ಬಿಜೆಪಿಯಿಂದ ನನ್ನನ್ನು ಕೊಲ್ಲಲು ಪಿತೂರಿ: ರಾಕೇಶ್‌ ಟಿಕಾಯತ್‌

ನವದೆಹಲಿ, ಜೂ. 4: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ನನ್ನನ್ನು ಕೊಲ್ಲಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಮೀರತ್ ಜಿಲ್ಲೆಯ ಜಂಗೇತಿ ಗ್ರಾಮದ ಧರ್ಮೇಶ್ವರಿ ಫಾರ್ಮ್‌ನಲ್ಲಿ ನಡೆದ ಬಿಕೆಯು ಪರಿಶೀಲನಾ ಸಭೆಯಲ್ಲಿ ಟಿಕಾಯತ್ ಮಾತನಾಡಿದರು. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ತನ್ನ ಮೇಲೆ ನಡೆದ ಶಾಯಿ ದಾಳಿಯನ್ನು "ಉತ್ತಮ ಯೋಜಿತ ಪಿತೂರಿ" ಎಂದು ಟಿಕಾಯತ್‌ ಬಣ್ಣಿಸಿದ್ದಾರೆ. ಸರ್ಕಾರ ನನ್ನನ್ನು ಕೊಲ್ಲಲು ಬಯಸುತ್ತಿರುವುದಕ್ಕೆ ಕರ್ನಾಟಕ ಮತ್ತು ದೆಹಲಿಯಲ್ಲಿ ಅವರ ಮೇಲೆ ನಡೆದ ದಾಳಿಗಳು ಸಾಕಷ್ಟು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಟಿಕಾಯತ್ ಕುಟುಂಬ ಮತ್ತು ಸಂಘಟನೆಯನ್ನು (ಒಕ್ಕೂಟ) ಒಡೆಯಲು ಸರ್ಕಾರ ನನ್ನನ್ನು ಕೊಲ್ಲಲು ಬಯಸುತ್ತದೆ. ಆದರೆ ಇದು ಎಂದಿಗೂ ಸಂಭವಿಸುವುದಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ಸಲ್ಲಿಸಲು ದೆಹಲಿಯಲ್ಲಿರುವ ಅವರ ಮನೆಗೆ ಹೋದಾಗ ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಟಿಕಾಯತ್‌ ಆರೋಪಿಸಿದ್ದಾರೆ.

ಸರ್ಕಾರವು ವಿಧ್ವಂಸಕ ರಾಜಕೀಯದ ಮೂಲಕ ರೈತ ಸಂಘವನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವುದರಿಂದ ಈಗ ಆಂತರಿಕ ಕಲಹದಲ್ಲಿ ಹಾಳು ಮಾಡಲಾಗದ ನಿರ್ಣಾಯಕ ಕ್ಷಣವಾಗಿದೆ ಎಂದು ಅವರು ಒತ್ತಿ ಹೇಳಿದರು. "ಟಿಕಾಯತ್ ಕುಟುಂಬವು ಯಾವಾಗಲೂ ರೈತರ ಧ್ವನಿಯನ್ನು ಬಲವಾಗಿ ಎತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ. ಬಾಬಾ ಮಹೇಂದ್ರ ಸಿಂಗ್ ಟಿಕಾಯತ್ ನಂತರ, ನರೇಶ್ ಟಿಕಾಯತ್ ಈಗ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ" ಎಂದು ಅವರು ಪ್ರತಿಪಾದಿಸಿದರು.

