2 ತಿಂಗಳ ಮೀನುಗಾರಿಕೆ ನಿರ್ಬಂಧ ತೆರವು: ಮತ್ಸ್ಯ ಶಿಖಾರಿಗೆ ಕಡಲ ಮಕ್ಕಳ ಕ್ಷಣಗಣನೆ!
ಕಾರವಾರ, ಜುಲೈ 31: ಕಳೆದ ಎರಡು ತಿಂಗಳಿಂದ ಬಂದಾಗಿದ್ದ ಆಳ ಸಮುದ್ರ ಮೀನುಗಾರಿಕೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಸುದೀರ್ಘ ಬಿಡುವಿನ ಬಳಿಕ ಕಡಲ ಮಕ್ಕಳು ಮತ್ಸ ಶಿಖಾರಿ ನಡೆಸಲು ಬಲೆ ಬೋಟ್ಗಳೊಂದಿಗೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಮೀನುಗಾರಿಕೆಗೆ ಅನುಕೂಲಕರ ವಾತವರಣವಿರುವುದು ಕೂಡ ಇದೀಗ ಮೀನುಗಾರರ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿದೆ.
ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಜೂನ್ 1ರಿಂದ ಎರಡು ತಿಂಗಳು ಕಾಲ ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆದರೆ ಆ.1 ರಿಂದ ನಿರ್ಬಂಧ ತೆರವುಗೊಳ್ಳಲಿದ್ದು ಬಿಡುವಿನ ಅವಧಿಯಲ್ಲಿ ಬೋಟ್ಗಳ ಎಂಜಿನ್ ಸರ್ವೀಸ್, ಮುರಿದು ಹೋಗಿದ್ದ ಹಲಗೆಗಳ ಬದಲಾವಣೆ, ಬಲೆಗಳ ದುರಸ್ಥಿ, ಹೊಸ ಬಲೆಗಳ ಖರೀದಿ, ಬೋಟ್ಗಳಿಗೆ ಬಣ್ಣ ಬಳಿದು ಸ್ವಚ್ಛಗೊಳಿಸುವುದು, ಪರವಾನಗಿ ನವೀಕರಣ, ಡೀಸೆಲ್ ಪಾಸ್ ಪುಸ್ತಕ, ಮೀನುಗಾರಿಕೆಗೆ ಆರಂಭಿಕ ಬಂಡವಾಳ ಕ್ರೂಢೀಕರಣ ಸೇರಿದಂತೆ ಮೀನುಗಾರಿಕೆಗೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.

ಮಾತ್ರವಲ್ಲದೆ ಬೋಟ್ನಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಕಾರ್ಮಿಕರು ಬಂದರುಗಳತ್ತ ಮುಖ ಮಾಡಿದ್ದಾರೆ. ಬೋಟ್ಗಳ ರಿಪೇರಿ ಕಾರ್ಯದ ಬಳಿಕ ಸುಣ್ಣ ಬಣ್ಣ ಬಳಿದು ತೋರಣಗಳಿಂದ ಶೃಂಗರಿಸಿ, ಹೋಮ ಹವನ ನಡೆಸಲಾಗುತ್ತಿದೆ. ಜೊತೆಗೆ ಎರಡು ತಿಂಗಳುಗಳ ಕಾಲ ಮನೆಗಳಲ್ಲಿ ಸಂಗ್ರಹಿಸಿದ್ದ ಮೀನುಗಾರಿಕಾ ಸಲಕರಣೆ-ಸಾಮಗ್ರಿಗಳನ್ನು ಬೋಟ್ಗೆ ತುಂಬಿಸುವ ಕಾರ್ಯವನ್ನು ಕಾರ್ಮಿಕರು ಮಾಡುತ್ತಿದ್ದಾರೆ.
ಎರಡು ತಿಂಗಳ ನಿರ್ಬಂಧದ ಅವಧಿ ಮುಕ್ತಾಯವಾಗಿದೆ. ಬೋಟ್ ಬಲೆ ರಿಪೇರಿ ಕೂಡ ಆಗಿದ್ದು, ವಾತಾವರಣ ಕೂಡ ಉತ್ತಮವಾಗಿದೆ. ಕಳೆದ ಮೂರು ವರ್ಷದಿಂದ ಕೈಗೂಡದ ಮೀನುಗಾರಿಕೆ ಈ ಬಾರಿಯಾದರೂ ಮೀನುಗಾರರಿಗೆ ಆಗುವ ನಿರೀಕ್ಷೆ ಇದೆ. ಟ್ರಾಲ್ ಬೋಟ್ಗಳು ಆ.1 ರಿಂದ ತೆರಳಲಿದ್ದು, ಪರ್ಸಿಯನ್ ಬೋಟ್ಗಳು ಆ. 6ರ ಬಳಿಕ ತೆರಳಲಿವೆ ಎಂದು ಟ್ರಾಲರ್ ಬೋಟ್ ಮಾಲಿಕ ಶ್ರೀಧರ ಹರಿಕಂತ್ರ ಮಾಹಿತಿ ನೀಡಿದರು.
ನರಸಿಂಹ ದೇವರಿಗೆ ಪೂಜೆ ಬಳಿಕ ಮೀನುಗಾರಿಕೆ
ಇನ್ನು ಪ್ರತಿ ಬಾರಿ ನಿಷೇಧದ ಬಳಿಕ ಆರಂಭವಾಗುವ ಮೀನುಗಾರಿಕೆಗೂ ಮೊದಲು ಸಮುದ್ರ ಮಧ್ಯದ ಕೂರ್ಮಗಡ ದ್ವೀಪದಲ್ಲಿ ನೆಲೆಸಿರುವ ನರಸಿಂಹಸ್ವಾಮಿ ದೇವರಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ಬೋಟ್ಗಳು ದ್ವೀಪ ಸುತ್ತಿ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕವೇ ಮೀನುಗಾರಿಕೆಗೆ ತೆರಳುವುದು ಮೀನುಗಾರರ ವಾಡಿಕೆಯಾಗಿದೆ.
ಮೀನುಗಾರಿಕೆ ವೇಳೆಗೆ ಬಂದಾದ ರಪ್ತು
ಕಡಲಮಕ್ಕಳು ಮೀನುಗಾರಿಕೆಗೆ ಅಂತಿಮ ಹಂತದ ಸಿದ್ದತೆ ನಡೆಸಿದ್ದು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲಿಯೂ ಆರಂಭದಲ್ಲಿ ಶೆಟ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ಆಗುವುದರಿಂದ ಮೀನುಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ವಿದೇಶಗಳಿಗೆ ರಪ್ತಾಗುತ್ತಿದ್ದ ಮೀನು, ಶೆಟ್ಟಿ ಪ್ರಮಾಣ ಕಡಿಮೆಯಾಗಿದ್ದರಿಂದ ಇದೀಗ ಖರೀದಿ ಕೂಡ ಕಡಿಮೆಯಾಗಿದೆ. ಇದರಿಂದ ಮೀನುಗಾರಿಕೆ ಅವಧಿಯಲ್ಲಿ ಬೆಲೆ ಕೂಡ ಕುಸಿತವಾಗಿದೆ. ಹೀಗಾದಲ್ಲಿ ಮೀನುಗಾರಿಕೆಯಾದರೂ ಕೂಡ ಈ ದುಬಾರಿ ಬೆಲೆಯ ನಡುವೆ ಮೀನುಗಾರರಿಗೆ ಲಾಭ ಸಿಗುವುದು ಕಷ್ಟ ಎಂದು ಟ್ರಾಲರ್ ಬೋಟ್ ಮಾಲಿಕ ಶ್ರೀಧರ ಹರಿಕಂತ್ರ ಹೇಳಿದ್ದಾರೆ.
• ನೋಂದಾಯಿತ ಮೀನುಗಾರರ ಸಂಖ್ಯೆ-68,949
• ಮೀನುಗಾರಿಕಾ ಕಾರ್ಮಿಕರ ಸಂಖ್ಯೆ-42,097
• ಟ್ರಾಲರ್ ಬೋಟ್ಗಳ ಸಂಖ್ಯೆ-3,952
• ಪರ್ಸಿಯನ್ ಬೋಟ್ಗಳ ಸಂಖ್ಯೆ-1,139
• ನಾಡದೋಣಿಗಳ ಸಂಖ್ಯೆ-7,974
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications