ರಾಮಮಂದಿರದ ಗರ್ಭಗುಡಿಗೆ ಸಿಎಂ ಆದಿತ್ಯನಾಥ್ ಶಂಕುಸ್ಥಾಪನೆ
ಅಯೋಧ್ಯೆ ಜೂನ್ 1: ಅಯೋಧ್ಯೆ ರಾಮಮಂದಿರ ನಿರ್ಮಾಣ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರದ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ ಭವ್ಯ ಮಂದಿರದ ಮೇಲ್ವಿಚಾರಣಾ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಂತ್ರಗಳ ಪಠಣಗಳ ನಡುವೆ ದೇವಾಲಯದ ಸ್ಥಳದಲ್ಲಿ ಮೊದಲ ಕೆತ್ತನೆಯ ಕಲ್ಲನ್ನು ಮುಖ್ಯಮಂತ್ರಿ ಮತ್ತು ಇತರ ಅಗ್ರಗಣ್ಯರು ಇರಿಸುವ ಮೂಲಕ ಶಿಲಾ ಪೂಜೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯನಾಥ್, 500 ವರ್ಷಗಳ ಹಿಂದಿನ ಭಕ್ತಾದಿಗಳ 'ತಡಪನ್' (ಅಶಾಂತಿ) ಕೊನೆಗೊಳ್ಳಲಿದೆ, ಈ ದೇವಾಲಯವು ಜನರ ನಂಬಿಕೆಯ ಸಂಕೇತವಾಗಲಿದೆ. ಇದು 'ರಾಷ್ಟ್ರ ಮಂದಿರ' ಆಗಲಿದ್ದು, ಅದರ ಕಾರ್ಯ ಭರದಿಂದ ಸಾಗಲಿದೆ ಎಂದರು. "ರಾಮಮಂದಿರವು ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ" ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯಿಂದ ಶಂಕುಸ್ಥಾಪನೆ
ರಾಮ ಜನ್ಮಭೂಮಿ ಸ್ಥಳದಲ್ಲಿ ನಿರ್ಮಾಣ ಕಾರ್ಯವು ಆಗಸ್ಟ್ 5, 2020 ರಂದು ಪ್ರಾರಂಭವಾಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು. ಜೊತೆಗೆ ಡಿಸೆಂಬರ್ 2023 ರ ವೇಳೆಗೆ ದೇವಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲು ನಿರ್ಧರಿಸಲಾಗಿದೆ. ರಾಮಮಂದಿರದ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸರ್ಕಾರ ಫೆಬ್ರವರಿ 2020 ರಲ್ಲಿ ಸ್ಥಾಪಿಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (SRJBTK) ಪ್ರಕಾರ, ದೇವಾಲಯದ (ಮೂರು ಅಂತಸ್ತಿನ ರಚನೆ) ನಿರ್ಮಾಣವು ಭರದಿಂದ ಸಾಗುತ್ತಿದೆ.