 ಲಕ್ಷಾಂತರ ಟಿಕಾಯತ್‌ಗಳು ದೇಶದಲ್ಲಿ ಇದ್ದಾರೆ

ಲಕ್ಷಾಂತರ ಟಿಕಾಯತ್‌ಗಳು ದೇಶದಲ್ಲಿ ಇದ್ದಾರೆ

ರಾಕೇಶ್‌ ಟಿಕಾಯತ್‌ ತಮ್ಮ ಮೇಲೆ ಶಾಯಿ ದಾಳಿ ಮತ್ತು ಮಹಾತ್ಮ ಗಾಂಧಿಯವರ ಹತ್ಯೆಯ ನಡುವೆ ಹೋಲಿಕೆ ಮಾಡಿದರು. ಮಹಾತ್ಮಾ ಗಾಂಧೀಜಿಯನ್ನು ಸಂಚುಕೋರರು ಹತ್ಯೆ ಮಾಡಿದಂತೆಯೇ, ದೇಶ ಮತ್ತು ಅದರ ರೈತರ ಪರವಾಗಿ ಮಾತನಾಡುವ ಯಾರೇ ಆಗಲಿ ಸಂಚುಕೋರರಿಂದ ಹತ್ಯೆಗೀಡಾಗುತ್ತಾರೆ. ಒಬ್ಬ ಟಿಕಾಯತ್‌ಗೆ ಏನಾದರೂ ತೊಂದರೆಯಾದರೆ, ಲಕ್ಷಾಂತರ ಟಿಕಾಯತ್‌ಗಳು ದೇಶದಲ್ಲಿ ರೈತ ಧ್ವಜವನ್ನು ಹಾರಿಸಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.

 ಒಗ್ಗಟ್ಟಿನ ಹೋರಾಟದಿಂದ ಮಾತ್ರ ಫಲಿತಾಂಶ

ಒಗ್ಗಟ್ಟಿನ ಹೋರಾಟದಿಂದ ಮಾತ್ರ ಫಲಿತಾಂಶ

ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ನೀರಾವರಿಗೆ ಉಚಿತ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಕೊಳವೆ ಬಾವಿಗಳಿಗೆ ಮೀಟರ್‌ ಅಳವಡಿಸಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ, ಇದನ್ನು ಸಹಿಸುವುದಿಲ್ಲ. ಒಕ್ಕೂಟದ ವ್ಯಾಪ್ತಿಗೆ ಗರಿಷ್ಠ ಸಂಖ್ಯೆಯ ಜನರನ್ನು ಸೇರಿಸುವಂತೆ ರೈತರಲ್ಲಿ ಮನವಿ ಮಾಡಿದ ಟಿಕಾಯತ್‌ ಸರ್ಕಾರದ ವಿರುದ್ಧ ಪ್ರಬಲ ಮತ್ತು ಒಗ್ಗಟ್ಟಿನ ಹೋರಾಟ ಮಾತ್ರ ಫಲಿತಾಂಶವನ್ನು ತರುತ್ತದೆ ಎಂದು ಹೇಳಿದರು. ಸರಕಾರ ಸಂಧಾನ ಸಭೆಗೆ ಬರುವವರೆಗೂ ಹೋರಾಟ ಮುಂದುವರಿಯಲಿದೆ. ಅಲ್ಲಿಯವರೆಗೂ ಪರಿಹಾರ ಸಿಗುವುದಿಲ್ಲ ಎಂದು ತೀರ್ಮಾನಿಸಿದರು.

 ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ

ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿದ ಘಟನೆ ಮೇ 30ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ನಡೆದಿತ್ತು. ಕರ್ನಾಟಕ ರೈತ ಮುಖಂಡ ಕೆ. ಚಂದ್ರಶೇಖರ್ ಬೆಂಬಲಿಗರಿಂದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುಧ್ವೀರ್ ಸಿಂಗ್ ಮೇಲೆ ಕಪ್ಪು ಬಣ್ಣ ಎರಚಲಾಗಿತ್ತು.

 ಸ್ಥಳೀಯ ಪೊಲೀಸರ ಮೇಲೆ ಆರೋಪ

ಸ್ಥಳೀಯ ಪೊಲೀಸರ ಮೇಲೆ ಆರೋಪ

ಇದೇ ವೇಳೆ ಸ್ಥಳದಲ್ಲಿ ಜನರು ಒಬ್ಬರ ಮೇಲೆ ಒಬ್ಬರು ಕುರ್ಚಿಗಳನ್ನು ಎಸೆಯುವ ದೃಶ್ಯಗಳು ಕಂಡು ಬಂದಿದ್ದವು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟಿಕಾಯತ್, ಸ್ಥಳೀಯ ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜೊತೆಗೆ ಯಾವುದೇ ಭದ್ರತೆಯನ್ನು ನೀಡಲಾಗಿಲ್ಲ ಎಂದು ಆರೋಪಿಸಿದ್ದರು. ಈ ಘಟನೆಗೆ ಕರ್ನಾಟಕ ಸರ್ಕಾರದ ಬೆಂಬಲವಿದೆ ಎಂದು ಆರೋಪಿಸಿದ್ದರು.

Recommended Video

      ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ವಿರುದ್ಧ ಹೊಸ ಪ್ರತಿಭಟನೆ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+