ಟಿಎಂಸಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಮತದಾರ ಸಾವು
ಮುರ್ಷಿದಾಬಾದ್, ಏ.23: ಕಾಂಗ್ರೆಸ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಅಮಯಾಕ ಮತದಾರನೊಬ್ಬ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಮಂಗಳವಾರ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಳ್ಳಂಬೆಳಗ್ಗೆ ಟಿಎಂಸಿ ಕಾರ್ಯಕರ್ತರ ಕಾಂಗ್ರೆಸ್ ಕಾರ್ಯಕರ್ತರು ಬಾಂಬ್ ಎಸೆದಿದ್ದರಿಂದ ಮೂವರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಇದೀಗ ಪುನಃ ಅವರ ನಡುವೆ ಜಟಾಪಟಿ ಆರಂಭವಾಗಿದೆ. ಮತಗಟ್ಟೆಯಲ್ಲೇ ಅವರ ಶಕ್ತಿ ಪ್ರದರ್ಶನ ಆರಂಭಿದ್ದಾರೆ.
ಆದರೆ ಇದ್ಯಾವುದು ಶಾಂತಿಯುತ ಜಗಳವಾಗಿರದೆ ಕ್ರೂರ ಅಂತ್ಯವನ್ನು ಕಂಡಿದೆ. ಯಾವುದೇ ಸಂಬಂಧವಿಲ್ಲ ಮತದಾರನೊಬ್ಬ ಮೃತಪಟ್ಟಿದ್ದಾರೆ.

ಮತದಾನ ಮಾಡಲು ಸರತಿಯಲ್ಲಿ ನಿಂತಿದ್ದಾಗ ಮತಗಟ್ಟೆಯ ಬಳಿ ನಡೆದ ಜಟಾಪಟಿಯಲ್ಲಿ ಮತದಾರನೊಬ್ಬನನ್ನು ಕೊಲೆ ಮಾಡಲಾಗಿದೆ.












Click it and Unblock the Notifications