ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ
ನವದೆಹಲಿ, ಮಾರ್ಚ್ 03: ಅತ್ಯಂತ ಜನಪ್ರಿಯ ಆಯುಧ ಎಕೆ 47 ಹೋಲುವ ಎಕೆ -203 ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ರಷ್ಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತವು ಸುಮಾರು 7,50,000 ರೈಫಲ್ ಗಳನ್ನು ಉತ್ಪಾದಿಸಿ ಭಾರತೀಯ ಭದ್ರತಾ ಪಡೆಗಳ ಬಳಕೆಗೆ ನೀಡಲಾಗುತ್ತದೆ.
ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆ ಬಳಸುತ್ತಿರುವ INSAS ರೈಫಲ್ ಗಳನ್ನು ಬದಲಾಯಿಸಿ ಎಕೆ 203ಗಳನ್ನು ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪ್ಯಾರಾ ಮಿಲಿಟರಿ ಹಾಗೂ ರಾಜ್ಯದ ಪೊಲೀಸ್ ಪಡೆಗಳಿಗೂ ನೀಡಲಾಗುತ್ತದೆ. ಮುಂಬರುವ 15 ರಿಂದ 20 ವರ್ಷಗಳಲ್ಲಿ ಭಾರತದ ಎಲ್ಲಾ ಭದ್ರತಾ ಪಡೆಗಳ ಕೈಲಿ ಎಕೆ 203 ರೈಫಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಅಮೆರಿಕದ ಸಿಗ್ ಸಾರ್ ಜತೆ ಒಪ್ಪಂದ ಮಾಡಿಕೊಂಡಿದ್ದು, 7.69 ಎಂಎಂ 59 ಕ್ಯಾಲಿಬೆರ್ ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲಾಗುತ್ತಿದೆ.
ಗಡಿಯಲ್ಲಿ ಉಗ್ರರು ಹಾಗೂ ಪಾಕಿಸ್ತಾನದ ನಡುವಿನ ಶೀತಲ ಸಮರದಲ್ಲಿ ತಕ್ಕ ಉತ್ತರ ನೀಡಲು ಭದ್ರತಾ ಪಡೆಗೆ ಅತ್ಯಾಧುನಿಕ ಆಯುಧವನ್ನು ನೀಡುವುದು ಮುಖ್ಯ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಎಕೆ 47: 2015ರ ಆರಂಭದಲ್ಲೇ ಅಲೆಕ್ಸಿ ಕ್ರಿವೋರುಚಾಕೋ ಅವರು ಕಲಷ್ನಿಕೋವ್ ರೈಫಲ್ ಅನ್ನು ಭಾರತಕ್ಕೆ ತರಲು ಯತ್ನಿಸಿದ್ದರು. 5.56 ಎಂಎಂ ಹಾಗೂ 7.62 ಎಂಎಂ ಸ್ವಯಂಚಾಲಿತ ರೈಫಲ್ ಗೆ ಭಾರತದಲ್ಲಿ ಬೇಡಿಕೆ ಇದೆ.
20ನೇ ಶತಮಾನದ ಆವಿಷ್ಕಾರಗಳಲ್ಲಿ ಒಂದೆನಿಸಿರುವ ಎಕೆ 47 ಆಯುಧ ರಫ್ತು ಮಾಡುವುದನ್ನು ರಷ್ಯಾ ಎಂದೋ ನಿಲ್ಲಿಸಿಬಿಟ್ಟಿದೆ. 1946-47ರಲ್ಲಿ ಮಿಕೈಲ್ ಕಲಷ್ನಿಕೋವ್ ವಿನ್ಯಾಸಗೊಳಿಸಿದ ಎಕೆ 47 ರೈಫಲ್ ಗಳು ವಿಶ್ವದ ಅತ್ಯಂತ ಜನಪ್ರಿಯ ಆಯುಧಗಳಲ್ಲಿ ಒಂದಾಗಿದೆ. ಹಲವು ದೇಶಗಳ ಅಧಿಕೃತ ಸುರಕ್ಷತಾ ಪಡೆಗಳ ಕೈಗಳಲ್ಲಿ ಇರಬೇಕಾದ ಎಕೆ 47, ವಿಧ್ವಂಸಕ ಕೃತ್ಯ ಎಸಗುವವರ ಕೈಸೇರುತ್ತಿದೆ ಎಂಬುದು ಸರ್ವವಿದಿತ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications