ಮೀರತ್ನಲ್ಲಿ ಬಾವುಲಿಗಳ ಸರಣಿ ಸಾವು, ಹೆಚ್ಚಿದ ಆತಂಕ
ಮೀರತ್, ಮೇ 7:ಮೀರತ್ನಲ್ಲಿ ಬಾವುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಕೊರೊನಾ ವೈರಸ್ ಭಯದಿಂದ ಹೊರಬರಲು ಸಾಧ್ಯವಾಗಿಲ್ಲ, ಇದರ ನಡುವೆಯೇ ಬಾವುಲಿಗಳ ಸರಣಿ ಸಾವು ಮತ್ತಷ್ಟು ಭಯ ಹುಟ್ಟಿಸುತ್ತಿದೆ.
ಮೀರತ್ ಸಮೀಪ್ ಮೆಹರೋಲಿ ಗ್ರಾಮದ ಕೆರೆಯ ಬಳಿ ಎರಡೇ ದಿನದಲ್ಲಿ 8 ಬಾವುಲಿಗಳು ಸತ್ತು ಹೋಗಿವೆ. ಸತ್ತಿರುವ ಬಾವುಲಿಗಳಿಂದ ಕೊರೊನಾ ಸೋಂಕು ಹರಡಬಹುದು ಎನ್ನುವ ಆತಂಕ ತಲೆದೋರಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55 ಸಾವಿರದ ಗಡಿ ದಾಟಿದೆ.15267 ಮಂದಿ ಗುಣಮುಖರಾಗದ್ದಾರೆ. 1894 ಮಂದಿ ಮೃತಪಟ್ಟಿದ್ದಾರೆ.

ವಿದ್ಯುತ್ ಶಾಕ್ನಿಂದ ಮೃತಪಟ್ಟಿವೆಯೇ?
ಏಪ್ರಿಲ್ 29 ರಂದು ಬಾವುಲಿಗಳು ಸತ್ತಿದ್ದವು, ಈ ಭಾಗದಲ್ಲಿ ಹಾದುಹೋಗುವ ವಿದ್ಯುತ್ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್ ಹರಿದಿದ್ದರಿಂದ ಇವುಗಳು ಸತ್ತಿವೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ತಜ್ಞರು ತಿಳಿಸಿದ್ದಾರೆ.

ಬಾವುಲಿಗಳನ್ನು ಸಾಯಿಸಿರುವ ಬಗ್ಗೆ ಶಂಕೆ
ಪಕ್ಷಿ ವೀಕ್ಷಕರು ಅಥವಾ ಯಾರೋ ಅಪರಿಚಿತರು ಬಾವುಲಿಗಳನ್ನು ಸಾಯಿಸಿರುವ ಸಾಧ್ಯತೆ ಇದೆ ಎಂಬ ಶಂಕೆಯು ವ್ಯಕ್ತವಾಗಿದೆ. ಕೊರೊನಾ ವೈರಸ್ ಹರಡಲು ಬಾವುಲಿಗಳೇ ಕಾರಣ ಎಂಬುದು ತಿಳಿದ ನಂತರದಲ್ಲಿ ಅವುಗಳ ವಿರುದ್ಧ ಜನರು ದ್ವೇಷ ಸಾಧಿಸುತ್ತಿದ್ದಾರೆ ಹೀಗಾಗಿ ಜನರೇ ಕೊಂದಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಫಸಲು ರಕ್ಷಣೆಗೆ ಕೀಟನಾಶಕಗಳ ಸಿಂಪಡಣೆ
ಅಲ್ಲಿ ಸುತ್ತಮುತ್ತಲಿರುವ ತೋಟ ಸೇರಿದಂತೆ ಹಲವು ಕಡೆ ಕೀಟನಾಶಕಗಳನ್ನು ಸಿಂಪಡಿಸಲಾಗಿದೆ. ಬಾವುಲಿಗಳು ಅದರಿಂದಲೂ ಸತ್ತಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಾವುಲಿಗಳ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆದರೆ ಕೀಟನಾಶಕಗಳು ಕಾರಣವಲ್ಲ ಎಂದು ವರದಿ ಬಂದಿದೆ. ಬದಲಿಗೆ ವಿದ್ಯುತ್ ಆಘಾತವೇ ಕಾರಣ ಎಂದು ಸ್ಪಷ್ಟವಾಗಿದೆ.

ಅರ್ಧ ಕಿ.ಮೀ ದೂರದಲ್ಲಿದೆ ವಿದ್ಯುತ್ ಮಾರ್ಗ
ಬಾವುಲಿಗಳು ವಿದ್ಯುತ್ ಅಪಘಾತದಿಂದ ಸತ್ತಿವೆ ಎಂಬ ಐವಿಆರ್ಐ ವಾದವನ್ನು ಒಪ್ಪಲು ಮೆಹರೋಲಿ ಗ್ರಾಮದ ಮುಖ್ಯಸ್ಥ ಗಂಗಾರಾಮ್ ನಿರಾಕರಿಸಿದ್ದಾರೆ. ಬಾವುಲಿಗಳು ಸತ್ತಿರುವ ಪ್ರದೇಶದಿಂದ ಅಂದಾಜು ಅರ್ಧ ಕಿ.ಮೀ ದೂರದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ವಿದ್ಯುತ್ ಶಾಕ್ನಿಂದಲೇ ಸತ್ತಿದ್ದರೆ ಅಲ್ಲಿಯೇ ಅವುಗಳ ದೇಹ ಕಾಣಿಸಬೇಕಿತ್ತು ಎಂದು ಹೇಳಿದ್ದಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications