ಉಡುಪಿ ಕೃಷ್ಣ ಮಠದ ಸೇವೆ ಬುಕ್ ಮಾಡಲು ವೆಬ್ಸೈಟ್
ಉಡುಪಿ, ಜುಲೈ 14 : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿವಿಧ ಪೂಜೆಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗಿದೆ. ಏಕ್ಸಿಸ್ ಬ್ಯಾಂಕ್ನವರ ತಾಂತ್ರಿಕ ಸಹಕಾರದಿಂದ ಇದನ್ನು ಸಿದ್ಧಪಡಿಸಲಾಗಿದೆ.
'ಇ ಸೇವಾ' ಎಂಬ ಆನ್ಲೈನ್ ಸೇವಾ ಸೌಲಭ್ಯ ಮತ್ತು 'ಸೇವಾ' ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಬುಧವಾರ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು, ವೆಬ್ಸೈಟ್ ರೂಪಿಸಿದ ತಂಡವನ್ನು ಹರಸಿದರು. [ಉಡುಪಿ ಮಠದಿಂದ ದುಶ್ಚಟ ನಿವಾರಣಾ ಹುಂಡಿ ಸ್ಥಾಪನೆ]

udupisrikrishnamatha.org ಇದರ ಮೂಲಕ ಭಕ್ತರು ತಮಗೆ ಬೇಕಾದ ಸೇವೆಗಳನ್ನು ಸಲ್ಲಿಸಬಹುದು. ಯಾವುದೇ ಬ್ಯಾಂಕ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಸೇವೆಗಳನ್ನು ಬುಕ್ ಮಾಡಬಹುದು, ದೇಣಿಗೆಗಳನ್ನು ಸಲ್ಲಿಸಬಹುದು. ಮಠಕ್ಕೆ ಆಗಮಿಸುವವರು ವಸತಿ ವ್ಯವಸ್ಥೆ ಪಡೆಯಲು ವೆಬ್ಸೈಟ್ ಮೂಲಕ ಬುಕ್ ಮಾಡುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಆಳವಡಿಸಲಾಗುತ್ತದೆ. [ಉಡುಪಿ ಪರ್ಯಾಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆ]
'ಸೇವಾ ಎಂಬ ಆಪ್ ರೂಪಿಸಿದವರು ಉಡುಪಿಯ ಸಂದೀಪ್ ಸದಾನಂದ ಭಕ್ತ ಅವರ ತಂಡ. ಸೇವೆಗಳಿಗಾಗಿ ಆಪ್ ಹೊಂದಿದ ಮೊದಲ ಧಾರ್ಮಿಕ ಸಂಸ್ಥೆ ಶ್ರೀ ಕೃಷ್ಣ ಮಠ. ಇದರಲ್ಲಿಯೇ ರಶೀದಿ ಕೊಡುವ ವ್ಯವಸ್ಥೆಯನ್ನು ಅಳವಡಿಸಿದ್ದೇವೆ. ಆಪ್ ಉಚಿತವಾಗಿ ದೊರಕುತ್ತದೆ. ಇತರ ದೇವಸ್ಥಾನದವರು ಬಯಸಿದರೆ ಉಚಿತವಾಗಿ ನೋಂದಣಿ ಮಾಡಲಾಗುವುದು' ಎಂದು ಸಂದೀಪ್ ಭಕ್ತ ತಿಳಿಸಿದರು. [ಪೇಜಾವರ ಶ್ರೀಗಳಿಗೆ ಕೃಷ್ಣನ ಜೊತೆ ಒಲಿದ ಆಧುನಿಕ ಕುಬೇರ!]
ಎಕ್ಸಿಸ್ ಬ್ಯಾಂಕ್ ಮಂಗಳೂರು ವಲಯದ ಮುಖ್ಯಸ್ಥ ಸುರೇಶ್, ಉಡುಪಿ ಶಾಖಾ ಮುಖ್ಯಸ್ಥ ನರಸಿಂಹ ಕಾಮತ್, ದೀಪಕ್, ಆನ್ಲೈನ್ ಮೊದಲ ಸೇವಾಕರ್ತ ಸಿಸ್ಕಾಂ ವಾದಿರಾಜ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications