ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?

By Gururaj
|
Google Oneindia Kannada News

ಕೊಪ್ಪಳ, ಜುಲೈ 24 : ಸ್ಥಳೀಯರ ವಿರೋಧದ ನಡುವೆಯೇ ಅಂಜನಾದ್ರಿ ಬೆಟ್ಟವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಬೆಟ್ಟವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಕುರಿತು ಜಿಲ್ಲಾಧಿಕಾರಿಗಳು ನಿರ್ಧಾರವನ್ನು ಕೈಗೊಳ್ಳಬೇಕಿದೆ.

ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರಿಂದ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದರು. ದೇಗುಲದ ವ್ಯಾಪ್ತಿ, ಬೆಟ್ಟದ ವಿಸ್ತೀರ್ಣ, ಅರಣ್ಯ ಇಲಾಖೆ ಸೇರಿದ ಪ್ರದೇಶದ ಕುರಿತು ವಿವರಗಳನ್ನು ಪಡೆದರು.

ಮುಜರಾಯಿ ಕೊಡಿ, ಸುತ್ತಾಡಿಕೊಂಡಿರುತ್ತೇನೆ ಗುಡಿ : ಡಿಕೆಶಿ ಪ್ರಲಾಪಮುಜರಾಯಿ ಕೊಡಿ, ಸುತ್ತಾಡಿಕೊಂಡಿರುತ್ತೇನೆ ಗುಡಿ : ಡಿಕೆಶಿ ಪ್ರಲಾಪ

ಬೌಗೋಳಿಕ ವಿಸ್ತೀರ್ಣ, ದೇವಾಲಯಕ್ಕಿರುವ ಆದಾಯ, ಸಂಗ್ರಹವಾಗುವ ಆದಾಯ, ಚಿನ್ನ, ಬೆಳ್ಳಿ ವಸ್ತುಗಳ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೀಡಲಿದ್ದಾರೆ.

Anjanadri hills

'ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. ಮುಂದಿನ ಕ್ರಮ, ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ' ಎಂದು ತಹಶೀಲ್ದಾರ್ ಎಲ್‌.ಡಿ.ಚಂದ್ರಕಾಂತ್ ಹೇಳಿದರು.

ಗರ್ಭಗುಡಿಯ ಮುಂದೆಯೇ ಕಿತ್ತಾಟ: ಏಕಾಂಗಿಯಾದಳು ತಾಯಿ ಬನಶಂಕರಮ್ಮಗರ್ಭಗುಡಿಯ ಮುಂದೆಯೇ ಕಿತ್ತಾಟ: ಏಕಾಂಗಿಯಾದಳು ತಾಯಿ ಬನಶಂಕರಮ್ಮ

ಅಂಜನಾದ್ರಿ ಬೆಟ್ಟವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲಿಯೇ ಸ್ಥಳೀಯರ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ದೇವಾಲಯವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತಂದರೂ ಸ್ಥಳೀಯವಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಸ್ಥಳೀಯರನ್ನು ಸಮಿತಿಗೆ ಸೇರಿಸಿಕೊಳ್ಳಲು ಅವಕಾಶವಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅಂಜನಾದ್ರಿ ಬೆಟ್ಟವಿದೆ. ಐತಿಹಾಸಿಕ ಹಿನ್ನಲೆಯನ್ನು ಬೆಟ್ಟ ಹೊಂದಿದೆ. ಹನುಮಂತ ಇಲ್ಲಿ ಜನಿಸಿದ್ದಾನೆ ಎಂಬ ನಂಬಿಕೆ ಇದ್ದು, ಸಾವಿರಾರು ಭಕ್ತರು ಇಲ್ಲಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

English summary
Anjanadri hills may come under Muzrai department soon. Anjanadri hill in Gangavati in Koppal district, It is which is believed to be the birth place of Hanuman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X