ಮುಜರಾಯಿ ದೇವಾಲಯದಲ್ಲಿ ನ.1ರಂದು ವಿಶೇಷ ಪೂಜೆ
ಬೆಂಗಳೂರು, ಅ.27 : ಕನ್ನಡ ರಾಜ್ಯೋತ್ಸವದ ದಿನದಂದು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವಂತೆ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸುತ್ತೋಲೆ ರವಾನಿಸಿದೆ. ಅ.31ರಂದು ವಿಶೇಷ ದೀಪಾಲಂಕಾರ ಮತ್ತು ನ.1ರಂದು ವಿಶೇಷ ಪೂಜೆ ನಡೆಯಲಿದೆ.
ಕರ್ನಾಟಕದ
ನಗರ
ಮತ್ತು
ಗ್ರಾಮೀಣ
ಪ್ರದೇಶಗಳ
ಮುಜರಾಯಿ
ದೇವಸ್ಥಾನಗಳಲ್ಲಿ
ದೀಪಾಲಂಕಾರ,
ವಿಶೇಷ
ಪೂಜೆ
ಮಾಡುವ
ಮೂಲಕ
ನವಂಬರ್
1ರಂದು
ಕನ್ನಡ
ರಾಜ್ಯೋತ್ಸವ
ಆಚರಿಸುವಂತೆ
ಹಿಂದೂ
ಧಾರ್ಮಿಕ
ಸಂಸ್ಥೆ
ಮತ್ತು
ಧರ್ಮಾದಾಯ
ದತ್ತಿ
ಇಲಾಖೆ
ಸುತ್ತೋಲೆಯಲ್ಲಿ
ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ದಿನದಂದು ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಬೇಕು. ಆಯಾ ದೇವಸ್ಥಾನಗಳಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದೆ. [ರಾಜ್ಯೋತ್ಸವದ ದಿನದಂದೂ ಕನ್ನಡ ಮೂಲೆ ಗುಂಪಾಯಿತೇ!]
ನಗರ ಪ್ರದೇಶಗಳ ದೇವಾಲಯಗಳಲ್ಲಿ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಆದರೆ, ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲೂ ನಾಡ ಹಬ್ಬದ ಕಳೆ ಬರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಕನ್ನಡ ರಾಜ್ಯೋತ್ಸವಕ್ಕಾಗಿ ಅ.31 ಮತ್ತು ನ.1ರಂದು ಮುಜರಾಯಿ ದೇಗುಲಗಳಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಮತ್ತು ನ.1ರಂದು ವಿಶೇಷ ಪೂಜೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.