ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್ಗೆ ದೇವಾಲಯ ನಿರ್ಮಾಣ
ಅಯೋಧ್ಯಾ, ಸೆಪ್ಟೆಂಬರ್ 19: ಉತ್ತರಪ್ರದೇಶ ರಾಜ್ಯದ ಅಯೋಧ್ಯೆ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಮರ್ಪಿತ ದೇವಾಲಯವೊಂದು ತಲೆ ಎತ್ತಿದೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಯೋಗಿ ಆದಿತ್ಯನಾಥರನ್ನು ಭಗವಾನ್ ರಾಮನ ಅವತಾರದಂತೆ ಚಿತ್ರಿಸಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರತಿಮೆಯು ಬಿಲ್ಲು ಮತ್ತು ಬಾಣವನ್ನು ಹೊಂದಿದೆ. ಇದು ಭಗವಾನ್ ರಾಮನನ್ನು ಹೋಲುವ ಚಿತ್ರಣವಾಗಿದೆ. ದೇವಸ್ಥಾನದಲ್ಲಿ ಮುಖ್ಯಮಂತ್ರಿಗಳ ವಿಗ್ರಹದ ಮುಂದೆ ಪ್ರತಿದಿನ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ದೇವಾಲಯದಲ್ಲಿ ಬರುವ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಗುತ್ತದೆ.
ಭರತಕುಂಡ್ ಭಗವಾನ್ ರಾಮನ ಸಹೋದರ ಭರತ್ ವನವಾಸಕ್ಕೆ ಹೋಗುವ ಮೊದಲು ಅವನನ್ನು ಬೀಳ್ಕೊಟ್ಟ ಸ್ಥಳವೆಂದು ಇದನ್ನು ನಂಬಲಾಗಿದೆ. ಈ ದೇವಾಲಯವನ್ನು ಅಯೋಧ್ಯೆಯ ನಿವಾಸಿ ಪ್ರಭಾಕರ ಮೌರ್ಯ ನಿರ್ಮಿಸಿದ್ದಾರೆ. ಮೌರ್ಯ ಅವರು 2015ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ವ್ಯಕ್ತಿಯನ್ನು ಪೂಜಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದರು. ಮೌರ್ಯ ಅವರು ಯೋಗಿ ಆದಿತ್ಯನಾಥ್ ಅವರ ವಿಗ್ರಹದ ಮುಂದೆ ಭಗವಾನ್ ರಾಮನಿಗಾಗಿ ಮಾಡುವಂತೆಯೇ ಪ್ರತಿದಿನ ಸ್ತೋತ್ರಗಳನ್ನು ಪಠಿಸುವುದಾಗಿ ಹೇಳಿದರು.

ದೇವಾಲಯದ ನಿರ್ಮಾಣಕ್ಕೆ ಸುಮಾರು ₹ 8.5 ಲಕ್ಷ ವೆಚ್ಚವಾಗಿದೆ. ಯೋಗಿ ಆದಿತ್ಯನಾಥ್ ವಿಗ್ರಹವನ್ನು ರಾಜಸ್ಥಾನದಿಂದ ಕಸ್ಟಮ್-ಆರ್ಡರ್ ಮಾಡಲಾಗಿದೆ. ಈ ಸುದ್ದಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, "ಅವನು ಅವನಿಗಿಂತ(ರಾಮ) ಎರಡು ಹೆಜ್ಜೆ ಮುಂದೆ ಹೋಗಿದ್ದಾನೆ. ಈಗ ಪ್ರಶ್ನೆ, ಯಾರು ಮೊದಲಿಗರು (ಯೇ ಟು ಉನ್ಸೆ ಭಿ ದೋ ಕದಮ್ ಆಗೇ ನಿಕ್ಲೆ...ಅಬ್ ಸವಾಲ್ ಯೇ ಹೈ ಕಿ ಪೆಹ್ಲೆ ಕೌನ್)?" ಎಂದು ಬರೆದಿದ್ದಾರೆ.
ಕಳೆದ ವರ್ಷ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮಂದಿರ ನಿರ್ಮಿಸಿದ್ದರು. ದೇಗುಲ ನಿರ್ಮಿಸಿದ ಮಯೂರ್ ಮುಂಡೆ ಮಾತನಾಡಿ, 'ಪ್ರಧಾನಿಯಾದ ನಂತರ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ರಾಮಮಂದಿರ ಮಂದಿರ ಮತ್ತು ತ್ರಿವಳಿ ತಲಾಖ್ನಂತಹ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ ವ್ಯಕ್ತಿಗೆ ದೇಗುಲ ಇರಬೇಕು, ಹಾಗಾಗಿ ನನ್ನ ಸ್ವಂತ ನಿವೇಶನದಲ್ಲಿ ಈ ಮಂದಿರ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.












Click it and Unblock the Notifications