ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ

|
Google Oneindia Kannada News

ಕೊಲ್ಕತ್ತ, ಜನವರಿ 19: ಬಿಜೆಪಿ ವಿರೋಧ ಪಕ್ಷಗಳ ಮಹಾ ಸಮಾವೇಶದಲ್ಲಿ ಭಾಗವಹಿಸಿರುವ ಸಿಎಂ ಕುಮಾರಸ್ವಾಮಿ, ಕೋಲ್ಕತ್ತದಲ್ಲಿ ನಿಂತು ಕರ್ನಾಟಕ ಬಿಜೆಪಿಯ ರಾಜಕೀಯವನ್ನು ಹೀಗಳೆದರು.

ಭಾರತ ಒಕ್ಕೂಟದ ಮಹಾ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಮೋದಿ ಅವರು ಭ್ರಷ್ಟಾಚಾರ ತೊಲಗಿಸುವ ಮಾತನಾಡುತ್ತಾರೆ, ಭ್ರಷ್ಟಾಚಾರದ ವಿರುದ್ಧ ಮಸೂದೆ ತರುತ್ತಾರೆ ಆದರೆ ಅದೇ ಬಿಜೆಪಿ ಕರ್ನಾಟಕದಲ್ಲಿ ಪಕ್ಷ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದರು.

ಆಡಳಿತ ಪಕ್ಷದ ಶಾಸಕರಿಗೆ ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಅಣಕ, ಜನ ನೀಡಿರುವ ತೀರ್ಪನ್ನು ಹಣ ಕೊಟ್ಟು ಕೊಂಡುಕೊಳ್ಳುವ ಹುನ್ನಾರವನ್ನು ಸಂವಿಧಾನ ವಿರೋಧಿ ಬಿಜೆಪಿ ಮಾಡುತ್ತಿದೆ ಎಂದು ಕುಮಾರಸ್ವಮಿ ಕಟು ಮಾತುಗಳಲ್ಲಿ ಟೀಕಿಸಿದರು.

ಮಹಾಘಟಬಂಧನ Rally LIVE: ದೀದಿ rallyಯಲ್ಲಿ ಮೊದಲ ಸಾಲಲ್ಲೇ ಕುಮಾರಸ್ವಾಮಿ!ಮಹಾಘಟಬಂಧನ Rally LIVE: ದೀದಿ rallyಯಲ್ಲಿ ಮೊದಲ ಸಾಲಲ್ಲೇ ಕುಮಾರಸ್ವಾಮಿ!

ಸಾಲಮನ್ನಾ ಬಗ್ಗೆಯೂ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಮೋದಿ ಅವರು ನಮ್ಮ ರೈತ ಸಾಲಮನ್ನಾ ಅನ್ನು ವ್ಯಂಗ್ಯ ಮಾಡಿದರು ಅದನ್ನು ಜೋಕ್ ಎಂದು ಕರೆದರು. ಅವರಿಗೆ ಸತ್ಯ ಗೊತ್ತಿಲ್ಲ. ನಾವು ಯೋಜನೆಯನ್ನು ಪಾರದರ್ಶಕತೆಯಿಂದ ಜನರಿಗೆ ತಲುಪಿಸುತ್ತಿದ್ದೇವೆ. ಪೂರ್ಣ ಯೋಜನೆ ಆನ್‌ಲೈನ್ ಆಗಿದ್ದು ಎಲ್ಲ ಮಾಹಿತಿಯೂ ಅದರಲ್ಲಿದೆ ಎಂದರು.

ಅಪನಗದೀಕರಣ ವಿಫಲ ಮಾದರಿ

ಅಪನಗದೀಕರಣ ವಿಫಲ ಮಾದರಿ

ಅಪನಗದೀಕರಣವೊಂದು ವಿಫಲ ಮಾದರಿ ಎಂದ ಕುಮಾರಸ್ವಾಮಿ, ಅಪನಗದೀಕರಣದಿಂದ ಬಡವರಿಗೆ ತೊಂದರೆಯಾಯ್ತೆ ವಿನಃ ಇನ್ನೇನು ಆಗಲಿಲ್ಲ, ಅದು ಬೆಟ್ಟ ಅಗೆದು ಇಲಿ ಹಿಡಿದಂತಾಯಿತು ಎಂದು ಹೇಳಿದರು.

ಮಹಾಘಟಬಂಧನಕ್ಕಾಗಿ ಕೋಲ್ಕತ್ತಾದಲ್ಲಿ ಇಂದು ವಿಪಕ್ಷಗಳ ಬೃಹತ್ rally ಮಹಾಘಟಬಂಧನಕ್ಕಾಗಿ ಕೋಲ್ಕತ್ತಾದಲ್ಲಿ ಇಂದು ವಿಪಕ್ಷಗಳ ಬೃಹತ್ rally

'ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ'

'ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ'

ಸಂವಿಧಾನ ವಿರೋಧಿಯೊಬ್ಬರು ಇಂದು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಇಂದು ಅಪಾಯದಲ್ಲಿವೆ. ಅದನ್ನು ಎತ್ತಿ ಹಿಡಿಯುವ ಜವಾಬ್ದಾರಿಗಳು ನಮ್ಮ ಮೇಲಿದೆ ಎಂದು ಸಿಎಂ ಹೇಳಿದರು.

ಬಿಜೆಪಿ ವಿರುದ್ಧ ತೊಡೆತಟ್ಟಲು ಕೊಲ್ಕತ್ತಕ್ಕೆ ತೆರಳಿದ ಕುಮಾರಸ್ವಾಮಿ ಬಿಜೆಪಿ ವಿರುದ್ಧ ತೊಡೆತಟ್ಟಲು ಕೊಲ್ಕತ್ತಕ್ಕೆ ತೆರಳಿದ ಕುಮಾರಸ್ವಾಮಿ

ಒಗ್ಗಟ್ಟು ಪ್ರಸ್ತುತದ ಅವಶ್ಯಕತೆ

ಒಗ್ಗಟ್ಟು ಪ್ರಸ್ತುತದ ಅವಶ್ಯಕತೆ

ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಒಗ್ಗಟ್ಟನ್ನು ಪ್ರಸ್ತುತ ಅವಶ್ಯಕೆ ಎಂದು ಹೇಳಿದ ಕುಮಾರಸ್ವಾಮಿ ಅವರು, ದೇಶವನ್ನು ಮರಳಿ ಸಂವಿಧಾನದ, ಪ್ರಜಾಪ್ರಭುತ್ವದ ಹಾದಿಗೆ ತರಲು ಎಲ್ಲರ ಒಗ್ಗೂಡುವಿಕೆ ಅತ್ಯಂತ ಅವಶ್ಯಕತೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರದ ಬಿಜೆಪಿ ಅನ್ನದಾತರನ್ನು ಅನಾಥರನ್ನಾಗಿಸಿದೆ

ಕೇಂದ್ರದ ಬಿಜೆಪಿ ಅನ್ನದಾತರನ್ನು ಅನಾಥರನ್ನಾಗಿಸಿದೆ

ಕೇಂದ್ರದ ಬಿಜೆಪಿ ಅನ್ನದಾತನನ್ನು ಅನಾಥರನ್ನಾಗಿ ಮಾಡಿದೆ ಅದು ಏನಿದ್ದರು ಶ್ರೀಮಂತರ ಪಕ್ಷವಾಗಿ ಮಾತ್ರವೇ ಉಳಿದಿದೆ. ನಾವು ಭಾರತವನ್ನು ಉಳಿಸಲು, ಅದು ಒಂದೇ ಭಾರತವಾಗಿ ಉಳಿಯಲು ಈ ಎಲ್ಲ ನಾಯಕರು ಇಲ್ಲಿ ಒಟ್ಟಾಗಿದ್ದಾರೆ. ಗುರಿ ಸಾಧನೆಗೆ ನಾವೆಲ್ಲಾ ಒಟ್ಟಾಗಿದ್ದೇವೆ ಒಟ್ಟಾಗಿಯೇ ಇರಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

English summary
Karnataka CM Kumaraswamy lambasted on BJP in Kolkatta's unity of India rally. He said BJP doing horse trading in Karnataka. They offering crores of money to congress-jds MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X