ಕೇರಳ ಮೂಲದ ವೈದ್ಯೆ ಕೊರೊನಾಗೆ ಬಲಿ: ಕಂಬನಿ ಮಿಡಿದ ಲಂಡನ್
ಲಂಡನ್, ಮೇ 15: ಮಾರಣಾಂತಿಕ ಕೊರೊನಾ ವೈರಸ್ ಗೆ ಕೇರಳ ಮೂಲದ ವೈದ್ಯೆ ಡಾ.ಪೂರ್ಣಿಮಾ ನಾಯರ್ ಯು.ಕೆನಲ್ಲಿ ಬಲಿಯಾಗಿದ್ದಾರೆ. 56 ವರ್ಷ ವಯಸ್ಸಿನ ಡಾ.ಪೂರ್ಣಿಮಾ ನಾಯರ್ ಬಿಷಪ್ ಆಕ್ ಲ್ಯಾಂಡ್ ನಲ್ಲಿನ ಸ್ಟೇಷನ್ ವ್ಯೂ ಮೆಡಿಕಲ್ ಸೆಂಟರ್ ನಲ್ಲಿ ಜೆನರಲ್ ಪ್ರ್ಯಾಕ್ಟೀಷನರ್ ಆಗಿದ್ದರು.
ಮಾರ್ಚ್ 20 ರಂದು ಕೋವಿಡ್-19 ರೋಗ ಲಕ್ಷಣಗಳು ಕಂಡುಬಂದ ಮೇಲೆ ಡಾ.ಪೂರ್ಣಿಮಾ ನಾಯರ್ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್ 27 ರಂದು ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಡಾ.ಪೂರ್ಣಿಮಾ ನಾಯರ್ ಮೇ 12 ರಂದು ಮೃತಪಟ್ಟಿದ್ದಾರೆ.
ಯು.ಕೆ ನಲ್ಲಿನ ನ್ಯಾಷನಲ್ ಹೆಲ್ತ್ ಸರ್ವೀಸ್ ನಲ್ಲಿ ಫ್ರಂಟ್ ಲೈನ್ ವಾರಿಯರ್ ಆಗಿದ್ದ ಡಾ.ಪೂರ್ಣಿಮಾ ನಾಯರ್ ಸಾವಿಗೆ ರಾಜಕಾರಣಿಗಳು, ಸಹೋದ್ಯೋಗಿಗಳು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಕಣ್ಣೀರಿಟ್ಟ ಆಸ್ಪತ್ರೆ ಸಿಬ್ಬಂದಿ
ಕೇರಳ ಮೂಲದ ಡಾ.ಪೂರ್ಣಿಮಾ ನಾಯರ್ 1994 ರಲ್ಲಿ ಯು.ಕೆ ಗೆ ಶಿಫ್ಟ್ ಆದರು. ಬಿಷಪ್ ಆಕ್ ಲ್ಯಾಂಡ್ ನಲ್ಲಿನ ಸ್ಟೇಷನ್ ವ್ಯೂ ಮೆಡಿಕಲ್ ಸೆಂಟರ್ ನಲ್ಲಿ ಡಾ.ಪೂರ್ಣಿಮಾ ನಾಯರ್ ಕಾರ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಹೊಂದಿಲ್ಲದ ಡಾ.ಪೂರ್ಣಿಮಾ ನಾಯರ್ ನಿಧನಕ್ಕೆ ಆಸ್ಪತ್ರೆಯ ಸಹೋದ್ಯೋಗಿಗಳು ಕಣ್ಣೀರು ಸುರಿಸಿದ್ದಾರೆ.

ಸ್ಮರಿಸಿದ ಮಾಜಿ ಯೂನಿಯನ್ ಬ್ರಾಂಚ್ ಸೆಕ್ರೆಟರಿ
''ನನ್ನ ಪ್ರಾಣ ಉಳಿಸಿದ ದೇವತೆ ಆಕೆ'' ಎಂದು ಮಾಜಿ ಯೂನಿಯನ್ ಬ್ರಾಂಚ್ ಸೆಕ್ರೆಟರಿ ಫಿಲ್ ಗ್ರಹಾಮ್, ಡಾ.ಪೂರ್ಣಿಮಾ ನಾಯರ್ ರನ್ನು ಸ್ಮರಿಸಿದ್ದಾರೆ. 2013 ರಲ್ಲಿ ಅಪರೂಪದ Guillain-Barre Syndrome ಗೆ ಒಳಗಾಗಿದ್ದ ಫಿಲ್ ಗ್ರಹಾಮ್ ಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡಿದ್ದವರು ಇದೇ ಡಾ.ಪೂರ್ಣಿಮಾ ನಾಯರ್.

ತುಂಬಲಾರದ ನಷ್ಟ
ಯು.ಕೆ ನಲ್ಲಿನ ನ್ಯಾಷನಲ್ ಹೆಲ್ತ್ ಸರ್ವೀಸ್ ಗಾಗಿ ಡಾ.ಪೂರ್ಣಿಮಾ ನಾಯರ್ 26 ವರ್ಷ ಸೇವೆ ಸಲ್ಲಿಸಿದ್ದರು. ಡಾ.ಪೂರ್ಣಿಮಾ ನಾಯರ್ ನಿಧನದಿಂದ ಎನ್.ಎಚ್.ಎಸ್ ಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಲ್ಲಿನ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

ದುರಾದೃಷ್ಟಕರ
ಇನ್ನೂ ಡರ್ಹಾಮ್ ಕೌಂಟಿ ಕೌನ್ಸಿಲರ್ ಜಾಯ್ ಅಲೆನ್, ''ಡಾ.ಪೂರ್ಣಿಮಾ ನಾಯರ್ ಗೌರವಾನ್ವಿತ ವೈದ್ಯೆ. ಹಲವು ರೋಗಿಗಳ ಜೀವವನ್ನು ಆಕೆ ಉಳಿಸಿದ್ದಾರೆ. ಕೋವಿಡ್-19 ನಿಂದ ಅವರು ಮೃತಪಟ್ಟಿರುವುದು ದುರಾದೃಷ್ಟಕರ'' ಎಂದಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications