ಜುಲೈ 28 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ... School Holiday
ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಲಾಗುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆ & ತಾಲೂಕುಗಳ ಶಾಲಾ & ಕಾಲೇಜುಗಳಿಗೆ ಹೀಗೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರಜೆ ನೀಡಲಾಗಿದೆ. ಅದರಲ್ಲೂ ಜುಲೈ 25 ಶುಕ್ರವಾರ & ಜುಲೈ 26 ಶನಿವಾರ ಸಾಲು ಸಾಲಾಗಿ ಶಾಲಾ & ಕಾಲೇಜುಗಳಿಗೆ ರಜೆ ನೀಡಿರುವ ಕಾರಣ ಭಾನುವಾರ ಕೂಡ ಸೇರಿ 3 ದಿನಗಳ ಕಾಲ ನಿರಂತರ ರಜೆ ಸಿಕ್ಕಂತೆ ಆಗಿದೆ. ಹೀಗಿದ್ದಾಗಲೇ, ಜುಲೈ 28 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ...
ಜೂನ್ 2025 ಪೂರ್ತಿ ಹಲವು ಗೊಂದಲದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೆ, ಅದರಲ್ಲೂ ಈ ಸಮಯದಲ್ಲೇ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಕರ್ನಾಟಕ ಬಂದ್ ಮಾಡಲು ಕಳೆದ ತಿಂಗಳು ಕನ್ನಡಪರ ಸಂಘಟನೆಗಳು ಪ್ಲಾನ್ ಮಾಡಿದ್ದವು, ಕನ್ನಡ & ಕನ್ನಡಿಗರ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್ ವಿರುದ್ಧ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಜೂನ್ ತಿಂಗಳಲ್ಲಿ ಸಿದ್ಧತೆ ನಡೆಸಿದ್ದವು. ಆದರೆ, ಕೊನೇ ಕ್ಷಣದಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ನಿರ್ಧಾರ ಕೈಬಿಟ್ಟಿದ್ದರು. ಹೀಗಾಗಿ ರಾಜ್ಯದ ಶಾಲಾ & ಕಾಲೇಜುಗಳಿಗೆ ರಜೆ ಜಸ್ಟ್ ಮಿಸ್ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಪದೇ ಪದೇ ರಜೆ ಸಿಗುತ್ತಾ ಇದೆ...

ಜುಲೈ 28 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ?
ಹೌದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಶಾಲಾ & ಕಾಲೇಜುಗಳಿಗೆ ಸಾಲು ಸಾಲು ರಜೆ ಘೋಷಣೆ ಮಾಡಲಾಗಿದೆ. ಮೊದಲೇ ಹೇಳಿದಂತೆ, ಜುಲೈ 25 ಶುಕ್ರವಾರ & ಜುಲೈ 26 ಶನಿವಾರ ಸಾಲು ಸಾಲಾಗಿ ಶಾಲಾ & ಕಾಲೇಜುಗಳಿಗೆ ರಜೆ ನೀಡಿರುವ ಕಾರಣ ಭಾನುವಾರ ಕೂಡ ಸೇರಿ 3 ದಿನಗಳ ಕಾಲ ನಿರಂತರ ರಜೆ ಸಿಕ್ಕಂತೆ ಆಗಿದೆ. ಹೀಗಿದ್ದಾಗಲೇ, ಜುಲೈ 28 ಸೋಮವಾರ ಕೂಡ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ...
ತುಂಬಿ ತುಳುಕುತ್ತಿವೆ ಬಹುತೇಕ ಡ್ಯಾಂಗಳು
ಕರ್ನಾಟಕದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣ ರೈತರು ಹಾಗೂ ಕನ್ನಡ ನಾಡಿನ ಪ್ರಜೆಗಳು ಕೂಡ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು, ಭಾರಿ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಹಾಗೇ ಆಲಮಟ್ಟಿ, ತುಂಗಭದ್ರಾ ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ಡ್ಯಾಂಗಳು ಭರ್ಜರಿಯಾಗಿ ಭರ್ತಿಯಾಗಿವೆ.












Click it and Unblock the Notifications