ಮುಂಡ್ಕೂರು ವಿಠೋಬ ದೇವರ ಸಹಸ್ರ ಕುಂಭಾಭಿಷೇಕ ಸಂಪನ್ನ
ಮಂಗಳೂರು, ನ 19: ಶ್ರೀ ವಿಠೋಬ ದೇವಸ್ಥಾನ ಮುಂಡ್ಕೂರು ಇದರ ಸಹಸ್ರ ಕುಂಭಾಭಿಷೇಕ ರವಿವಾರ (ನ. 19) ಸಂಪನ್ನಗೊಂಡಿತು. ಕಾಶೀಮಠ ಸಂಸ್ಥಾನದ ಸುಕೃತೀಂದ್ರ ತೀರ್ಥರಿಂದ ಮೂಲ ಪ್ರತಿಷ್ಠೆಗೊಂಡು, ಸುಧೀಂದ್ರ ತೀರ್ಥರಿಂದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಪುನಃಪ್ರತಿಷ್ಠಾಪನೆಗೊಂಡಿತ್ತು.
ಇದೀಗ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಸಹಸ್ರ ಕುಂಭಾಭಿಷಿಕ್ತನಾಗುವ ಪರಿವಾರಸಹಿತ ವಿಠೋಬ ದೇವರು ಕಾಶೀಮಠ ಸಂಸ್ಥಾನದ ಮೂರು ತಲೆಮಾರಿನ ಗುರುವರ್ಯರಿಂದಲೂ ಅರ್ಚಿತನಾದವನು.

ಈ ಶುಭಸಂದರ್ಭದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತಗಳಿಂದ ಪರಿವಾರಸಹಿತ ವಿಠೋಬ ದೇವರಿಗೆ ತಂತ್ರಸಾರೋಕ್ತ ಸಹಸ್ರ ಕುಂಭಾಭಿಷೇಕವು ನಡೆಯಿತು. ಆಸೇತು ಹಿಮಾಲಯದಿಂದ ರಾಮೇಶ್ವರದವರೆಗಿನ ಸಮಸ್ತ ಪವಿತ್ರ ನದಿ, ಸರೋವರಗಳಿಂದ ತೀರ್ಥ, ಮೃತ್ತಿಕೆಗಳನ್ನು, ಮುಂಡ್ಕೂರಿನ ಕಾರ್ಯಕರ್ತರೂ ಸೇರಿ ಪ್ರಾರ್ಥನಾಪೂರ್ವಕ, ವಿಧಿವತ್ತಾಗಿ ಶ್ರದ್ಧೆಯಿಂದ ಗುರುಗಳ ಆದೇಶದಂತೆ ಸಂಗ್ರಹಿಸಿ ತಂದಿದ್ದರು.
ರವಿವಾರ ಮಾರ್ಗಶಿರ ಶುದ್ದ ಪಾಡ್ಯ ಬೆಳಗ್ಗೆ 4-15ಕ್ಕೆ ದೇವರ ಕವಾಟೋದ್ಘಾಟನೆ, 5.30ಕ್ಕೆ ಹತ್ತು ಸಮಸ್ತರಿಂದ ಪ್ರಾರ್ಥನೆ, ಗುರುಗಣಪತಿ ಪೂಜನ, ಸ್ವಸ್ತಿ ಪುಣ್ಯಾಹವಾಚನ, ಗಂಗಾ ಪೂಜನೆ, ವಿವಿಧ ಕ್ಷೇತ್ರಗಳಿಂದ ಆಗಮಿಸಿದ ವೈದಿಕರಿಂದ ಮಂಡಲೆ ಸಹಸ್ರ ಕಲಶಾಭಿಮಂತ್ರಣ, ದೇವರಿಗೆ ಪಂಚಾಮೃತ ಅಭಿಷೇಕ,ತತ್ವ ಹೋಮ, ಪ್ರಧಾನ ದೇವತಾ ಮೂಲ ಮಂತ್ರಾದಿ ಹೋಮ ಬೆಳಿಗ್ಗೆ ಗಂಟೆ 9.30ಕ್ಕೆ ದೇವರಿಗೆ ಸಂಯಮೀಂದ್ರ ತೀರ್ಥ ಶ್ರೀಗಳಿಂದ ನೇತೃತ್ವದಲ್ಲಿ ನಡೆಯಿತು.

ಜೊತೆಗೆ, ತಂತ್ರಸಾರೋಕ್ತ ಸಹಸ್ರ ಕುಂಭಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ದೇವರಿಗೆ ಅಭಿಷೇಕಾಂಗಪ್ರಸನ್ನ ಪೂಜೆ ಅಷ್ಟಮಂಗಲ ನಿರೀಕ್ಷಣೆ, ಪಟ್ಟಕಾಣಿಕೆ,ಗುರು ಕಾಣಿಕೆ. ಹತ್ತು ಸಮಸ್ತರಿಗೆ ಪ್ರಸಾದ,ಪ್ರಾಯಶ್ಚಿತ ಹೋಮ, ಬಲಿಪ್ರಧಾನ.
ಮಧ್ಯಾಹ್ನ ಗಂಟೆ 3.00ಕ್ಕೆ. ಶ್ರೀದೇವರು ಯಜ್ಞಮಂಟಪದಲ್ಲಿ ಚಿತ್ತೈಸಿ .ಪೂರ್ಣಾಹುತಿ ಮುಂತಾದ ಕಾರ್ಯಾಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಸಹಸ್ರ ಕುಂಭಾಭಿಷೇಕ ಸಮಿತಿಯ ಏಕನಾಥ್ ಪ್ರಭು , ನರಹರಿ ಪ್ರಭು, ಸುಬ್ಬಣ್ಣ ಪ್ರಭು , ರಾಮದಾಸ್ ಕಾಮತ , ಎಂ. ಜಗನ್ನಾಥ್ ಕಾಮತ್, ಬೆಂಗಳೂರಿನ ಉದ್ಯಮಿ ರವಿಶಂಕರ್ ಪ್ರಭು ಮತ್ತು ದೇವಳದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಕುಂಭಾಭಿಷೇಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರ ಭಜನೆ / ಸಂಕೀರ್ತನೆ ಸಾಂಸ್ಕ್ರತಿಕ ವೇದಿಕೆಯಲ್ಲಿ ನಡೆಯಿತು. ಊರ ಪರವೂರ ಸಹಸ್ರಾರು ಸಮಾಜಭಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. (ಚಿತ್ರ: ಮಂಜು ನೀರೇಶ್ವಾಲ್ಯ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications