ನ.11ರಿಂದ ಬರಪೀಡಿತ ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಪ್ರವಾಸ
ಬೆಂಗಳೂರು, ನವೆಂಬರ್ 10: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ನ.11ರಿಂದ ಪ್ರವಾಸ ಕೈಗೊಳ್ಳಲಿದ್ದಾರೆ. ನವೆಂಬರ್ 11 ರಿಂದ 16ರ ತನಕ ಪ್ರವಾಸ ಮುಂದುವರೆಯಲಿದೆ. ಮೊದಲ ಹಂತದಲ್ಲಿ ಐದು ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯಯ್ಯ ಭೇಟಿ ನೀಡಲಿದ್ದಾರೆ.
ನವೆಂಬರ್
11ರಂದು
ಬೆಳಗಾವಿ,
ಧಾರವಾಡ,
14ರಂದು
ಕೋಲಾರ,
15ರಂದು
ತುಮಕೂರು
ಮತ್ತು
16ರಂದು
ರಾಮನಗರ
ಜಿಲ್ಲೆಯ
ಬರಪೀಡಿತ
ಪ್ರದೇಶಗಳಿಗೆ
ಭೇಟಿ
ನೀಡಿ
ಬರ
ಕುರಿತು
ವೀಕ್ಷಣೆ
ಮಾಡಲಿದ್ದಾರೆ.
ಭೇಟಿ
ಬಳಿಕ
ಆಯಾ
ಜಿಲ್ಲೆಗಳಲ್ಲಿ
ಬರ
ಪರಿಹಾರ
ಕಾಮಗಾರಿಗಳ
ಪ್ರಗತಿ
ಪರಿಶೀಲಿನೆ
ನಡೆಸಿ,
ಬರ
ಪರಿಹಾರ
ಕ್ರಮಗಳನ್ನು
ಕೈಗೊಳ್ಳಲಿದ್ದಾರೆ.[ಘಮ್ಮೆನ್ನುತ್ತಿದ್ದ
ಹೂವಿನ
ತೋಟಗಳಲ್ಲೀಗ
ಗಂವ್ವೆನ್ನುವ
ಮೌನ]
ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 11 ಶುಕ್ರವಾರ ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಭಾಂಡಿವಾಡ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ತಾಲೂಕು, ಕುಂದಗೋಳ ತಾಲೂಕಿನ ಯರಗುಪ್ಪಿ, ರೊಟ್ಟಿಗವಾಡಗೆ ಭೇಟಿ ನೀಡಲಿದ್ದಾರೆ.[ಬರ ಪರಿಹಾರಕ್ಕೆ ಮಾನದಂಡ ಬದಲಾವಣೆ ಅವಶ್ಯ: ಎಸ್.ಎಂ.ಕೃಷ್ಣ]
ಅದೇ
ದಿನ
ಸಂಜೆ
5.30
ಕ್ಕೆ
ನವಲಗುಂದ
ತಾಲ್ಲೂಕಿನ
ನಲವಡಿ
ಗ್ರಾಮದಲ್ಲಿ
ಮಹಾತ್ಮಾ
ಗಾಂಧಿ
ರಾಷ್ಟ್ರೀಯ
ಗ್ರಾಮೀಣ
ಉದ್ಯೋಗ
ಖಾತ್ರಿ
ಯೋಜನೆಯಡಿ
ಕೈಗೊಂಡ
ಕಾಮಗಾರಿ
ವೀಕ್ಷಿಸಲಿದ್ದಾರೆ.
ಸಂಜೆ
6
ಗಂಟೆಗೆ
ಹುಬ್ಬಳ್ಳಿಯ
ಕಾಟನ್
ಮಾರುಕಟ್ಟೆಯಲ್ಲಿರುವ
ಸಾಂಸ್ಕೃತಿಕ
ಭವನದಲ್ಲಿ
ಧಾರವಾಡ
ಜಿಲ್ಲಾ
ಮಟ್ಟದ
ಅಧಿಕಾರಿಗಳ
ಸಭೆಯಲ್ಲಿ
ಭಾಗಿಯಾಗಲಿದ್ದಾರೆ.
ನ.
12
ಶನಿವಾರ
ಬೆಳಿಗ್ಗೆ
10
ಗಂಟೆಗೆ
ಹುಬ್ಬಳ್ಳಿ
ವಿಮಾನ
ನಿಲ್ದಾಣದಿಂದ
ಹೆಲಿಕಾಪ್ಟರ್
ಮೂಲಕ
ಗದಗ
ಜಿಲ್ಲೆಯ
ವಿವಿಧ
ಸ್ಥಳಗಳಿಗೆ
ಭೇಟಿ
ನೀಡಲಿದ್ದಾರೆ.
ಸಂಜೆ
ಹುಬ್ಬಳ್ಳಿಗೆ
ಆಗಮಿಸಲಿದ್ದು,
ನಂತರ
ಬೆಂಗಳೂರು
ತಲುಪಲಿದ್ದಾರೆ
ಎಂದು
ಮುಖ್ಯಮಂತ್ರಿಗಳ
ಸಚಿವಾಲಯ
ಹೇಳಿದೆ.