Minister Madhu Bangarappa: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ; ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ: ಮಧು ಬಂಗಾರಪ್ಪ
ಬೆಂಗಳೂರು, ಜೂನ್ 08: ಬಿಜೆಪಿ ಸರ್ಕಾರದಲ್ಲಿ ಪಠ್ಯಕ್ರಮದಲ್ಲಿ ಪರಿಷ್ಕರಣೆ ಆದ ಪಾಠಗಳನ್ನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡುತ್ತೇವೆ. ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಕ್ಕಳು ತಪ್ಪು ಓದಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರ್ತಾ ಇದೆ. ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಇನ್ನೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೆವೆ.
ಯಾವ ಪಾಠ ಮಾಡಬೇಕು, ಯಾವುದು ಮಾಡಬಾರದು ಎಂಬುದನ್ನೂ ತಿಳಿಸುತ್ತೇವೆ.ಸಮವಸ್ತ್ರ,ಪಠ್ಯ ಪುಸ್ತಕದ ಬಗ್ಗೆ ಪ್ರಸ್ತಾವನೆ ಬಂದಿಲ್ಲ ಮಕ್ಕಳ ಭವಿಷ್ಯಕ್ಕೆ ಏನಾದರೂ ತೊಂದರೆಯಿದ್ದರೆ ಆಗ ಮಾತ್ರ ನಾವು ಮುಂದುವರಿಯಬಹುದು ಅದನ್ನ ಬಿಟ್ಟು ಬೇರೆ ಯಾವುದೇ ತೀರ್ಮಾನವಿಲ್ಲ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆಯ ಹಠವೇಕೆ?; ಸರ್ಕಾರಕ್ಕೆ ಪ್ರಶ್ನೆ
ಕೇಸರೀಕರಣಕ್ಕೆ
ಬ್ರೇಕ್
ಹಾಕುವ
ವಿಚಾರವಾಗಿ
ಮಾತನಾಡಿ,
ಮಕ್ಕಳ
ಒಳಿತಿಗೆ
ಸರಿಯಾಗಿ
ಕ್ರಮ
ತೆಗೆದುಕೊಳ್ಳುತ್ತೇವೆ.
ಅದು
ಇದು
ಅಂತ
ಏನೂ
ಇಲ್ಲ,
ತುಂಬಾ
ಸೂಕ್ಷ್ಮ
ವಿಚಾರಗಳಿವು.
ಹಾಗಾಗಿ
ಕ್ಯಾಬಿನೆಟ್
ನಲ್ಲಿ
ಚರ್ಚೆ
ಮಾಡಬೇಕಿದೆ,
ದೊಡ್ಡ
ಮಟ್ಟದ
ಚರ್ಚೆಗಳ
ಅವಶ್ಯಕತೆಯಿದೆ.
ಹಾಗಾಗಿ
ಮಕ್ಕಳ
ಒಳಿತನ್ನ
ನೋಡಿಯೇ
ಮಾಡಬೇಕು.
ಮಕ್ಕಳಿಗೆ
ಒಳಿತಾಗುವಂತೆ
ನಾವು
ಮಾಡ್ತೇವೆ
ಎಂದು
ಮಧುಬಂಗಾರಪ್ಪ
ಹೇಳಿದರು.