Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಯುಗಾದಿಯ ಸಿಹಿ, ಕಹಿ ಯಾರಿಗೆ? ಮತದಾರರಿಗೋ? ನಾಯಕರಿಗೋ?

ಬೆಂಗಳೂರು, ಮಾರ್ಚ್ 29: ರಾಜಕೀಯದಲ್ಲಿ ಬೇವು ಬೆಲ್ಲ ಇದ್ದದ್ದೇ ಆದರೆ ಪ್ರತಿಯೊಬ್ಬ ನಾಯಕರು ಕೂಡ ತಮಗೆ ಸಿಹಿ ಬೇಕೆಂದು ಬಯಸುತ್ತಾರೆ. ಆದರೆ ಬೇವು ಬೆಲ್ಲ ಸಮ್ಮಿಶ್ರಣದ ಯುಗಾದಿ ಈ ಬಾರಿ ಬಹುತೇಕರಿಗೆ ಕಹಿಯಾದಂತೆ ಗೋಚರಿಸುತ್ತಿದೆ. ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರಲ್ಲಿ ತಳಮಳಗಳು, ಗೊಂದಲಗಳು, ಸಂಕಷ್ಟಗಳು ಹೀಗೆ ಸಾಲು ಸಾಲು ಕಹಿ ಕಾಡಲಾರಂಭಿಸಿದೆ. ಇದರ ಜತೆಗೆ ಮತನೀಡಿ ನಾಯಕರನ್ನು ಆಯ್ಕೆ ಮಾಡಿದ ತಪ್ಪಿಗೆ ಮತದಾರರಿಗೂ ಬೆಲೆ ಏರಿಕೆಯ ಬಿಸಿ ಜೇಬನ್ನು ಸುಡಲಾರಂಭಿಸಿದ್ದು, ಯುಗಾದಿಯ ಸಿಹಿಯನ್ನು ಕಹಿ ನುಂಗಿ ಹಾಕಿದೆ.

ಈ ಬಾರಿ ಯುಗಾದಿಯ ಆರಂಭವೇ ಕೆಲವು ರಾಜಕಾರಣಿಗಳಿಗೆ ಸತ್ವ ಪರೀಕ್ಷೆಯನ್ನು ತಂದೊಡ್ಡಿದೆ. ಆಡಳಿತ ಪಕ್ಷದಲ್ಲಿ ಹನಿಟ್ರ್ಯಾಪ್ ಸುದ್ದಿ ಮಾಡುತ್ತಿದೆ. ಈ ಪ್ರಕರಣ ಕುರಿತಂತೆ ಮಾಡುತ್ತಿರುವ ಆರೋಪಗಳು, ಹೇಳಿಕೆಗಳು, ಎಲ್ಲವೂ ಆಡಳಿತ ಪಕ್ಷದಲ್ಲಿರುವ ನಾಯಕರ ಸುತ್ತಲೇ ಸುತ್ತಿದಂತೆ ಕಾಣುತ್ತಿದೆ. ಹೀಗಾಗಿ ಶತ್ರುಗಳು ವಿರೋಧ ಪಕ್ಷದಲ್ಲಿಲ್ಲ ನಮ್ಮಲ್ಲೇ ಇದ್ದಾರೆ ಎಂಬಂತಹ ನಡವಳಿಕೆಗಳು ಆಡಳಿತ ಮತ್ತು ವಿಪಕ್ಷ ಎರಡರಲ್ಲೂ ಎದ್ದು ಕಾಣಿಸುತ್ತಿವೆ. ರಾಜಕೀಯ ಆಟಗಳನ್ನು ನೋಡುತ್ತಾ ಬರುತ್ತಿರುವ ಮತದಾರರಿಗೆ ಅಯ್ಯೋ ಎಂತಹ ನಾಯಕರನ್ನು ಆಯ್ಕೆ ಮಾಡಿ ಕಳಿಸಿ ಬಿಟ್ಟೇವಪ್ಪಾ ಎಂಬ ಪಾಪ ಪ್ರಜ್ಞೆ ಕಾಡತೊಡಗಿದೆ.

Ugadi Political Situation in State Leaders and Voters Challenges

ಇತ್ತೀಚೆಗಿನ ರಾಜಕೀಯ ಚಿಂತನೆಗಳು ಅಚ್ಚರಿ ಮೂಡಿಸುತ್ತಿವೆ. ಪ್ರತಿಯೊಬ್ಬ ನಾಯಕನೂ ತಾನು ಮುಂದಿನ ಅವಧಿಗೂ ಆಯ್ಕೆಯಾಗಿ ಬರಬೇಕು, ತನ್ನ ಜನಪ್ರಿಯತೆ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಓಟ್ ಬ್ಯಾಂಕ್ ನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ? ಹೀಗೆ ದಿನ ನಿತ್ಯವೂ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆಯೇ ವಿನಃ ಯಾರೂ ಕೂಡ, ರಾಜ್ಯದ ಅಭಿವೃದ್ಧಿ ಬಗ್ಗೆಯಾಗಲೀ, ಜನ ಸಾಮಾನ್ಯರ ಬದುಕಿನ ಬಗ್ಗೆಯಾಗಲೀ ಚಿಂತೆ ಮಾಡುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಬೆಲೆ ಏರಿಕೆಯಂತು ಇದ್ದೇ ಇದೆ. ಅದು ಯಾವತ್ತೂ ತಪ್ಪುವುದಿಲ್ಲ.

Take a Poll

ರಾಜ್ಯದ ಮೂರು ಪಕ್ಷಗಳಲ್ಲಿ ನೂರು ಸಮಸ್ಯೆ

ಸರ್ಕಾರಿ ನೌಕರರು, ಕಾರ್ಪೋರೇಟ್ ಉದ್ಯೋಗಿಗಳು ಹೇಗೋ ಜೀವನ ಮಾಡಿಕೊಂಡು ಹೋಗುತ್ತಾರೆ ಆದರೆ ದಿನಕೂಲಿಗಳು, ಸಣ್ಣಪುಟ್ಟ ಕೆಲಸ ಮಾಡಿ ಬದುಕುವವರ ಸ್ಥಿತಿ ಏನು? ಬೆಲೆ ಏರಿಕೆಯ ಹೊಡೆತದಲ್ಲಿ ಅವರು ಜೀವನ ನಡೆಸುವುದಾದರೂ ಹೇಗೆ? ಆಡಳಿತ ಪಕ್ಷದಲ್ಲಿರುವ ನಾಯಕರಿಗೆ ಸಿಎಂ ಸ್ಥಾನ, ಸಚಿವ ಸ್ಥಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಾದರೆ, ವಿಪಕ್ಷದಲ್ಲಿರುವವರಿಗೆ ನಾವು ಅಧಿಕಾರಕ್ಕೆ ಬರುವುದು ಯಾವಾಗ ಎಂಬ ಚಿಂತೆ. ಎಲ್ಲರಿಗೂ ಅವರ ರಾಜಕೀಯ ಭವಿಷ್ಯದ ಚಿಂತೆಯೇ ವಿನಃ ಪ್ರಜೆಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಸದ್ಯಕ್ಕೆ ರಾಜ್ಯದಲ್ಲಿ ಮೂರು ಪಕ್ಷಗಳಿದ್ದು, ಮೂರು ಪಕ್ಷಗಳಲ್ಲೂ ಮೂರು ತರಹದ ಸಮಸ್ಯೆಗಳು ಇದೀಗ ಗೋಚರಿಸಲಾರಂಭಿಸಿದೆ. ಆಡಳಿತ ಪಕ್ಷದಲ್ಲಿ ಕುರ್ಚಿ ಗಲಾಟೆ ಒಳಗೊಳಗೆ ನಡೆಯುತ್ತಿದ್ದು, ಇದರ ಪರಿಣಾಮ ಆಡಳಿತ ಹಳ್ಳ ಹಿಡಿಯುತ್ತಿದೆ. ಇನ್ನು ಆಡಳಿತ ಪಕ್ಷ ಹಳಿ ತಪ್ಪಿದಾಗ ಅದನ್ನು ಎಚ್ಚರಿಸಬೇಕಾದ ವಿಪಕ್ಷಗಳ ಸ್ಥಿತಿ ಊರು ಬಾಗಿಲಾಗಿದೆ. ಇರುವ ನಾಲ್ಕು ಮಂದಿಯೇ ಕಿತ್ತಾಡಿಕೊಂಡು ಉಚ್ಛಾಟನೆ ಶಿಕ್ಷೆ ಅನುಭವಿಸಿಕೊಂಡು ಒಬ್ಬರನೊಬ್ಬರು ಬೈಯ್ದುಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಅವರು ಈ ಕಾಲಕ್ಕೆ ಉದ್ಧಾರ ಆಗುವುದು ತುಸು ಕಷ್ಟವೇ..

Ugadi Political Situation in State Leaders and Voters Challenges

ಸ್ವಾರ್ಥದ ರಾಜಕೀಯದಿಂದ ಅಭಿವೃದ್ಧಿ ಮರೀಚಿಕೆ

ರಾಜ್ಯದಲ್ಲಿ ಆಡಳಿತ ಪಕ್ಷದ ನಾಯಕರು ಏರಿಗೆಳೆದರೆ, ವಿಪಕ್ಷದವರು ನೀರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಅಧೋಗತಿಗೆ ಹೋಗುತ್ತಿದೆ. ಅವರವರು ಅವರವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ, ಜನಹಿತಕ್ಕಾಗಿ ಶ್ರಮಿಸುವವರ ಕೊರತೆ ಎದುರಾಗಿದೆ. ಅದಕ್ಕಿಂತ ಹೆಚ್ಚಾಗಿ ಅಧಿಕಾರದ ಮದವೂ ಬಹಳಷ್ಟು ನಾಯಕರನ್ನು ಅಧಃಪತನಕ್ಕೆ ತಳ್ಳುತ್ತಿದೆ. ಹಣ, ಆಸ್ತಿಯನ್ನು ಕೂಡಿಡುವ ಸಲುವಾಗಿ ಸ್ವಾರ್ಥದ ರಾಜಕೀಯಕ್ಕೆ ಒತ್ತು ನೀಡುತ್ತಿರುವುದರಿಂದ ಕರ್ಮ ತಿರುಗಿ ಬರುತ್ತಿದೆ. ಅದರ ಪರಿಣಾಮಗಳು ಬೇರೆ, ಬೇರೆ ರೀತಿಯಲ್ಲಿ ಕಾಡಲಾರಂಭಿಸುತ್ತಿರುವುದು ಇವತ್ತು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ.

ವಿಶ್ವಾವಸು ಸಂವತ್ಸರದ ಯುಗಾದಿ ಈ ಬಾರಿ ರಾಜಕೀಯದಲ್ಲಿ ಯಾವ ರೀತಿಯ ಫಲಕೊಡುತ್ತದೆಯೋ ಗೊತ್ತಿಲ್ಲ. ಈಗಾಗಲೇ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆ ಅದು ಸೃಷ್ಟಿಸಿರುವ ತಲ್ಲಣಗಳು ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವೂ ಸರಿ ಹೋಗಿ ಮಳೆ, ಬೆಳೆಯಾಗಿ ರಾಜ್ಯ ಸುಭೀಕ್ಷೆ ಕಂಡರೆ ಅಷ್ಟೇ ಸಾಕು. ಈ ಬಾರಿಯ ಯುಗಾದಿಯಿಂದ ನಾವೆಲ್ಲರೂ ಒಳಿತನ್ನೇ ಬಯಸೋಣ. ನಮ್ಮನ್ನಾಳುವ ನಾಯಕರಿಗೆ ದೇವರು ಒಳ್ಳೆಯ ಬುದ್ದಿಕೊಟ್ಟು ರಾಜ್ಯವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವಮತಾಗಲಿ ಎನ್ನುವುದೇ ಜನರ ಪ್ರಾರ್ಥನೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+