3-ಹಂತದ ಕಾಲಮಿತಿ
ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, 2022ರ ಫೆಬ್ರುವರಿಯಲ್ಲಿ ಆರಂಭವಾದ ಗ್ರಾನೈಟ್ ಶಿಲೆಯ ಸ್ತಂಭ ನಿರ್ಮಾಣ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ. 5 ಅಡಿ ಅಳತೆಯ ಸುಮಾರು 17,000 ಕಲ್ಲುಗಳನ್ನು ಸ್ತಂಭ ನಿರ್ಮಾಣಕ್ಕೆ ಬಳಸಲಾಗುವುದು.
"ಕೆಲಸಗಳನ್ನು ಪೂರ್ಣಗೊಳಿಸಲು ನಾವು 3-ಹಂತದ ಕಾಲಮಿತಿಯನ್ನು ಹೊಂದಿದ್ದೇವೆ. 2023 ರ ವೇಳೆಗೆ ಗರ್ಭಗೃಹ, 2024 ರ ಅಂತ್ಯದ ವೇಳೆಗೆ ದೇವಾಲಯ ನಿರ್ಮಾಣ ಮತ್ತು 2025 ರ ವೇಳೆಗೆ ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ನಿರ್ಮಾಣಗಳು ನಡೆಯಲಿವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಲ್ಲಿನ ಕೆತ್ತನೆ ಪೂರ್ಣ
ರಾಮಮಂದಿರ ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಸಾಬೀತಾದ ಮತ್ತು ಪರೀಕ್ಷಿಸಿದ ಗುಣಮಟ್ಟದ ಗ್ರಾನೈಟ್ ಕಲ್ಲನ್ನು ಖರೀದಿಸಲಾಗುತ್ತಿದೆ ಎಂದು ಮಿಶ್ರಾ ಕಚೇರಿ ತಿಳಿಸಿದೆ. ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ರೈಲ್ವೆ ಸಚಿವಾಲಯ ಅಯೋಧ್ಯೆಗೆ ಗ್ರಾನೈಟ್ ತ್ವರಿತ ಸಾಗಣೆಗೆ ಸಂಪೂರ್ಣ ಬೆಂಬಲವನ್ನು ನೀಡಿದೆ. ದೇವಾಲಯದ ಮೇಲ್ವಿನ್ಯಾಸವು ರಾಜಸ್ಥಾನದ ಬನ್ಸಿ ಪಹಾರ್ಪುರ್ ಶಿಲೆಯನ್ನು ಕೆತ್ತಲಾಗಿದೆ. ಕೆತ್ತನೆ ಕೆಲಸ ಈಗಾಗಲೇ ಆರಂಭವಾಗಿದೆ.
ಇಲ್ಲಿಯವರೆಗೆ, ಸರಿಸುಮಾರು 75,000 cft (ಘನ ಅಡಿ) ಕಲ್ಲಿನ ಕೆತ್ತನೆ ಪೂರ್ಣಗೊಂಡಿದೆ. ದೇವಾಲಯದ ಮೇಲ್ವಿನ್ಯಾಸಕ್ಕಾಗಿಯೇ ಒಟ್ಟು 4.45 ಲಕ್ಷ ಅಡಿ ಕಲ್ಲುಗಳು ಬೇಕಾಗುತ್ತವೆ.

ರಾಮಮಂದಿರ ನಿರ್ಮಾಣಕ್ಕೆ ಬೇಕಾಗುವ ವಸ್ತುಗಳು
ದೇವಾಲಯದ ನಿರ್ಮಾಣದ ನೇತೃತ್ವ ವಹಿಸಿರುವ ರಾಮ ಜನ್ಮಭೂಮಿ ಟ್ರಸ್ಟ್ ಹೇಳಿಕೆಯಲ್ಲಿ, ದೇವಾಲಯದ ಗರ್ಭಗುಡಿಯಲ್ಲಿ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಗಳನ್ನು ಬಳಸಲಾಗುವುದು ಎಂದು ಹೇಳಿದೆ. ದೇವಾಲಯದ ಯೋಜನೆಗೆ ಬಳಸಲಾಗುವ ಒಟ್ಟು ಕಲ್ಲಿನ ಪರಿಮಾಣವು ಎಂಟರಿಂದ ಒಂಬತ್ತು ಲಕ್ಷ ಘನ ಅಡಿಗಳಷ್ಟು ಕೆತ್ತಿದ ಮರಳುಗಲ್ಲು ನಷ್ಟಿರಲಿದೆ. 6.37 ಲಕ್ಷ ಘನ ಅಡಿ ಕೆತ್ತನೆ ಮಾಡಿರುವ ಗ್ರಾನೈಟ್, 4.70 ಲಕ್ಷ ಘನ ಅಡಿ ಕೆತ್ತಿದ ಗುಲಾಬಿ ಮರಳುಗಲ್ಲು ಮತ್ತು ಗರ್ಭಗುಡಿಗಾಗಿ ಮಕ್ರಾನ ಬಿಳಿ ಕೆತ್ತಿದ ಅಮೃತಶಿಲೆ 13,300 ಘನ ಅಡಿಗಳನ್ನು ಒಳಗೊಂಡಿದೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ.












Click it and Unblock the Notifications