ಎಲೆಕ್ಷನ್ ಟೈಮ್ ಲಾಬಿ: ಲಿಕ್ಕರ್, ಗಣಿ, ರಿಯಲ್ ಎಸ್ಟೇಟ್
ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಚುನಾವಣೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಸ್ವಾರಸ್ಯಕರವಾಗಿ ಕಂಡು ಬಂದಿದೆ. ಹಳೆ ರಣತಂತ್ರ, ಲಾಬಿಗಳೆಲ್ಲವೂ ಮಾಯವಾಗಿ ಹೊಸ ರೀತಿಯಲ್ಲಿ ಟಿಕೆಟ್ ರಾಜಕೀಯ ಶುರುವಾಗಿದೆ.
ಲಾಬಿಗಳ ವಿಷಯಕ್ಕೆ ಬಂದರೆ, ಪ್ರದೇಶದಿಂದ ಪ್ರದೇಶಕ್ಕೆ ಲಾಬಿಗಳು ಬದಲಾಗುತ್ತಿರುತ್ತವೆ. ಕರ್ನಾಟಕದಲ್ಲಿ ಮುಖ್ಯವಾಗಿ ಲಿಕ್ಕರ್, ಮೈನಿಂಗ್, ಶಿಕ್ಷಣ, ರಿಯಲ್ ಎಸ್ಟೇಟ್ ಲಾಬಿಗಳು ಚುನಾವಣೆ ಸಂದರ್ಭದಲ್ಲಿ ಭಾರಿ ಪರಿಣಾಮ ಬೀರುತ್ತಾ ಬಂದಿವೆ.
ಟಿಕೆಟ್ ಪಡೆಯಲು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದು ಈ ಎಲ್ಲಾ ಲಾಬಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕಾಲ ಕಾಲಕ್ಕೆ ಲಾಬಿಗಳು ಬದಲಾದರೂ ಲಾಬಿ ಮಾಡುವುದು ಮಾತ್ರ ನಿಂತಿಲ್ಲ. ಟಿಕೆಟ್ ನಂಬಿಕೊಂಡು ಹಣ ಸುರಿದು ಕೈ ಸುಟ್ಟಿಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ.
ಇದಲ್ಲದೆ, ಲಾಬಿಕೋರರಿಗೆ ಪೂರಕವಾಗಿ ಗುತ್ತಿಗೆದಾರರ ಒತ್ತಡವೂ ಅನೇಕ ಬಾರಿ, ರಾಜಕಾರಣಿಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಮುಖ ಲಾಬಿಗಳತ್ತ ಒಂದು ನೋಟ ಮುಂದಿದೆ...

ಲಿಕ್ಕರ್ ಲಾಬಿ
ಕರ್ನಾಟಕ ಚುನಾವಣೆಯಲ್ಲಿ ಅನಾದಿ ಕಾಲದಿಂದಲೂ ಹೆಚ್ಚು ಪ್ರಭಾವ ಬೀರಿದ್ದು ಲಿಕ್ಕರ್ ಲಾಬಿ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯಲು, ಗೆದ್ದ ಮೇಲೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಇದನ್ನು ಪ್ರಯೋಗಿಸಿ ಅನೇಕ ಮಂದಿ ಯಶಸ್ವಿಯಾಗಿದ್ದಾರೆ. ಆದರೆ, 2003ರ ನಂತರ ಈ ಲಾಬಿ ತಕ್ಕಮಟ್ಟಿಗೆ ಕ್ಷೀಣಿಸುತ್ತಾ ಬಂದಿದೆ ಎನ್ನಬಹುದು. ಕರ್ನಾಟಕ ರಾಜ್ಯ ಮದ್ಯ ಮಾರಾಟ ನಿಗಮ ನಿಯಮಿತ ಸ್ಥಾಪನೆ, ಅಬಕಾರಿಯಿಂದ ಸೋರಿಕೆ ಹಣ ತಡೆಗಟ್ಟಿದ್ದು, ಸೆಕೆಂಡ್ಸ್ ಸೇಲ್ ಗೆ ಕಡಿವಾಣ ಹಾಕಿತು. ಹಣ ಹೂಡಿಕೆಯಿಂದ ಹೆಚ್ಚಿನ ಲಾಭವಿಲ್ಲದ ಕಾರಣ ಲಿಕ್ಕರ್ ಲಾಬಿ ತಣ್ಣಗಾಯಿತು.

