ಬಿಜೆಪಿಗೆ 'ಶ್ರೀರಾಮ' ಚುನಾವಣಾ ಏಜೆಂಟ್ ಇದ್ದಂತೆ: ಮಮತಾ ಟೀಕೆ

Recommended Video

      ಶ್ರೀರಾಮನ ಹೇಳಿಕೆಗೆ ಮೋದಿ ವಿರುದ್ಧ ತಿರುಗಿಬಿದ್ದ ಮಮತಾ ಬ್ಯಾನರ್ಜಿ..!

      ಕೋಲ್ಕತ್ತ, ಮೇ 7: 'ಶ್ರೀರಾಮ' ಬಿಜೆಪಿಗೆ ಚುನಾವಣಾ ಏಜೆಂಟ್ ಇದ್ದಂತೆ, ಮೋದಿಯ ಅಧಿಕಾರಾವಧಿಯಲ್ಲಿ ಒಂದಾದರೂ ರಾಮ ಮಂದಿರ ನಿರ್ಮಿಸಿದ್ದಾಆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಶ್ರೀರಾಮನನ್ನು ಚುನಾವಣಾ ಏಜೆಂಟ್‌ಗಳನ್ನಾಗಿ ಮಾಡಿಕೊಂಡಿದ್ದಾರೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಅನ್ಯರ ಮೇಲೆ ಒತ್ತಡ ಹೇರಲು ನಿಮಗೆ ಅಧಿಕಾರವಿಲ್ಲ.

      ಜರ್​ಗ್ರಾಂನಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮಚಂದ್ರನನ್ನು ಪ್ರಶಂಸಿದ್ದಲ್ಲದೆ, ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿ ಧೈರ್ಯವಿದ್ದರೆ ತಮ್ಮನ್ನು ಬಂಧಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದರು.

      Ram Chandra becomes your party BJP agent

      ಶ್ರೀರಾಮನ ಬಗ್ಗೆ ನಮಗೂ ಗೌರವವಿದೆ. ಆ ಗೌರವವನ್ನು ಹೇಗೆ ತೋರಿಸಿಕೊಳ್ಳಬೇಕು ಎಂಬುದನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ. ನಾನು ಜೈ ಹಿಂದ್​, ವಂದೇ ಮಾತರಂ, ಮಾ, ಮಾಟಿ, ಮಾನುಷ್​ ಕಿ ಜೈ, ತೃಣಮೂಲ ಕಾಂಗ್ರೆಸ್​ ಕಿ ಜೈ ಎಂದು ಘೋಷಣೆ ಕೂಗುತ್ತೇನೆ ಹೊರತು, ಬಿಜೆಪಿಯ ಬಯಕೆಯ ಘೋಷಣೆಗಳನ್ನು ಎಂದಿಗೂ ಕೂಗುವುದಿಲ್ಲ ಎಂದರು.

      ಕೆಲದಿನಗಳ ಹಿಂದೆ ಮಮತಾ ಬ್ಯಾನರ್ಜಿ ತೆರಳುತ್ತಿದ್ದ ಮಾರ್ಗದಲ್ಲಿ ನಿಂತಿದ್ದ ಕೆಲವು ಯುವಕರು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+