ಮೋದಿ ಪ್ರಮಾಣವಚನಕ್ಕೆ ಶೆಟ್ಟರ್, ಈಶ್ವರಪ್ಪ
ಬೆಂಗಳೂರು, ಮೇ 25 : ಸೋಮವಾರ ನಡೆಯಲಿರುವ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ರಾಜ್ಯ ಬಿಜೆಪಿಯ ಆರು ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಹದಿನೇಳು ಸಂಸದರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಮೇ
26ರ
ಸೋಮವಾರ
ಸಂಜೆ
6
ಗಂಟೆಗೆ
ರಾಷ್ಟ್ರಪತಿ
ಭವನದಲ್ಲಿ
ನಡೆಯಲಿರುವ
ಸಮಾರಂಭದಲ್ಲಿ
ನರೇಂದ್ರ
ಮೋದಿ
ಪ್ರಧಾನಿಯಾಗಿ
ಪ್ರಮಾಣವಚನ
ಸ್ವೀಕರಿಸಲಿದ್ದಾರೆ.
ಈ
ಸಮಾರಂಭದಲ್ಲಿ
ರಾಜ್ಯದ
ಬಿಜೆಪಿ
ಸಂಸದರನ್ನು
ಹೊರತುಪಡಿಸಿ
ರಾಜ್ಯ
ಬಿಜೆಪಿಯ
6
ಮಂದಿನ
ನಾಯಕರು
ಭಾಗವಹಿಸಲಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸಿಟಿ ರವಿ, ಸಂತೋಷ್ ಮಾತ್ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಲಿದ್ದಾರೆ. [ಪ್ರಮಾಣ ವಚನ ಸ್ವೀಕಾರಕ್ಕೆ 'ಅಮ್ಮ' ಬರ್ತಿಲ್ಲ]
ಜಿಲ್ಲೆಗಳಲ್ಲಿ ಸಂಭ್ರಮಾಚರಣೆ : ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ನಡೆಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಯಲಿದೆ.
ಯಾರು ಸಚಿವರು ? : ನರೇಂದ್ರ ಮೋದಿ ಅವರರೊಂದಿಗೆ ಸಚಿವರಾಗಿ ಕರ್ನಾಟಕದ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ರಾಜ್ಯದ ಹದಿನೇಳು ಸಂಸದರ ಪೈಕಿ ಒಬ್ಬರು ಅಥವ ಇಬ್ಬರು ಸೋಮವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ, ಅವರು ಯಾರು? ಎಂಬ ಗುಟ್ಟು ಇನ್ನೂ ಬಹಿರಂಗವಾಗಿಲ್ಲ.