ಶಿಕ್ಷಣ ಲಾಬಿ
ಲಿಕ್ಕರ್ ಲಾಬಿ ತಣ್ಣಗಾದ ನಂತರ ಚುನಾವಣಾ ಕಣವನ್ನು ಬಿಸಿಯೇರಿಸಿದ್ದು ಶಿಕ್ಷಣ ಲಾಬಿ. ರಾಜ್ಯ ಅನೇಕ ರಾಜಕಾರಣಿಗಳು ಪಕ್ಷಾತೀತವಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದಾರೆ. ಶಿಕ್ಷಣ ಸಂಸ್ಥೆಗಳ ನೇಮಕಾತಿ, ಸೀಟು ಹಂಚಿಕೆ, ಮ್ಯಾನೇಜ್ಮೆಂಟ್ ಕೋಟಾ ಹೀಗೆ ದೊಡ್ಡ ಮಟ್ಟದ ಲಾಬಿ ನಡೆಯುತ್ತದೆ. ಶಿಕ್ಷಣ ಲಾಬಿಗೆ ಪೂರಕವಾಗಿ ಐಟಿ ಲಾಬಿ ಕೂಡಾ ಚಿಗುರೊಡೆದಿತ್ತು. ಆದರೆ, 1999 ರಿಂದ 2004ರ ತನಕ ಮಾತ್ರ ಜೀವಂತ ಇತ್ತು. ಸರ್ಕಾರ ಐಟಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ, ಈ ಲಾಬಿ ಅಷ್ಟು ಬೆಳೆಯಲಿಲ್ಲ.

ಗಣಿಗಾರಿಕೆ ಲಾಬಿ
2008ರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಗಣಿಗಾರಿಕೆ ಲಾಬಿ. ಬಳ್ಳಾರಿಯ ಗಾಲಿ ರೆಡ್ಡಿ ಸೋದರರು ತಮ್ಮ ಹಣ ಬಲದ ಮೂಲಕ ಟಿಕೆಟ್ ಹಂಚಿಕೆ, ವರ್ಗಾವಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರತೊಡಗಿದರು.
ಇದೇ ರೀತಿ ಲಾಡ್ ಸೋದರರು ಕಾಂಗ್ರೆಸ್ಸಿನಲ್ಲೂ ತಮ್ಮ ಪ್ರಭಾವ ಬೀರತೊಡಗಿದರು. ಆದರೆ, ಲೋಕಾಯುಕ್ತರ ತನಿಖೆ, ರೆಡ್ಡಿ ಜೈಲು ಪಾಲಾಗಿದ್ದು, ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಈ ಲಾಬಿಯ ಬಲ ಕುಗ್ಗಿಸಿತ್ತು. ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಮೈನಿಂಗ್ ಲಾಬಿ ಬಲವಾಗಿ ಕಂಡು ಬಂದಿತ್ತು.

ರಿಯಲ್ ಎಸ್ಟೇಟ್ ಲಾಬಿ
ಇದು ಬೆಂಗಳೂರು ಮಹಾನಗರವನ್ನು ಬಹುವಾಗಿ ಕಾಡಿದ ಲಾಬಿ. ಬೆಂಗಳೂರು ನಂತರ ಮೈಸೂರು, ತುಮಕೂರು, ಶಿವಮೊಗ್ಗಕ್ಕೂ ಹಬ್ಬಿತ್ತು.
ರಿಯಲ್ ಎಸ್ಟೇಟ್ ಪ್ರಗತಿಯಿಂದ ವಸತಿ ಕ್ಷೇತ್ರದಲ್ಲಿ ಬೆಲೆ ಏರಿಕೆ 2008ರಿಂದ ಕಂಡು ಬಂದಿತ್ತು. ಆದರೆ, 2013ರ ವೇಳೆಗೆ ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿತು. ಭಾರಿ ಯೋಜನೆಗಳನ್ನು ಪಡೆದು, ನಿಭಾಯಿಸುವವರಿಗೆ ಮಾತ್ರ ಇದನ್ನು ಪ್ರಯೋಗಿಸಲು ಸಾಧ್ಯವಾಯಿತು. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಮಂಡ್ಯಗಳಲ್ಲೂ ಇದರ ಪ್ರಯೋಗ ಕಾಣಬಹುದಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications