ಮಂಡ್ಯದಲ್ಲಿಲ್ಲ ಅಕ್ರಮ ಮರಳು ದಂಧೆಕೋರರಿಗೆ ಭಯ
ಮಂಡ್ಯ, ಡಿಸೆಂಬರ್ 15 : ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಎಸಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಪಾಂಡವಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ
ವಶದಲ್ಲಿರುವ
ವ್ಯಕ್ತಿಗಳು
ಅಮಾಯಕರು
ಅವರನ್ನು
ಬಿಡುಗಡೆ
ಮಾಡುವಂತೆ
ಸಾರ್ವಜನಿಕರು,
ಸಂಬಂಧಿಕರು
ಪೊಲೀಸ್
ಠಾಣೆಗೆ
ಮುತ್ತಿಗೆ
ಹಾಕಿ
ಪ್ರತಿಭಟನೆ
ನಡೆಸಿದರು.
ಮತ್ತೊಂದು
ಕಡೆ
ಅಧಿಕಾರಿಗಳ
ಮೇಲೆ
ಹಲ್ಲೆಗೆ
ಯತ್ನಿಸಿದನ್ನು
ಖಂಡಿಸಿ
ಸರ್ಕಾರಿ
ನೌಕರರು
ಪ್ರತಿಭಟನೆ
ಮಾಡಿದ್ದಾರೆ.
[ಮರಳು
ಮಾಫಿಯಾ
ಎಂದರೇನು?
ಏನಿದರ
ಮರ್ಮ?]
ಘಟನೆಯ ವಿವರ : ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ, ದೊಡ್ಡಬ್ಯಾಡರಹಳ್ಳಿ ಸುತ್ತಮತ್ತ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದಾರೆಂಬ ದೂರುಗಳು ಬಂದಿತ್ತು. ಈ ಸಂಬಂಧ ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜು ಅವರು ದಾಳಿ ನಡೆಸಿದ್ದರು. [ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]
ವಿಷಯ ತಿಳಿದ ಮರಳು ದಂಧೆ ನಡೆಸುತ್ತಿದ್ದ ದುಷ್ಕರ್ಮಿಗಳು ಆಕ್ರೋಶಗೊಂಡಿದ್ದರು. ಅವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಸ್ಕಾರ್ಫಿಯೋ ಹಾಗೂ ಬೈಕ್ನಲ್ಲಿ ಹಿಂಬಾಲಿಸಿದ್ದರು. ಇದರ ಸೂಕ್ಷ್ಮತೆ ಅರಿತ ನಾಗರಾಜು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. [ಕನಿಷ್ಠ ಲಾರಿಯನ್ನಾದ್ರೂ ಉಳಿಸಿದರಲ್ಲ ಪುಣ್ಯಾತ್ಮ ಪೊಲೀಸರು!]
ಸ್ಥಳಕ್ಕೆ
ಬಂದ
ಪೊಲೀಸರು
ಅಕ್ರಮ
ಮರಳು
ತುಂಬಿದ
ಟಿಪ್ಪರ್
ಮತ್ತು
ಹಿಂಬಾಲಿಸುತ್ತಿದ್ದ
ಸ್ಕಾರ್ಫಿಯೋ
ಹಾಗೂ
ಬೈಕ್ನ್ನು
ವಶಪಡಿಸಿಕೊಂಡು
ವ್ಯಕ್ತಿಯೊಬ್ಬನನ್ನು
ವಶಕ್ಕೆ
ಪಡೆದಿದ್ದರು.
ಇದಾದ
ನಂತರ
ಪಾಂಡವಪುರ
ಪಟ್ಟಣದ
ಮಂಡ್ಯ
ವೃತ್ತದಲ್ಲಿ
5
ಮರಳು
ತುಂಬಿದ
ಎತ್ತಿನ
ಗಾಡಿಗಳು
ತೆರಳುತ್ತಿದ್ದುದನ್ನು
ಗಮನಿಸಿದ
ಪೊಲೀಸ್
ಇನ್ಸ್ಪೆಕ್ಟರ್
ಅಣ್ಣಯ್ಯ
ಅವರು
ವಿಚಾರಣೆ
ನಡೆಸಿದ್ದರು.
ಇದರಿಂದ ಕೋಪಗೊಂಡ ಗಾಡಿಯಲ್ಲಿದ್ದವರು ಇನ್ಸ್ಪೆಕ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು, ಹಲ್ಲೆಗೆ ಮುಂದಾದರು. ಪರಿಸ್ಥಿತಿ ಅರಿತು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಆಗ ಕೆಲವರು ಪರಾರಿಯಾದರು. ಆದರೆ, ಪೊಲೀಸರು ಸಿದ್ದೇಗೌಡ (60) ಹಾಗೂ ಚಿಕ್ಕಬ್ಯಾಡರಹಳ್ಳಿ ಕೃಷ್ಣೇಗೌಡ (40) ಎಂಬುವರನ್ನು ವಶಕ್ಕೆ ಪಡೆದುಕೊಂಡರು.
ಬಂಧಿತರ ಕುಟುಂಬದವರು ಹಾಗೂ ಸಾರ್ವಜನಿಕರು ಪೊಲೀಸರ ಕ್ರಮ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಂಧಿತರು ಅಮಾಯಕರಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.