ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್
Recommended Video
ಬೆಂಗಳೂರು, ಏಪ್ರಿಲ್ 16: ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಮಾಡುತ್ತದೆಯೋ ಇಲ್ಲವೋ ಆದರೆ ಕೆಲವು ನಾಯಕರ ನಡುವಿನ ವೈಷಮ್ಯವನ್ನಂತೂ ಕಡಿಮೆ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನೆಂದೂ ಒಟ್ಟಾಗಲಾರರು ಎಂದುಕೊಂಡಿದ್ದ ಸಿದ್ದರಾಮಯ್ಯ-ದೇವೇಗೌಡ ಅವರು ಜಂಟಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಒಂದೇ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಪರಸ್ಪರರ ಬಗ್ಗೆ ಜೇನು ಮೆತ್ತಿದ ಮಾತನ್ನಾಡುತ್ತಿದ್ದಾರೆ.
ಮತ್ತೊಂದು ಕಡೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಭಾರಿ ಅಂತರದ ಸೋಲುಣಿಸಿದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಭೇಟಿಯ ನಂತರ ಸಿದ್ದರಾಮಯ್ಯ ಅವರು ಟ್ವಿಟ್ಟರ್ನಲ್ಲಿ ಜಿ.ಟಿ.ದೇವೇಗೌಡ ತಮ್ಮ ಸ್ನೇಹದ ಕುರಿತು ಟ್ವೀಟ್ ಒಂದನ್ನು ಮಾಡಿರುವುದು ಗಮನ ಸೆಳೆಯುತ್ತಿದೆ.

ತಾವು ಮತ್ತು ಜಿ.ಟಿ.ದೇವೇಗೌಡ ವೇದಿಕೆ ಮೇಲೆ ಆಪ್ತವಾಗಿ ಮಾತನಾಡುತ್ತಿರುವ ಫೊಟೊ ಹಾಕಿರುವ ಸಿದ್ದರಾಮಯ್ಯ ಅವರು, 'ನಾನು ಮತ್ತು ಸಚಿವ ಜಿ.ಟಿ.ದೇವೇಗೌಡ ಜಾತ್ಯತೀತ ತತ್ವಕ್ಕೆ ಬದ್ದವಾಗಿರುವವರು' ಎಂದಿದ್ದಾರೆ.
ರಾಜಕೀಯ ವಿರೋಧಿಯೊಂದಿಗಿನ ಪುನರ್ ಸ್ನೇಹದ ಬಗ್ಗೆಯೂ ಬರೆದಿರುವ ಸಿದ್ದರಾಮಯ್ಯ, 'ರಾಜಕೀಯ ಬೆಳವಣಿಗೆಗಳಲ್ಲಿ ವೈಯಕ್ತಿಕ ಸಂಬಂಧಗಳು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಗಾಗ ಏರುಪೇರುಗಳಾಗುತ್ತವೆ. ಅಂತಿಮವಾಗಿ ರಾಜಕೀಯ ಸಂಬಂಧವನ್ನು ನಿರ್ದೇಶಿಸುವುದು ಸಿದ್ಧಾಂತ' ಎಂದಿದ್ದಾರೆ.
ರಾಜಕೀಯ ಬೆಳವಣಿಗೆಗಳಲ್ಲಿ ವೈಯಕ್ತಿಕ ಸಂಬಂಧಗಳು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಗಾಗ ಏರುಪೇರುಗಳಾಗುತ್ತವೆ.
— Siddaramaiah (@siddaramaiah) April 16, 2019
ಅಂತಿಮವಾಗಿ ರಾಜಕೀಯ ಸಂಬಂಧವನ್ನು ನಿರ್ದೇಶಿಸುವುದು ಸಿದ್ಧಾಂತ.
ನಾನು ಮತ್ತು ಸಚಿವ ಜಿ.ಟಿ.ದೇವೇಗೌಡ ಜಾತ್ಯತೀತ ತತ್ವಕ್ಕೆ ಬದ್ದವಾಗಿರುವವರು. ಬಿಜೆಪಿ ಸೋಲಿಗಾಗಿ ನಾವೆಲ್ಲ ಜತೆಯಲ್ಲಿ ಹೆಜ್ಜೆ ಹಾಕೋಣ. pic.twitter.com/aITb1G6ynQ
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ರಾಜಕೀಯ ಒತ್ತಡದಲ್ಲಿ ಜಿ.ಟಿ.ದೇವೇಗೌಡ ಅವರೊಂದಿಗಿನ ಸಂಬಂಧ ಏರುಪೇರಾಗಿತ್ತು, ಆದರೆ ಇಬ್ಬರ ನಿಲವು ಒಂದೇ ಆಗಿರುವ ಕಾರಣ ನಮ್ಮ ರಾಜಕೀಯ ಸಂಬಂಧ ಮತ್ತೆ ಪುನರ್ ಸ್ಥಾಪಿತವಾಗಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಂತಿಮವಾಗಿ ಬಿಜೆಪಿ ಸೋಲಿಸಲು ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ಹೇಳಿದ್ದಾರೆ.












Click it and Unblock the Notifications