ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆ ಕೇಳಿದ ಯಡಿಯೂರಪ್ಪ!
Recommended Video
ಬೆಂಗಳೂರು, ಫೆಬ್ರವರಿ 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಟ್ವಿಟರ್ ವಾರ್ ಮುಂದುವರೆದಿದೆ. ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆಗಳನ್ನು ಯಡಿಯೂರಪ್ಪ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮೋದಿ : ಮೋದಿಯ ಟಾಪ್ 10 ಹೇಳಿಕೆಗಳು!
ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಮೋದಿ ಭಾಷಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಮೋದಿ ಭಾಷಣ : ಸಿದ್ದರಾಮಯ್ಯಗೆ ಯಡಿಯೂರಪ್ಪ 5 ಪ್ರಶ್ನೆಗಳು
#Dare2Answer ಎಂಬ ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಫೆ. 6ರಂದು ಯಡಿಯೂರಪ್ಪ 5 ಪ್ರಶ್ನೆ ಕೇಳಿದ್ದರು. ಬುಧವಾರ ರಾತ್ರಿ ಮತ್ತೆ 5 ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕದ ಸರ್ಕಾರದ ವೈಫಲ್ಯತೆಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಅವರೇ ಉತ್ತರ ಕೊಡಿ ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರ: ಮುಖಾಮುಖಿ ಚರ್ಚೆಗೆ ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ
ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದೆ. ಮುಖ್ಯಮಂತ್ರಿ ಮತ್ತು ಬಿಜೆಪಿ ಅಧ್ಯಕ್ಷರು ಟ್ವಿಟರ್ ಮೂಲಕ ಮಾತಿನ ಯುದ್ಧ ನಡೆಸುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ ಆಗುತ್ತದೆ? ಎಂಬುದರ ಮುನ್ಸೂಚನೆಯಾಗಿದೆ.
|
ಸಿದ್ದರಾಮಯ್ಯಗೆ ಪ್ರಶ್ನೆ - 1
ನಿಮ್ಮ ಸರ್ಕಾರದ ಜಪ್ರಿಯ ಯೋಜನೆ ಅನ್ನಭಾಗ್ಯದಲ್ಲಿ ಕೇಂದ್ರ ಸರ್ಕಾರದ ಪಾಲೆಷ್ಟು?. ಈ ಬಗ್ಗೆ ಚರ್ಚೆ ಮಾಡೋಣ ಬನ್ನಿ.
|
ಮುಖ್ಯಮಂತ್ರಿಗಳಿಗೆ ಪ್ರಶ್ನೆ - 2
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯ ಟೆಂಡರ್ ಕರೆಯುವಾಗ ನಿಯಮಾವಳಿಗಳನ್ನು ಏಕೆ ಪಾಲನೆ ಮಾಡಿಲ್ಲ?
|
ಸಿದ್ದರಾಮಯ್ಯಗೆ ಪ್ರಶ್ನೆ - 3
ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್ಗಳಿಗೆ ಹಾಸಿಗೆ, ದಿಂಬು ಖರೀದಿಯಲ್ಲಿ ಅಕ್ರಮ ನಡೆದಿದೆ. ಆಗ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಜೊತೆ ನೀವು ಏಕೆ ನಿಂತಿರಿ?
|
ಸಿದ್ದರಾಮಯ್ಯಗೆ ಪ್ರಶ್ನೆ - 4
ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಕರುಣಿಸಿದ್ದೀರಿ. ರೋಹಿಣಿ ಸಿಂಧೂರಿ, ಅಜಯ್ ನಾಗಭೂಷಣ್ ಮುಂತಾದ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ವರ್ಗಾವಣೆ ಮಾಡಲಾಯಿತು.
|
ಸಿದ್ದರಾಮಯ್ಯಗೆ ಪ್ರಶ್ನೆ - 5
ಟಿ.ಎನ್.ಚಿಕ್ಕರಾಯಪ್ಪ, ಜಯಚಂದ್ರ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಸುಮಾರು 4 ಕೋಟಿ ಹೊಸ ನೋಟುಗಳು ಸಿಕ್ಕಿದವು. ಅದು ಹೇಗೆ ಸಾಧ್ಯವಾಯಿತು?. ಇಬ್ಬರು ನಿಮ್ಮ ಆಪ್ತರಲ್ಲವೇ?.