು ಬೋಳಿಸಿದರೋ ನನಗೆ ತಿಳಿದಿಲ್ಲ ಎಂದು ವಧುವಿನ ಅಜ್ಜಿ ಹೇಳಿದ್ದಾರೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications