ಆಗ ಕಾರು ಚಾಲಕ, ಈಗ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರಿ

ಕೊಪ್ಪಳ, ಏಪ್ರಿಲ್ 10 : ಅವರು ಹಲವು ವರ್ಷಗಳಿಂದ ಕಾರು ಓಡಿಸುತ್ತಿದ್ದರು. ನೂರಾರು ಯುವಕರಿಗೆ ಕಾರಿನ ಡ್ರೈವಿಂಗ್ ಹೇಳಿಕೊಟ್ಟಿದ್ದಾರೆ. ಈಗ ಲಾಕ್ ಡೌನ್ ಪರಿಣಾಮ ಕಾರು ಮನೆಯಲ್ಲಿಯೇ ನಿಂತಿದೆ. ಆದರೆ, ಅವರು ಜೀವನ ನಿರ್ವಹಣೆಗಾಗಿ ಹೊಸ ದಾರಿ ಹುಡುಕಿಕೊಂಡಿದ್ದಾರೆ.

Recommended Video

      ಮಳೆಯಲ್ಲಿ ನೆನೆದುಕೊಂಡೇ ಹಸಿದವರಿಗೆ ಆಹಾರ ನೀಡ್ತಿದ್ದಾರೆ ಶಾಸಕಿ ಸೌಮ್ಯ ರೆಡ್ಡಿ | Oneindia Kannada

      ಹೌದು, ಇದು ಕೊಪ್ಪಳ ಜಿಲ್ಲೆಯ ಹುನುಮಸಾಗರದ ಚನ್ನಬಸಯ್ಯ ಹಿರೇಮಠ ಅವರ ಕಥೆ. ಕಾರು ಚಾಲಕರಾಗಿರುವ ಚನ್ನಬಸಯ್ಯ ಈಗ ಕೆಲಸ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

      ಕುಟುಂಬ ನಿರ್ವಹಣೆಗೆ ಚನ್ನಬಸಯ್ಯ ಕಾರು ಚಾಲನೆ ಮಾಡುತ್ತಿದ್ದರು. ಪ್ರತಿನಿತ್ಯ 500 ರಿಂದ 600 ರೂ. ಸಂಪಾದಿಸುತ್ತಿದ್ದರು. ಆದರೆ, ಈಗ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಈ ಮೂಲಕ ಪ್ರತಿನಿತ್ಯ 300 ರೂ. ಗಳಿಸುತ್ತಿದ್ದಾರೆ.

      Car Driver Turn As Vegetable Seller In Koppal

      ಲಾಕ್ ಡೌನ್ ಪರಿಣಾಮ ಕಾರುಗಳ ಸಂಚಾರ ಸ್ಥಗಿತಗೊಂಡ ಬಳಿಕ ಜೀವನ ನಿರ್ವಹಣೆ ಬಗ್ಗೆ ಚನ್ನಬಸಯ್ಯ ಚಿಂತನೆ ನಡೆಸಿದರು. ಆಗ ಅವರು ತರಕಾರಿ ವ್ಯಾಪಾರದ ಬಗ್ಗೆ ಆಲೋಚಿಸಿದರು. ತಳ್ಳುಗಾಡಿ ಮೂಲಕ ವ್ಯಾಪಾರ ಆರಂಭಿಸಿದರು.

      ಚನ್ನಬಸಯ್ಯ ತಾವೇ ಹೊಲಕ್ಕೆ ಹೋಗಿ ರೈತರಿಂದ ತರಕಾರಿ ಖರೀದಿ ಮಾಡುತ್ತಾರೆ. ರೈತರಿಂದ ನೇರವಾಗಿ ತರಕಾರಿಕೊಳ್ಳುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ತರಕಾರಿ ಮಾರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

      "ನನ್ನ ವೃತ್ತಿ ಬದಲಾಗಿಲ್ಲ. ಆಗಲೂ ನಾಲ್ಕು ಗಾಲಿ, ಈಗಲೂ ನಾಲ್ಕು ಗಾಲಿ. ಆವಾಗ ಡೀಸೆಲ್ ಗಾಡಿ ಓಡುಸುತ್ತಿದ್ದೆ. ಈಗ ಡೀಸೆಲ್ ಇಲ್ಲದ ಗಾಡಿಯನ್ನು ನಾನೇ ತಳ್ಳಿಕೊಂಡು ಹೋಗುತ್ತಿದ್ದೇನೆ" ಎಂದು ಚನ್ನಬಸಯ್ಯ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+