Yaduveer Wadiyar: ಮುಖ್ಯಮಂತ್ರಿ ಬದಲಾವಣೆ: ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದ್ದೇನು?
ಹಾಸನ, ಮಾರ್ಚ್ 04: ಆಡಳಿತದಲ್ಲಿ ಇರುವುದು ಕಾಂಗ್ರೆಸ್. ನೀವು ಅವರನ್ನು ಪ್ರಶ್ನೆ ಮಾಡಬೇಕು. ಅವರ ಪಕ್ಷದ ಒಳಗಡೆ ಏನು ನಡೆಯುತ್ತಿದೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ವಿರೋಧ ಪಕ್ಷವಾಗಿ ಅದರಲ್ಲಿ ನಮ್ಮ ಕೆಲಸವಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಅವರ ಪಕ್ಷದಲ್ಲಿಯೇ ಮುಸುಕಿನ ಕಾಳಗ ನಡೆಯುತ್ತಿದೆ. ಅವರು ಒಳ್ಳೆಯ ಆಡಳಿತ ಕೊಡಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಅಂತ ಅವರ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಮುಂಚೆನೇ ಮುಹೂರ್ತ ಇಟ್ಟಿದ್ರು ಅಂತ ಆರ್.ಅಶೋಕ್ ಅವರು ಹೇಳುತ್ತಾರೆ. ಮುಂದಿನ ದಿನದಲ್ಲಿ ಗೊತ್ತಾಗುತ್ತದೆ ಅಲ್ಲವಾ ಎಂದು ನಕ್ಕು ಸುಮ್ಮನಾದರು. ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ವಿಚಾರವಾಗಿ ಮಾತನಾಡಿ, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಗಳು ಕಡಿಮೆ ಆಗಲ್ಲ ಅಂತ ಗೃಹಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಉತ್ತರಿಸಿದರು.

ಸಿನಿಮಾದವರಿಗೆ ನಟ್ಟು ಬೋಲ್ಡ್ ಟೈಪ್ ಮಾಡುತ್ತೇನೆ ಎಂಬ ಮಾತಿಗೆ ಮೈಸೂರಿನ ಮಹಾರಾಜ ಹಾಗು ಸಂಸದ ಯದುವೀರ್ ತಿರುಗೇಟು ನೀಡಿದ್ದಾರೆ. ಸಿನಿಮಾ ನಟರು ಖಾಸಗಿ ಸಿಟಿಜನ್. ಹೋರಾಟದಲ್ಲಿ ಭಾಗವಹಿಸಬೇಕೋ, ಬೇಡವೋ ಅವರೆ ತೀರ್ಮಾನ ಮಾಡಬೇಕು. ಪಕ್ಷದಿಂದ ಹೋರಾಟ ಮಾಡಿದ್ದರೇ ಪಕ್ಷದವರು ಸೇರಿ ಮಾಡುತ್ತಾರೆ. ಆದರೇ ಚಲನಚಿತ್ರ ರಂಗದವರು ಪಕ್ಷಕ್ಕೆ ಸೇರಿರುವುದಿಲ್ಲ. ಈ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ತಿರುಗೇಟು ನೀಡಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಸಮುದಾಯಕ್ಕೆ ಬಳಸಬಾರದು ಎಂದು ಆದೇಶವಿದ್ದರೂ, 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರೆಂಟಿ ಯೋಜನೆಯ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದರು. 2023 ರಲ್ಲಿ ಎಸ್ ಇಪಿ, ಟಿಎಸ್ಪಿ 11144 ಸಾವಿರ ಕೋಟಿ, 2024 ರಲ್ಲಿ 14,282 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದ್ದಾರೆ. ಎರಡು ವರ್ಷದಲ್ಲಿ ದುರ್ಬಳಕೆ ಮಾಡಿಕೊಂಡು ಗ್ಯಾರೆಂಟಿಗಾಗಿ ಬಳಸಿಕೊಂಡಿರುವುದನ್ನು ನಾನು ಮತ್ತು ನಮ್ಮ ಪಕ್ಷ ಖಂಡಿಸುತ್ತೇವೆ. ಇನ್ನು ಈ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
14500 ಸಾವಿರ ಕೋಟಿ ರೂ ಹಣವನ್ನು ಈ ಬಜೆಟ್ನಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಒಳ್ಳೆಯ ಸರ್ಕಾರ ನಡೆಸಬೇಕಿತ್ತು. ಗ್ಯಾರಂಟಿಗಾಗಿ ಹಣ ಹೊಂದಿಸಲು ಯೋಗ್ಯತೆ ಇಲ್ಲದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇನ್ನೂ ದುರ್ಬಲ ಆರ್ಥಿಕ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಸುಖಾ ಸುಮ್ಮನೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಕಾಂಗ್ರೇಸ್ ವಿರುದ್ದ ಹರಿಹಾಯ್ದರು.
ಸಿನಿಮಾ ನಟರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್ ನೀಡಿದ ಹಿನ್ನಲೆ, ಚಲನಚಿತ್ರ ನಟರು, ಕಲಾವಿದರು ಸಿಟಿಜ಼ನ್ಸ್. ಖಾಸಗಿ ವ್ಯಕ್ತಿಗಳಾಗಿದ್ದು, ಹೋರಾಟದಲ್ಲಿ ಪಾಲ್ಗೊಳ್ಳಬೇಕು ಬೇಡವೋ, ಎಂಬುದು ಅವರಿಗೆ ಬಿಟ್ಟ ವಿಚಾರ. ಸಿನಿಮಾ ನಟರಾಗಿ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರೇ ಪಕ್ಷದವರೆಲ್ಲರೂ ಸೇರಿ ಹೋರಾಟ ಮಾಡ್ತಾರೆ. ಚಿತ್ರರಂಗದ ಕೆಲವರು ರಾಜಕೀಯ ಪ್ರವೇಶ ಮಾಡದಿದ್ದರೇ, ಅವರು ರಾಜಕೀಯದವರ ಹೋರಾಟಕ್ಕೆ ಬಂದಿಲ್ಲ, ನಟ್ಟು ಬೋಲ್ಟ್ ಟೈ ಮಾಡುತ್ತೇನೆ ಎನ್ನುವುದು ತರವಲ್ಲ. ಅಧಿಕಾರದ ಪರಮಾವಧಿ. ಅಧಿಕಾರದಲ್ಲಿರುವವರು ಸರ್ವಾಧಿಕಾರಿ ಧೋರಣೆ ತೋರುವುದು ಸರಿಯಲ್ಲ. ಡಿ ಕೆ ಶಿವಕುಮಾರ್ ವರ್ತನೆಯು ಅವರ ಅಹಂಕಾರ ತೋರಿಸುತ್ತದೆ ಎಂದರು.












Click it and Unblock the Notifications