ಯಾವುದೇ ಮಹಿಳೆ ಆಯ್ಕೆಯಿಂದ ಹಿಜಾಬ್ ಧರಿಸುವುದಿಲ್ಲ: ಯೋಗಿ ಆದಿತ್ಯನಾಥ್

ಲಕ್ನೋ ಫೆಬ್ರವರಿ 17: ಹಿಜಾಬ್ ಗದ್ದಲದ ಮಧ್ಯೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಂ ಮಹಿಳೆಯರ ಮೇಲೆ ಹಿಜಾಬ್ ಅನ್ನು ಬಲವಂತವಾಗಿ ಹೇರಲಾಗುತ್ತದೆ ಮತ್ತು ಯಾರೂ ಆಯ್ಕೆಯಿಂದ ಹಿಜಾಬ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್, "ಯಾವುದೇ ಮಹಿಳೆ ಆಯ್ಕೆಯಿಂದ ಹಿಜಾಬ್ ಧರಿಸುವುದಿಲ್ಲ. ಮಹಿಳೆಯರು ಎಂದಾದರೂ ಆಯ್ಕೆಯಿಂದ ತ್ರಿವಳಿ ತಲಾಖ್ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾರೆಯೇ? ಆ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಕೇಳಿ" ಎಂದು ಹೇಳಿದ್ದಾರೆ.

ಮದರಸಾಗಳಲ್ಲಿ ಮತ್ತು ಮನೆಯಲ್ಲಿ ಹಿಜಾಬ್ ಧರಿಸಿ, ಶಾಲೆ-ಕಾಲೇಜುಗಳಲ್ಲಿ ಅಲ್ಲ: ಪ್ರಜ್ಞಾ
"ನಾನು ಅವರ ಕಣ್ಣೀರನ್ನು ನೋಡಿದ್ದೇನೆ ... ಅವರು ತಮ್ಮ ಅಗ್ನಿಪರೀಕ್ಷೆಯ ಬಗ್ಗೆ ಮಾತನಾಡುವಾಗ ಕಣ್ಣೀರು ಸುರಿಸುತ್ತಿದ್ದರು. ತ್ರಿವಳಿ ತಲಾಖ್ ರದ್ದುಪಡಿಸಿದ್ದಕ್ಕಾಗಿ ಜೌನ್‌ಪುರದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ವೈಯಕ್ತಿಕ ಉಡುಪು ವ್ಯಕ್ತಿಯ ಆಯ್ಕೆಗೆ ಸೀಮಿತವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Hijab Row: No Woman Wears Hijab by Choice: Yogi Adityanath
"ನಾನು ಯಾವುದೇ ಅಧಿಕಾರಿಯ ಮೇಲೆ ಆಯ್ಕೆಯನ್ನು ಒತ್ತಾಯಿಸಲಿಲ್ಲ. ನನ್ನ ಕಛೇರಿಯಲ್ಲಿರುವ ಎಲ್ಲರಿಗೂ ಭಾಗುವಾ [ಕೇಸರಿ] ಧರಿಸಲು ನಾನು ಕೇಳಬಹುದೇ? ನಾನು ಇದನ್ನು ನನ್ನ ಪಕ್ಷದ ಎಲ್ಲರಿಗೂ ಹೇಳಬಹುದೇ? ಇದು ನನಗೆ ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯರಾಗಿ ಇರಬೇಕು ಮತ್ತು ಒಂದು ವೇಳೆ ಸಂಸ್ಥೆ ಆಗಿದ್ದರೆ, ಆ ಸಂಸ್ಥೆಯ ಶಿಸ್ತಿನಂತೆ ಇರಬೇಕಾಗುತ್ತದೆ'' ಎಂದರು.


