ಅಸಾದುದ್ದೀನ್ ಓವೈಸಿ ಓರ್ವ 'ರಾಜಕೀಯ ಉಗ್ರ': ಬಿಜೆಪಿ ಶಾಸಕ
ಲಕ್ನೋ, ಜೂನ್ 30: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಓರ್ವ 'ರಾಜಕೀಯ ಉಗ್ರ' ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಚುನಾವಣೋತ್ತರ ಹಿಂಸಾಚಾರದ ಕುರಿತು ಮಾತನಾಡಿದ ಅವರು, ''ಓವೈಸಿ ಓರ್ವ ರಾಜಕೀಯ ಉಗ್ರ, ಅವರು ಜನರಿಗೆ ಪ್ರಚೋದನೆ ನೀಡಿದ ಸಮಾಜವನ್ನು ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ'' ಎಂದು ದೂರಿದರು.
''ಪಶ್ಚಿಮ ಬಂಗಾಳವು ಜಮ್ಮು-ಕಾಶ್ಮೀರದ ಹಾದಿಯಲ್ಲಿ ಸಾಗುತ್ತಿದೆ. ಅಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ''ಎಂದು ತಿಳಿಸಿದ್ದಾರೆ

''ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೆ ಎಐಎಂಐಎಂ ನಾಯಕ ಓವೈಸಿಗೆ ಭಾರತದ ಜಾತ್ಯತೀತತೆಯ ಬಗ್ಗೆ ನಂಬಿಕೆ ಇಡಬೇಕು. ಅಸಾದುದ್ದೀನ್ ಓವೈಸಿ ರಾಜಕೀಯ ಉಗ್ರ. ಅವರು ಸಮಾಜದಲ್ಲಿ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಓವೈಸಿ ರಾಜಕೀಯ ಭಯೋತ್ಪಾದಕ, ಸಮಾಜವನ್ನು ಪಚೋದಿಸುವುದು, ಶಾಂತಿ ಕದಡುವುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.












Click it and Unblock the Notifications