ಕೊಪ್ಪಳ ಜಿಲ್ಲೆಯ ಕೆರೆ ಅಭಿವೃದ್ಧಿಗೆ ಯಶ್ -ರಾಧಿಕಾರಿಂದ ಚಾಲನೆ
ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕದ ಈಗಾಗಲೇ ಒಂದು ಹಂತದ ಯೋಜನೆ ಪೂರೈಸಲಾಗಿದೆ. ಕಲಬುರಗಿ, ರಾಯಚೂರು ಜಿಲ್ಲೆಗಳ 50 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ನನ್ನ ಕಣ್ಮುಂದೆಯೇ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲುವುದನ್ನು, ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುವುದನ್ನು, ಬಿಸಿಲ ಬೇಗೆಯಲ್ಲಿ ಒಣಗುವುದನ್ನು ನಾನು ನೋಡಿದ್ದೇನೆ. ಅವರ ಕಷ್ಟಗಳನ್ನು ನೀಗಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಸಹೃದಯರು ಶ್ರಮಿಸುತ್ತಿದ್ದಾರೆ. ಅದು ಕೇವಲ ಸರ್ಕಾರದ ಕರ್ತವ್ಯ ಅಂತ ಕೈ ಕಟ್ಟಿ ಕೂರುವುದು ಸರಿ ಅಂತ ನನಗೇಕೋ ಅನ್ನಿಸುತ್ತಿಲ್ಲ. ಹೀಗಾಗಿ ನನ್ನ ಕೈಲಾದ್ದನ್ನು ಮಾಡುವುದಕ್ಕೆ ಮುಂದಾಗಿದ್ದೇನೆ- ಯಶ್
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಕೆರೆ ಅಭಿವೃದ್ಧಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಂಗಳವಾರ ಚಾಲನೆ ನೀಡಿದರು.[ಯಶೋಮಾರ್ಗದ ಬಗ್ಗೆ ಓದಿ]
ನಮಗೆ ಅಗತ್ಯವಿರುವ ನೀರಿನ ಪ್ರಮಾಣದಲ್ಲಿ 85% ಕೃಷಿಗೆ ಬಳಕೆಯಾಗುತ್ತದೆ.ಆಹಾರವನ್ನು ವ್ಯರ್ಥ ಮಾಡುವುದು ನೀರನ್ನು ವ್ಯರ್ಥ ಮಾಡಿದಂತೆ.
— YashoMarga (@YashoMarga) February 26, 2017
Source:https://t.co/FFpSu4TF0D pic.twitter.com/iV2YjfmNW0
ವೃಕ್ಷಾಥೋನ್ ನಲ್ಲಿ ಯಶ್ ರವರು ಭಾಗವಹಿಸಿ ಶಿರಾ,ಚಿತ್ರದುರ್ಗ,ದಾವಣಗೆರೆ, ಹುಬ್ಬಳ್ಳಿ,ಹಾವೇರಿ,ಬೆಳಗಾವಿ, ವಿಜಾಪುರ,ಜೆವರ್ಗಿ, ಬೀದರ್, ಕಲಬುರಗಿ ,ಕೊಪ್ಪಳ,ಗುಲಬರ್ಗಾ, ರಾಯಚೂರಿಗೆ ಬೇಟಿ ನೀಡಿ ಉತ್ತರ ಕರ್ನಾಟಕದ 400ಗ್ರಾಮಗಳಿಗೆ ಕುಡಿಯುವ ನೀರು ವ್ಯವಸ್ಥೆ ಮಾಡುತ್ತಿದ್ದಾರೆೆ. ರಾಜ್ಯಾದ್ಯಂತ ಕೆರೆ ಅಭಿವೃದ್ಧಿ ಮಾಡುವುದು ನನ್ನ ಕನಸು. ಇದಕ್ಕಾಗಿ ತಲ್ಲೂರು ಕೆರೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದೇನೆ. ಈ ಕಾರ್ಯವನ್ನು ಆತ್ಮ ಸಂತೋಷಕ್ಕಾಗಿ ಮಾಡುತ್ತಿದ್ದೇನೆ ಎಂದು ನಟ ಯಶ್ ಹೇಳಿದರು.