ಶಾಲಾ-ಕಾಲೇಜುಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಹಿಜಾಬ್ ಧರಿಸುವುದರ ವಿರುದ್ಧ ಕರ್ನಾಟಕ ವ್ಯಾಪಕ ಪ್ರತಿಭಟನೆಗೆ ಸಾಕ್ಷಿಯಾಗುತ್ತಿರುವಾಗ ಯೋಗಿ ಆದಿತ್ಯನಾಥ್ ಅವರ ಕಾಮೆಂಟ್‌ಗಳು ಬಂದಿವೆ. ಒಂದು ತಿಂಗಳ ಹಿಂದೆ ರಾಜ್ಯದ ಕೆಲವು ಭಾಗಗಳಲ್ಲಿ ಕೆಲವು ಮುಸ್ಲಿಂ ಹುಡುಗಿಯರನ್ನು ಕಾಲೇಜುಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದಾಗ ವಿಷಯವು ಭುಗಿಲೆದ್ದಿತು. ಅಂದಿನಿಂದ ರಾಜ್ಯದಲ್ಲಿ ಹಿಜಾಬ್ ಪರ ಮತ್ತು ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ರಾಷ್ಟ್ರೀಯ ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ಪರಸ್ಪರ ವಾಗ್ದಾಳಿ ಮಾಡುವುದರೊಂದಿಗೆ ವಿವಾದವು ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ಈ ವಿಷಯ ಆರಂಭವಾದದ್ದು ಕರ್ನಾಟಕದಿಂದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಡುಪಿಯ ಕಾಲೇಜೊಂದರಲ್ಲಿ 6 ಹುಡುಗಿಯರು ಹಿಜಾಬ್ ಧರಿಸಿ ತರಗತಿಗೆ ಬಂದಾಗ, ಶಾಲೆಯಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದಾಗ ಹುಡುಗಿಯರು ಪ್ರತಿಭಟನೆ ನಡೆಸಿದರು. ಅದು ಅವರ ಧರ್ಮಕ್ಕೆ ಸಂಬಂಧಿಸಿದ್ದು ಹಾಗಾಗಿ ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕೆಲವರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ತಮಗೆ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಎಂದು ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದರು. ನಂತರ ಈ ವಿಚಾರವಾಗಿ ವಾಗ್ವಾದ ಹೆಚ್ಚಾಯಿತು. ಕ್ರಮೇಣ ಈ ವಿವಾದ ರಾಜ್ಯದ ಇತರ ಭಾಗಗಳಿಗೂ ಹಬ್ಬಿದ್ದು ಮಾತ್ರವಲ್ಲದೆ ಮುಸ್ಕಾನ್ ಎಂಬ ವಿದ್ಯಾರ್ಥಿನಿಯನ್ನು ಶಾಲೆಯೊಳಗೆ ಹಿಜಾಬ್ ಧರಿಸದಂತೆ ತಡೆಯಲಾಯಿತು. ಮುಸ್ಕಾನ್ ಅವರು ಇದನ್ನು ನಿರಾಕರಿಸಿದಾಗ, ಕೆಲವು ಕಿಡಿಗೇಡಿಗಳು ಅವರ ಮುಂದೆ 'ಜೈ ಶ್ರೀ ರಾಮ್' ಎಂದು ಘೋಷಣೆಗಳನ್ನು ಕೂದರು. ಅದಕ್ಕೆ ಪ್ರತಿಯಾಗಿ ಮುಸ್ಕಾನ್ 'ಅಲ್ಲಾ ಹೋ ಅಕ್ಬರ್' ಎಂದು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿಗೆ ಹಲವು ರಾಜ್ಯಗಳಿಂದ ಮುಸ್ಲೀಂ ಮುಖಂಡರು ದುಬಾರಿ ಉಡುಗೊರೆ ನೀಡಿದರು. ಮುಸ್ಕಾನ್‌ ಗೆ ಉಡುಗೊರೆ ನೀಡಿ ಮುಕಂಡರು ಮತ್ತಷ್ಟು ಪ್ರತಿಭಟನೆಗೆ ಪುಷ್ಠಿ ನೀಡಿದಂತಾಗಿತ್ತು.

ಸದ್ಯ ಈ ವಿಚಾರವನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಂತತೆ ಕಾಪಾಡು ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಶಾಲಾ ಕಾಲೇಜುಗಳ ಸುತ್ತಲೂ ಯಾವುದೇ ಪ್ರತಿಭಟನೆಗೆ ಅವಕಾಶವನ್ನು ರದ್ದುಗೊಳಿಸಲಾಗಿದೆ. ಆದರೂ ಹಾಸನದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹಿಜಾಬ್ ಕಿಚ್ಚು ಸದ್ಯಕ್ಕೆ ತಣ್ಣಗಾಗುವಂತೆ ಕಾಣಿಸುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+