ರಾಜೀನಾಮೆಗೆ ಮುಂದಾದ ಶಾಸಕ ಮಾಲೀಕಯ್ಯ ಗುತ್ತೇದಾರ್
ಕಲಬುರಗಿ, ಜೂನ್ 22 : ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅಫ್ಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದಾರೆ.
ಮಂಗಳವಾರ
ಮಾಲೀಕಯ್ಯ
ಗುತ್ತೇದಾರ್
ಅವರು
ಸ್ಟೇಷನ್
ಗಾಣಗಾಪುರ
ಗ್ರಾಮದಲ್ಲಿ
ಬೆಂಬಲಿಗರ
ಸಭೆ
ನಡೆಸಿದರು.
ಬಳಿಕ
ಮಾತನಾಡಿದ
ಅವರು,
'ಶಾಸಕ
ಸ್ಥಾನಕ್ಕೆ
ರಾಜೀನಾಮೆ
ನೀಡಲು
ನಿರ್ಧರಿಸಿದ್ದೇನೆ'
ಎಂದು
ಹೇಳಿದರು.
[ಕೆಪಿಸಿಸಿ
ಸದಸ್ಯ
ಸ್ಥಾನಕ್ಕೆ
ಮಾಲೀಕಯ್ಯ
ಗುತ್ತೇದಾರ್
ರಾಜೀನಾಮೆ]
ಸಂಪುಟ ಪುನಾರಚನೆ ಆದ ಬಳಿಕ ಅಸಮಾಧಾನಗೊಂಡಿದ್ದ ಗುತ್ತೇದಾರ್ ಅವರು, ಜೂನ್ 20ರಂದು ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಂದಿನ ನಡೆ ಬಗ್ಗೆ ಚರ್ಚಿಸಲು ಬುಧವಾರ ಬೆಂಬಲಿಗರ ಸಭೆ ಕರೆದಿದ್ದರು. [ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ]
ಪ್ರಬಲ ಆಕಾಂಕ್ಷಿಯಾಗಿದ್ದರು : ಮಾಲೀಕಯ್ಯ ಗುತ್ತೇದಾರ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. 'ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಶಾಸಕನಾದ ನನಗೆ ಸಚಿವನಾಗುವ ಅರ್ಹತೆ ಇದೆ. ಪಕ್ಷದ ಹೈಕಮಾಂಡ್ ಮೇಲೆ ನನಗೆ ನಂಬಿಕೆ ಇದೆ' ಎಂದು ಕೆಲವು ದಿಗಳ ಹಿಂದೆ ಹೇಳಿದ್ದರು. ಹಲವು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದರು.