ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು, ಸಿಇಒಗಳ ಸಭೆ

ಬೆಂಗಳೂರು,

ಜ.
20:
ಕೊರೊನಾ
ವೈರಸ್
ಸಂಕಷ್ಟದಿಂದ
ರಾಜ್ಯ
ಅಭಿವೃದ್ಧಿ
ಕುಂಠಿತಗೊಂಡಿದೆ.
ಇದನ್ನು
ಮನಗಂಡಿರುವ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು,
ಮೊದಲ
ಬಾರಿ
ರಾಜ್ಯದ
ಎಲ್ಲ
ಜಿಲ್ಲೆಗಳ
ಜಿಲ್ಲಾಧಿಕಾರಿಗಳು
ಹಾಗೂ
ಸಿಇಒಗಳ
ಸಭೆಯನ್ನು
ಕರೆದಿದ್ದಾರೆ.
ಕೋವಿಡ್
ಸಂಕಷ್ಟದ
ಬಳಿಕ
ಮೊದಲ
ಬಾರಿ
ವಿಧಾನಸೌಧದಲ್ಲಿ
ಇಡೀ
ದಿನ
ಜಿಲ್ಲಾಧಿಕಾರಿಗಳು
ಹಾಗೂ
ಜಿಲ್ಲಾ
ಪಂಚಾಯಿತಿ
ಸಿಇಒಗಳ
ಸಭೆ
ಸಿಎಂ
ಯಡಿಯೂರಪ್ಪ
ಅವರ
ನೇತೃತ್ವದಲ್ಲಿ
ಶುರುವಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ವಿಧಾನಸೌಧದ

ಸಮ್ಮೇಳನ
ಸಭಾಂಗಣದಲ್ಲಿ
ಇಂದು
(ಜನವರಿ
20)
ಇಡೀ
ದಿನ
ಅಭಿವೃದ್ಧಿ
ಪರಿಶೀಲನಾ
ಸಭೆ
ಆರಂಭವಾಗಿದೆ.
ಅಧಿಕಾರಿಗಳೊಂದಿಗೆ
ಡಿಸಿಎಂ
ಗೋವಿಂದ್
ಕಾರಜೋಳ,
ಸಚಿವವಾರ
ಆರ್
ಅಶೋಕ್,
ಗೃಹ
ಸಚಿವ
ಬಸವರಾಜ
ಬೊಮ್ಮಾಯಿ,
ವಿ.
ಸೋಮಣ್ಣ,
ಸಿ.ಸಿ.
ಪಾಟೀಲ್,
ಪ್ರಭು
ಚೌಹಾನ್,
ಸರ್ಕಾರದ
ಮುಖ್ಯ
ಕಾರ್ಯದರ್ಶಿ
ರವಿಕುಮಾರ್
ಭಾಗಿಯಾಗಿದ್ದಾರೆ.
ಸಭೆಯ
ಆರಂಭದಲ್ಲಿ
ಸಿಎಂ
ಯಡಿಯೂರಪ್ಪ
ಅವರು
ಅಧಿಕಾರಿಗಳಿಗೆ
ಖಡಕ್
ಎಚ್ಚರಿಕೆ
ಕೊಟ್ಟಿದ್ದಾರೆ.
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಅಧಿಕಾರಿಗಳಿಗೆ
ಹೇಳಿದ್ದೇನು?
ಇಲ್ಲಿದೆ
ವಿವರ.

id='are-slot-2'
class='oiad
oi-axt
oiadv'>

ವಿದ್ಯಾರ್ಥಿಗಳ ಆರೋಗ್ಯದ ಕುರಿತು ಗಮನ ಕೊಡಿ

ವಿದ್ಯಾರ್ಥಿಗಳ ಆರೋಗ್ಯದ ಕುರಿತು ಗಮನ ಕೊಡಿ

ಕಳೆದ ಒಂದೂವರೆ ವರ್ಷಗಳ ಬಳಿಕ ಮೊದಲ ಬಾರಿ ನಿಮ್ಮೊಂದಿಗೆ ಸಭೆ ನಡೆಸುತ್ತಿದ್ದೇನೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಬೇಕು. ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿರುವುದುದರಿಂದ ಅಲ್ಲಿನ ಮಕ್ಕಳ ಆರೋಗ್ಯದ ಕಾಳಜಿ ಇರಬೇಕು. ಜೊತೆಗೆ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಆರೋಗ್ಯದ ಹೊಣೆ ನಿಮ್ಮದಾಗಿದೆ. ಅಂಥದ್ದರಲ್ಲಿ ಯಾವುದೇ ಸಣ್ಣ ನಿರ್ಲಕ್ಷವನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಆರಂಭದಲ್ಲಿಯೇ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಬಾಲ್ಯವಿವಾಹದ ಆತಂಕ

ಬಾಲ್ಯವಿವಾಹದ ಆತಂಕ

ಶಾಲೆಗಳು ನಡೆಯದ್ದರಿಂದ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬ ಆತಂಕವಿದೆ, ಬಾಲ್ಯ ವಿವಾಹಗಳನ್ನು ತಡೆಯಬೇಕು. ಜೊತೆಗೆ ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿದೆ. ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸಬೇಕು. ಕೆಲ ದಿನಗಳಲ್ಲಿ ಬೇಸಿಗೆ ಆರಂಭವಾಗಲಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ಸಿಎಂ ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

ಬಾಕಿ ಪ್ರಕರಣಗಳ ವಿಲೇವಾರಿ

ಬಾಕಿ ಪ್ರಕರಣಗಳ ವಿಲೇವಾರಿ

ರಾಜ್ಯದ ಹೆದ್ದಾರಿ ಯೋಜನೆಗಳಿಗೆ ರೈತರು ಸೇರಿದಂತೆ ಸಾಕಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ 14 ಸಾವಿರಕ್ಕೂ ಅಧಿಕ ಪ್ರಕರಣಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿಯಿವೆ. ಈ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡುವಂತೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಕೋರಿದ್ದಾರೆ. ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Recommended Video

    ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
    ಅವಲೋಕನ ತತ್ರಾಂಶ

    ಅವಲೋಕನ ತತ್ರಾಂಶ

    ಸರ್ಕಾರದ ಅನುದಾನ ಬಿಡುಗಡೆ ಮತ್ತು ವೆಚ್ಚದ ಕುರಿತು ಅವಲೋಕನ ಸಾಫ್ಟವೇರ್‌ನ್ನು ಬಿಡುಗಡೆ ಮಾಡಿದ್ದೇವೆ. 39 ಇಲಾಖೆಗಳ 1800 ಯೋಜನೆಗಳಿಗಾಗಿ ಬಿಡುಗಡೆಯಾಗಿರುವ ಅನುದಾನ ಮತ್ತು ವೆಚ್ಚದ ವಿವರ ಈ ತತ್ರಾಂಶದ ಮೂಲಕ ಲಭ್ಯವಾಗಲಿದೆ. ಅದರಿಂದ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಬರಲಿದೆ. ಅವಲೋಕನ ತತ್ರಾಂಶದಲ್ಲಿ ವಿಧಾನಸಭಾ ಕ್ಷೇತ್ರವಾರು ಅನುದಾನ ಬಿಡುಗಡೆ ಹಾಗೂ ವೆಚ್ಚದ ವಿವರಗಳನ್ನು ದಾಖಲಿಸಬೇಕು ಎಂದು ಜಿಲ್ಲಾಡಳಿತಗಳಿಗೆ ಸಿಎಂ ಸೂಚಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+